ಪ್ರಧಾನಿ ಕಾರ್ಯಕ್ರಮದ ಬಳಿಕದ ರಶ್ನಲ್ಲಿ ಸಿಲುಕಿದ ಆಶಾ ಭೋಂಸ್ಲೆ; ಇರಾನಿ ನೆರವು
Team Udayavani, May 31, 2019, 12:03 PM IST
ಹೊಸದಿಲ್ಲಿ : ನಿನ್ನೆ ಗುರುವಾರ ರಾಷ್ಟ್ರಪತಿ ಭವನದಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದಿ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಕಾರ್ಯಕ್ರಮ ಬಳಿಕ ಉಂಟಾದ ರಶ್ನಲ್ಲಿ ಸಿಲುಕಿದ್ದರು.
ಆಗ ಒಡನೆಯೇ ಧಾವಿಸಿ ಬಂದು ತನ್ನನ್ನು ಪಾರು ಗೊಳಿಸಿದ್ದ ಬಿಜೆಪಿ ಸಂಸದೆ ಸ್ಮತಿ ಇರಾನಿ ಅವರನ್ನು ಆಶಾ ಭೋಂಸ್ಲೆ ಬಹುವಾಗಿ ಕೊಂಡಾಡಿದ್ದಾರೆ.
“ಪಿಎಂ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿಕದ ಹುಚ್ಚು ರಶ್ ನಲ್ಲಿ ನಾನು ಸಿಲುಕಿಕೊಂಡಿದ್ದೆ. ಯಾರೂ ನನ್ನ ನೆರವಿಗೆ ಬರಲಿಲ್ಲ. ಆಗ ಸ್ಮತಿ ಇರಾನಿ ಅವರು ನನ್ನನ್ನು ಗುರುತಿಸಿ ಸಂಕಷ್ಟದಲ್ಲಿದ್ದ ನನ್ನನ್ನು ಸುರಕ್ಷಿತವಾಗಿ ಹೊರ ತಂದು ಮನೆ ತಲುಪಂತೆ ಮಾಡಿದರು. ನಿಜಕ್ಕೂ ಆಕೆಯ ಸ್ನೇಹ, ಕಳಕಳಿ, ಕಷ್ಟದಲ್ಲಿರುವವರಿಗೆ ನೆರವಾಗುವ ಪರಿ ಎಲ್ಲವೂ ಅಭಿನಂದನೀಯ; ಅದಕ್ಕಾಗಿಯೇ ಆಕೆ ಚುನಾವಣೆಯಲ್ಲಿ ಜಯ ಸಾಧಿಸಿರುವುದು’ ಎಂದು ಆಶಾ ಭೋಂಸ್ಲೆ ಕೃತಜ್ಞತೆ ಹೇಳಿದ್ದಾರೆ.
ಈಚೆಗೆ ಅಮೇಥಿ ಕ್ಷೇತ್ರದಲ್ಲಿ ಕೊಲೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯಯಲ್ಲಿ ಭಾಗವಹಿಸಿ ಆತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಇರಾನಿ ಅವರ ಫೋಟೋ ವೈರಲ್ ಆಗಿತ್ತಲ್ಲದೆ ಆಕೆಯ ಸದ್ಭಾವನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.