ಇಂದು ಮೂರನೇ ಬಾರಿ RBI ಬಡ್ಡಿದರ ಕಡಿತದ ನಿರೀಕ್ಷೆ; ಸೆನ್ಸೆಕ್ಸ್, ನಿಫ್ಟಿ ಎಚ್ಚರಿಕೆಯ ನಡೆ
Team Udayavani, Jun 6, 2019, 11:01 AM IST
ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಗುರುವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆ ವರದಿಯನ್ನು ಪ್ರಕಟಿಸಲಿರುವ ಕಾರಣ ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಹಿನ್ನಡೆಗೆ ಗುರಿಯಾಯಿತು.
ಕಳೆದ ಎರಡು ಬಾರಿಯ ಹಣಕಾಸು ನೀತಿಯಲ್ಲಿ ಆರ್ಬಿಐ ತಲಾ ಶೇ.0.25ರ ರಿಪೋ ಬಡ್ಡಿ ದರವನ್ನು ಇಳಿಸಿತ್ತು. ಈಗ ಮೂರನೇ ಬಾರಿಗೆ ಅದು ಶೇ.0.25ರ ಪ್ರಮಾಣದಲ್ಲಿ ಬಡ್ಡಿ ದರ ಇಳೀಸೀತು ಎಂಬ ವಿಶ್ವಾಸ ಶೇರು ಮಾರುಕಟ್ಟೆಯಲ್ಲಿ ಇದೆ.
ಈಚೆಗೆ ಪ್ರಕಟಗೊಂಡಿರುವ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ನಿರಾಶಾದಾಯಕವಾಗಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬೇಕಾದ ಅಗತ್ಯವನ್ನು ಮನಗಂಡು ಆರ್ಬಿಐ ಈ ಬಾರಿಯೂ ಶೇ.0.25ರ ಪ್ರಮಾಣದಲ್ಲಿ ರಿಪೋ ಬಡ್ಡಿ ದರ ಇಳಿಸುವುದೆಂಬ ಆಶಯ ಶೇರು ಮಾರುಕಟ್ಟೆಯಲ್ಲಿದೆ.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 140.83 ಅಂಕಗಳ ನಷ್ಟದೊಂದಿಗೆ 39,942.71 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 63 ಅಂಕಗಳ ನಷ್ಟದೊಂದಿಗೆ 11,958.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಲೂಸರ್ಗಳಾದ ಎಸ್ ಬ್ಯಾಂಕ್, ಎಸ್ಬಿಐ, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್ಟೆಲ್, ವೇದಾಂತ, ಐಸಿಐಸಿಐ ಬ್ಯಾಂಕ್, ಆರ್ಐಎಲ್, ಮಹೀಂದ್ರ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಶೇ.2.91ರ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಪವರ್ ಗ್ರಿಡ್, ಬಜಾಜ್ ಆಟೋ, ಎಚ್ಯುಎಲ್, ಕೋಲ್ ಇಂಡಿಯಾ, ಏಶ್ಯನ್ ಪೇಂಟ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಸಿ ಎಲ್ ಟೆಕ್ ಶೇರುಗಳು ಗಳಿಕೆಯೊಂದಿಗೆ ವ್ಯವಹಾರ ನಿರತವಾಗಿದ್ದವು. ನಿನ್ನೆ ಬುಧವಾರ ಶೇರು ಮಾರುಕಟ್ಟೆಗೆ ಈದ್ ಉಲ್ ಫಿತ್ರ ಪ್ರಯುಕ್ತ ರಜೆ ಇತ್ತು.
ಇಂದು ಡಾಲರ್ ಎದುರು ರೂಪಾಯಿಗ 13 ಪೈಸೆಗಳ ಇಳಿಕೆಯನ್ನು ಕಂಡು 69.39 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾತೈಲ ಶೇ.0.23ರ ಏರಿಕೆಯೊಂದಿಗೆ ಬ್ಯಾರಲ್ ಗೆ 60.77 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ