ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆ ಬಿದ್ದೀತು ಜೋಕೆ!

ಶಾಲಾ ಕೊಠಡಿಗಳಲ್ಲಿ ಬಿರುಕು ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ

Team Udayavani, May 30, 2019, 9:48 AM IST

30-May-3

ನಾಲತವಾಡ: ಶಿವಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಸಿದ ಕೊಠಡಿ ಛಾವಣಿ.

ನಾಲತವಾಡ: ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿ ನಿರ್ಮಿಸಲಾದ ತಾಳಿಕೋಟೆ ಸಮೀಪದ ಶಿವಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು ಇಂದು ನಾಳೆಯೋ ಕುಸಿಯುವಂತಿದೆ.

ಈಚೆಗೆ 15 ವರ್ಷಗಳಿಂದಷ್ಟೇ ಕಬ್ಬಿಣದ ಕಾಲಂಗಳನ್ನು ನಿರ್ಮಿಸದೇ 7 ಕೊಠಡಿಗಳನ್ನು ಮನಸೋ ಇಚ್ಚೆಯಿಂದ ನಿರ್ಮಿಸಿ ಕೈ ತೊಳೆದುಕೊಂಡಿದ್ದರಿಂದ ಶಾಲೆ ಸುತ್ತಲೂ ಬಿರುಕು ಕಾಣಿಸಿಕೊಂಡಿದೆ. ಕೊಠಡಿಗಳಲ್ಲಿ ಭಾರಿ ಪ್ರಮಾಣ ಬಿರುಕು ಬಿಟ್ಟಿವೆ. ಶಾಲೆಯಲ್ಲಿ 290ಕ್ಕೂ ಹೆಚ್ಚು ಮಕ್ಕಳು ಹಾಗೂ 9 ಶಿಕ್ಷಕರಲ್ಲಿ ಶಾಲೆ ದುಸ್ಥಿತಿ ಜೀವ ಭಯ ಹುಟ್ಟಿಸಿದೆ.

ಬಯಲಲ್ಲೇ ಪಾಠ: ಈಗಲೋ ಆಗಲೋ ಕುಸಿಯುವ ಕೊಠಡಿಗಳ ದುಸ್ಥಿತಿ ಶಿಕ್ಷಕರಲ್ಲಿ ಭೀತಿ ಹುಟ್ಟಿಸಿದ ಕಾರಣ ಸಿಕ್ಕ ಸ್ಥಳದಲ್ಲೇ ನಿತ್ಯ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು ಉತ್ತಮ ವಾತಾವರಣ ಮಾತ್ರ ಮಕ್ಕಳಿಗೆ ಸಿಗುತ್ತಿಲ್ಲ.

ಕಳಪೆ ಹಾಗೂ ನೀರು ನಿರ್ವಹಣೆ ಮಾಡದೇ ಹಾಗೂ ಭದ್ರ ಬುನಾದಿ ಹಾಕದೇ ತರಾತುರಿಯಲ್ಲಿ ನಿರ್ಮಿಸಿದ ಕೊಠಡಿಗಳ ಪೈಕಿ ಕಳೆದ ಒಂದು ವರ್ಷದ ಹಿಂದಷ್ಟೇ ಶಾಲೆ ಕೊನೆಯ ಕೊಠಡಿ ಛಾವಣಿಯೊಂದು ಏಕಾ ಏಕಿ ಕುಸಿಯಿತು. ಕುಸಿದ ಕೊಠಡಿಯ ಪಕ್ಕದ ಕೊಠಡಿಯಲ್ಲಿಯೇ ಮಕ್ಕಳ ಪಾಠ ಬೋಧನೆ ನಡೆದಿತ್ತು. ಕುಸಿದ ಕೊಠಡಿಯಲ್ಲಿ ಅಂದು ಯಾವ ಮಕ್ಕಳು ಇರಲಿಲ್ಲ, ಒಂದು ವೇಳೆ ಅವಘಡದ ಕೊಠಡಿಯಲ್ಲಿಯೇ ಪಾಠ ಚಟುವಟಿಕೆಗಳು ನಡೆದಿದ್ದೇಯಾದಲ್ಲಿ ವಿದ್ಯಾರ್ಥಿಗಳ ಪ್ರಾಣ ಹೋಗುತ್ತಿತ್ತು.

ತೆರವುಗೊಳಿಸಿಲ್ಲ: ಸದ್ಯ ಕುಸಿದ ಕೊಠಡಿ ಕಾಲಂ ಒಂದರ ಆಸರೆಯಲ್ಲಿ ನಿಂತಿದ್ದು, ಕೊಠಡಿ ಕುಸಿದು ಒಂದು ವರ್ಷ ಕಳೆದರೂ ಶಾಲೆ ಮುಖ್ಯಸ್ಥರು ಈವರೆಗೂ ಕಲ್ಲು ಕಬ್ಬಿಣದ ತುಕುಡಿಗಳನ್ನು ತೆರವುಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಕುಸಿದ ಕೊಠಡಿಯನ್ನು ಸಂಪೂರ್ಣ ತೆರವುಗೊಳಿಸದೇ ಹೋದಲ್ಲಿ ಪಕ್ಕದ ಕೊಠಡಿಗೂ ಧಕ್ಕೆ ಉಂಟಾಗುವ ಲಕ್ಷಣಗಳಿವೆ.

ಶಾಲೆ ಮುಂಬಾಗದಲ್ಲಿ ನಿರ್ಮಿಸಲಾದ ಮುಖ್ಯಗುರುಗಳ ಕೊಠಡಿಯೂ ಸಹ ಕಳಪೆ ಮಟ್ಟದಲ್ಲಿ ನಿರ್ಮಿಸಿದ್ದು ಸುತ್ತಲೂ ಬಿರುಕುಗೊಂಡಿದೆ. ತಳ ಮಟ್ಟದಲ್ಲೂ ಬಿರುಕು ಕಾಣಿಸಿಕೊಂಡಿದ್ದು ಈಗಲೋ ಆಗಲೋ ಕುಸಿಯುವ ಸ್ಥಿತಿ ತಲುಪಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಶಿವಪುರ ಶಾಲೆ ಕೊಠಡಿಯ ಛಾವಣಿ ಕುಸಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕಳಪೆ ಕಾಮಗಾರಿಯಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಸದ್ಯ ಕೊಠಡಿ ಮತ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಆದೇಶಿಸುತ್ತೇನೆ.
ಎಸ್‌.ಡಿ. ಗಾಂಜಿ,
ಬಿಇಒ, ಮುದ್ದೇಬಿಹಾಳ

ಶಾಲೆ ದುಸ್ಥಿತಿ ಮನಗಂಡು ಬಿಇಒ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಗೆ ಮತ್ತೆರಡು ಕೊಠಡಿಗಳ ಮಂಜೂರಾತಿ ದೊರಕಿದೆ. ಇನ್ನು ಕೆಲ ದಿನಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತದೆ. ಶಿಥಿಲ ಕೊಠಡಿಗಳಲ್ಲಿ ಪಾಠ ಮಾಡದಂತೆ ಸೂಚಿಸಿದ್ದೇವೆ.
ಗಜಾನನ ಸೋನಾರ್‌, ಸಿಆರ್‌ಪಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.