ನಿದ್ದೆಗೆಡಿಸಿದ ಬಂಡಾಯ ಸ್ಪರ್ಧಿಗಳು

ನಗರಸಭೆ ಚುನಾವಣೆಗೆ ಟಿಕೆಟ್ ಸಿಗದೆ ಬಂಡಾಯ • ಎಲ್ಲಾ ಪಕ್ಷಗಳಲ್ಲೂ ಇದೇ ಪರಿಸ್ಥಿತಿ

Team Udayavani, May 29, 2019, 1:25 PM IST

mysuru-tdy-2..

ನಂಜನಗೂಡು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಂಸದ ಆರ್‌. ಧ್ರುವನಾರಾಯಣ ಪ್ರಚಾರ ನಡೆಸಿದರು.

ನಂಜನಗೂಡು: ಇಲ್ಲಿನ ನಗರಸಭೆ 31 ವಾರ್ಡುಗಳಿಗೆ 134 ಮಂದಿ ಸ್ಪರ್ಧಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದರೆ ಹಲವಡೆ ಬಿಜೆಪಿ – ಕಾಂಗ್ರೆಸ್‌ ಬಂಡಾಯ ಗಾರರು ಅಧಿಕೃತ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

ಶಾಸಕರು ಸಂಸದರ ಬೆಂಬಲದೊಂದಿಗೆ ನಗರಸಭೆಯ 2 ದಶಕಗಳ ಅತಂತ್ರ ಹೋಗಲಾಡಿಸಿ ಅಧಿಕಾರ ಕಬಳಿಸಲು ಬಿಜೆಪಿ ಹಾತೊರೆಯುತ್ತಿದ್ದರೆ ಶಾಸಕರು ಹಾಗೂ ಪಕ್ಷದ ಸ್ಥಳಿಯ ಮುಖಂಡರ ನಡುನ ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ವರೆಗಿನ ಗೊಂದಲವನ್ನೇ ಅಧಿಕಾರ ಹಿಡಿಯುವ ಏಣಿಯಾಗಿಸಿಕೊಳ್ಳಲು ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಅವರ ನೇತೃತ್ವದ ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. ಕಾಂಗ್ರೆಸ್‌ -ಬಿಜೆಪಿಯ ಅಧಿಕಾರದ ಹಣಾಹಣಿಯಲ್ಲಿ ಅತಂತ್ರ ಸೃಷ್ಟಿಯಾಗಿ ತಮಗೊಂದಿಷ್ಟು ಪಾಲು ಯಾರಿಂದ ಸಿಕ್ಕೀತು ಎನ್ನುವ ಆಸೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್‌. ಮಹದೇವಸ್ವಾ ಅವರದ್ದಾಗಿದೆ.

ಕಾಂಗ್ರೆಸ್‌ – ಬಿಜೆಪಿ ಟಿಕೆಟ್ ವಂಚಿತರು ಹಲವಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲನ್ನೇ ಗುರಿಯಾಗಿಸಿಕೊಂಡು ಗುಪ್ತ ಹೋರಾಟ ಕೈ ಹಾಕಿದ್ದಾರೆ. ಆದರೆ, ಗೆಲವು ಯಾರಿಗೆ ಎಂಬುದನ್ನು ನಂಜನಗೂಡಿನ 42 ಸಾವಿರಕ್ಕೂ ಹೆಚ್ಚು ಮತದಾರರು ಬುಧವಾರ ತೀರ್ಮಾನಿಸಲಿದ್ದಾರೆ.

ಗುಂಪುಗಾರಿಕೆ ಕಾಂಗ್ರೆಸ್‌: ಕೈ ಪಕ್ಷದಲ್ಲೂ ಗುಂಪುಗಾರಿಕೆ ಇದ್ದು ಸ್ಥಳೀಯರಿಗಿಂತ ರಾಜ್ಯ ಮಟ್ಟದ ನಾಯಕರಲ್ಲಿನ ಅಸಮಾ ಧಾನದ ಬಿಸಿ ತಾಗುತ್ತಿದೆ. 27 ವಾರ್ಡುಗಳಿಗೂ ಅಭ್ಯರ್ಥಿ ಇಲ್ಲದ ಜನತಾ ದಳದಿಂದಲೂ ಅಲ್ಲಲ್ಲಿ ಬಂಡಾಯ ರಾಜಕಾರಣವಿದ್ದು ಅಷ್ಟೇನು ಪ್ರಭಾವ ಬೀರಲಾರದು ಎಂದು ತಿಳಿದು ಬಂದಿದೆ

ಎಚ್ಸಿಎಂ ರಂಗ ಪ್ರವೇಶ: ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಕೇಶವ ಮೂರ್ತಿ ಅವರ ವಿರುದ್ಧ ಅಸಮಾ ಧಾನದಿಂದ ಕುದಿಯುತ್ತಿರುವ ಲೋಕೋಪ ಯೋಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಈಗ ನಂಜನಗೂಡಿನ ನಗರಸಭಾ ಚುನಾವಣೆಗೆ ರಂಗ ಪ್ರವೇಶ ಮಾಡಿದ್ದಾರೆ.

ಭಾನುವಾರ ನಂಜನಗೂಡಿಗೆ ಆಗಮಿಸಿ ಎಲ್ಲಾ 31 ಅಭ್ಯರ್ಥಿಗಳ ಸಭೆ ನಡೆಸಿದ್ದೂ ಅಲ್ಲದೆ ಅವರನ್ನೆಲ್ಲಾ ಆರ್ಥಿಕವಾಗಿ ಹುರಿ ದುಂಬಿಸಿ ವಾಪಸಾಗಿರುವುದು ತಾಲೂಕು ಕಾಂಗ್ರೆಸ್‌ ಅನ್ನು ಮುಂದಿನ ರಾಜಕಾರಣದ ದಿಕ್ಸೂಚಿಯಾಗಿದೆ ಎನ್ನಲಾಗಿದೆ.

ಬಿಜೆಪಿ ಪಾಲಿಗೆ ಹೆಚ್ಚು ಮಹತ್ವ ಪಡೆದಿದೆ‌:

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚು ಮತಗಳು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ ಅವರ ಪಾಲಿಗೆ ಅತ್ಯಂತ ಮಹತ್ತರವಾದ ಚುನಾವಣೆ ಇದಾಗಿದೆ. ಟಿಕೆಟ್ ಹಂಚಿಕೆಯಲ್ಲಿನ ಸ್ಥಳೀಯ ಅಸಮಾಧಾನ ಬಿಜೆಪಿಯ ಗೆಲುವಿಗೆ ಅನೇಕ ವಾರ್ಡುಗಳಲ್ಲಿ ಮುಳ್ಳಾಗಲಿದೆ ಎನ್ನಲಾಗುತ್ತಿದೆ. ಮೊದಲೇ ಹತ್ತಾರು ಬಣಗಳಾಗಿದ್ದ ನಂಜನಗೂಡು ಬಿಜೆಪಿ ಶ್ರೀನಿವಾಸ ಪ್ರಸಾದರಿಂದ ಒಂದಾಗಿ ಕಾಣುತ್ತಿದ್ದರೂ ಒಳಗೊಳಗೆ ಒಬ್ಬರ ವಿರುದ್ಧ ಇನ್ನೊಬ್ಬರ ಮಸಲತ್ತು ಚಾಳಿ ಈಗಲೂ ನಡೆಯುತ್ತಿದೆ.
● ಶ್ರೀಧರ ಆರ್‌.ಭಟ್

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.