ನೋಟಿಸ್ಗೆ ಹೆದರಿ ರೈತ ನೇಣಿಗೆ ಶರಣು
Team Udayavani, Jun 8, 2019, 3:00 AM IST
ಜಮಖಂಡಿ: ರೈತರ ಸಾಲಮನ್ನಾಕ್ಕೆ ಬದ್ಧ ಎಂದು ಸರ್ಕಾರ ಹೇಳುತ್ತಿರುವಾಗಲೇ ಬರ ಮತ್ತು ಬೆಳೆ ಹಾನಿಯಿಂದ ನೊಂದಿದ್ದ ರೈತ ಸಾಲ ವಸೂಲಿಗಾಗಿ ಜಮಖಂಡಿಯ ಅರ್ಬನ್ ಬ್ಯಾಂಕ್ ನೀಡಿದ ನೋಟಿಸ್ಗೆ ಹೆದರಿ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ನಿವಾಸಿ ಧರೆಪ್ಪ ಹಣಮಂತಪ್ಪ ಬೆನಕನ್ನವರ (60) ಆತ್ಮಹತ್ಯೆ ಮಾಡಿಕೊಂಡವರು.
20 ಗುಂಟೆ ಜಮೀನು ಹೊಂದಿದ್ದು, ಜಮಖಂಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 35 ಸಾವಿರ ರೂ. ಮತ್ತು ಜಮಖಂಡಿಯ ಅರ್ಬನ್ ಬ್ಯಾಂಕ್ನಲ್ಲಿ 6 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಆದರೆ, ಬ್ಯಾಂಕ್ ನೋಟಿಸ್ ನೀಡಿದ್ದರಿಂದ ಗಾಬರಿಗೊಂಡ ಧರೆಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಪುತ್ರ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್