ನಾಪತ್ತೆಯಾಗಿದ್ದ ಸೇನಾ ವಿಮಾನದ ಅವಶೇಷ ಪತ್ತೆ


Team Udayavani, Jun 12, 2019, 6:05 AM IST

IAF-Avashesha-12-6

ಹೊಸದಿಲ್ಲಿ: ಎಂಟು ದಿನಗಳ ಹಿಂದೆ ಅಸ್ಸಾಂನ ಜೋರ್ಹಟ್ನಿಂದ ನಾಪತ್ತೆಯಾಗಿದ್ದ ವಾಯುಪಡೆಯ ಎಎನ್‌-32 ವಿಮಾನದ ಅವಶೇಷಗಳು ಮಂಗಳವಾರ ಪತ್ತೆಯಾಗಿವೆ. ಅರುಣಾಚಲ ಪ್ರದೇಶದ ಲಿಪೋದಿಂದ 16 ಕಿ.ಮೀ. ದೂರದ ಸ್ಥಳದಲ್ಲಿ ಅವುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಲಿಪೋದ ಉತ್ತರ ಭಾಗದಲ್ಲಿ ಅವಶೇಷಗಳು ಬಿದ್ದಿರುವುದಾಗಿ ದಿಲ್ಲಿಯಲ್ಲಿ ಭಾರತೀಯ ವಾಯುಪಡೆ ತಿಳಿಸಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಜೀವಂತವಾಗಿ ಇದ್ದಾರೆಯೋ ಇಲ್ಲವೋ ಎಂಬ ಬಗ್ಗೆ ಇನ್ನೂ ಶೋಧ ನಡೆಯುತ್ತಿದೆ ಎಂದು ಹೇಳಿದೆ. ಐಎಎಫ್ನಲ್ಲಿರುವ ರಷ್ಯಾ ನಿರ್ಮಿತ ಎಎನ್‌-32 ವಿಮಾನ ಜೂ.3ರಂದು ಅಸ್ಸಾಂನ ಜೋರ್ಹಟ್ನಿಂದ ಯಾನ ಆರಂಭಿಸಿದ ಕೆಲವೇ ಸಮಯದಲ್ಲಿ ನಾಪತ್ತೆಯಾಗಿತ್ತು.

ಪತಿ ಪೈಲಟ್, ಪತ್ನಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌

ಎಎನ್‌ 32 ವಿಮಾನದ ಪೈಲಟ್ ಆಶಿಶ್‌ ತನ್ವಾರ್‌ (29), ಅವರ ಪತ್ನಿ ಸಂಧ್ಯಾ ಅದೇ ಕೇಂದ್ರದಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಆಗಿದ್ದರು. ವಿಮಾನ ಜೋರ್ಹಟ್ನಿಂದ ಟೇಕ್‌ ಆಫ್ ಆದ ಕೆಲವೇ ಸಮಯದಲ್ಲಿ (12.25ಕ್ಕೆ) ರಾಡಾರ್‌ ಸಿಗ್ನಲ್ಗಳು ಕಡಿತಗೊಂಡಿತ್ತು. ತನ್ನ ಪತಿ ಪ್ರಯಾಣಿಸುತ್ತಿದ್ದ ವಿಮಾನ ಕಾಣೆಯಾಗುತ್ತಿರುವುದನ್ನು ಬಹಳ ಹತ್ತಿರದಿಂದ ಕಂಡಿದ್ದ ಆವರಿಗೆ ದುರ್ಘ‌ಟನೆ ಆ ಕ್ಷಣದಿಂದಲೇ ಅರಿವಾಗಿತ್ತು. ಜೂ.3ರ ಘಟನೆಯ ಆಘಾತದಿಂದ ಸಂಧ್ಯಾ ಇನ್ನೂ ಹೊರಬಂದಿಲ್ಲ.

ಅಸ್ಸಾಂಗೆ ತೆರಳಿದ್ದ ತಂದೆ
ಆಶಿಶ್‌ ತನ್ವಾರ್‌ ಅವರ ತಂದೆ ರಾಧೇಲಾ ಅವರು ಮಾಜಿ ಸೈನಿಕ. ತಮ್ಮ ಪುತ್ರನ ಕುರಿತು ತಿಳಿದುಕೊಳ್ಳುವ ಸಲುವಾಗಿ ಹರಿಯಾಣದಿಂದ ಅಸ್ಸಾಂಗೆ ತೆರಳಿ ಅಲ್ಲಿಯೇ ನಿಂತಿದ್ದರು.

ತರಬೇತಿ ಸಂದರ್ಭ ಪರಿಚಯವಾಗಿದ್ದ ಸಂಧ್ಯಾ
ಪೈಲಟ್ ತರಬೇತಿ ವೇಳೆ ಆಶಿಶ್‌ಗೆ ಸಂಧ್ಯಾ ಅವರ ಪರಿಚಯವಾಗಿತ್ತು. 2018ರ ಫೆಬ್ರವರಿಯಲ್ಲಿ ಸಂಧ್ಯಾ ಅವರನ್ನು ವಿವಾಹವಾಗಿದ್ದರು. ವಿವಾಹವಾದ ಬಳಿಕ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಭಾಗ್ಯ ಒದಗಿತ್ತು.

ಎಂಎನ್‌ಸಿ ಕಂಪನಿ ತೊರೆದು ಸೇನೆಗೆ
ಆಶಿಶ್‌ ಕಾನ್ಪುರದಲ್ಲಿ ಬಿ.ಟೆಕ್‌. ಪದವಿ ಪೂರೈಸಿ ಎಂಎನ್‌ಸಿ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2013ರ ಡಿಸೆಂಬರ್‌ನಲ್ಲಿ ತನ್ವಾರ್‌ ಭಾರತೀಯ ವಾಯುಸೇನೆ ಸೇರಿದ್ದರು.

ವಾರದಲ್ಲಿ ಮನೆಗೆ ಬರಲಿದ್ದರು
ಹರಿಯಾಣದ ಹುಡಾ ಸೆಕ್ಟರ್‌ 2ರ ಸಮೀಪದ ಪಲ್ವಾಲ್ನಲ್ಲಿ ಅಶಿಶ್‌ ತನ್ವಾರ್‌ ಅವರ ಕುಟುಂಬ ಇದೆ. ಒಂದು ತಿಂಗಳ ಹಿಂದೆಯಷ್ಟೇ ಪತ್ನಿಯ ಜತೆ ಆಶಿಶ್‌ ತಮ್ಮ ತಾಯಿ ಮನೆಗೆ ಬಂದಿದ್ದರು. ಬಳಿಕ ಒಂದು ವಾರದ ಪ್ರವಾಸಕ್ಕಾಗಿ ಥಾೖಲೆಂಡ್‌ಗೆ ತೆರಳಿದ್ದರು. ಪ್ರವಾಸ ಮುಗಿಸಿ ನೇರವಾಗಿ ಕರ್ತವ್ಯಕ್ಕೆ ಮರಳಿದ್ದರು. ಮುಂದಿನ ವಾರ ಪತ್ನಿ ಸಹಿತ ಮನೆಗೆ ಬರುವುದಾಗಿ ತಾಯಿ ಸರೋಜಾ ಅವರಿಗೆ ಆಶಿಶ್‌ ತಿಳಿಸಿದ್ದರು.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.