ಬಂತು ಮೊದಲ ಕಂತು; ಇನ್ನೂ ಬರಬೇಕಿದೆ ಬಹುಪಾಲು!
Team Udayavani, Jun 12, 2019, 11:49 AM IST
ಶಿರಸಿ: ಸಾಲ ಮನ್ನಾ ಎಂದು ಬಜೆಟ್ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರದ ಬಜೆಟ್ನ ಮೊದಲ ಕಂತಿನ ಹಣ ಬಂದಿದೆ.
ಲೋಕಸಭಾ ಚುನಾವಣೆ ಬಳಿಕ ಬಿಡುಗಡೆಗೊಂಡಿದೆ ಎನ್ನಲಾದ ಸಾಲ ಮನ್ನಾ ಬಾಪ್ತಿನಲ್ಲಿ ಈಗಾಗಲೇ 40 ಸಾವಿರದಷ್ಟು ರೈತರ ಖಾತೆಗೆ ನೇರ ಜಮಾಗೊಂಡಿದೆ. ಒಂದು ಲಕ್ಷ ರೂ. ಒಳಗೆ ಬೆಳೆಸಾಲ ಪಡೆದಿದ್ದ ಚಿಕ್ಕ ಹಾಗೂ ಅತಿ ಚಿಕ್ಕ ರೈತರ ಉಳಿತಾಯ ಖಾತೆಗೆ ಪ್ರಥಮ ಕಂತಿನ ಹಣ ಪಾವತಿಸಲಾಗಿದೆ. ಆದರೆ, ಒಂದು ಲಕ್ಷಕ್ಕಿಂತ ಅಧಿಕ ಮೊತ್ತ ಇರುವ ಅಥವಾ ಸಾಲಮನ್ನಾ ಮಾನದಂಡದ ವ್ಯಾಪ್ತಿಗೆ ಬಾರದೇ ಇರುವ ರೈತರ ಖಾತೆಗೆ ಜಮಾ ಆಗಿಲ್ಲ. ಮಾರ್ಚ್, ಏಪ್ರಿಲ್ ವೇಳೆ ಸಾಲ ಮನ್ನಾ ಪಾವತಿ ಮಾಡಿದ್ದ, ಮಾಡದ ರೈತರ ಖಾತೆಗೆ ಹಣ ಬಂದಿದೆ.
ರೈತರನ್ನು ಸಾಲದಿಂದ ಋಣಮುಕ್ತಗೊಳಿಸುವ ಯೋಜನೆಯಡಿ ಕಳೆದ ವಿಧಾನಸಭಾ ಚುನಾವಣಾ ಪೂರ್ವದ ಘೋಷಣೆಯನ್ನು ಸಿಎಂ ಕುಮಾರಸ್ವಾಮಿ ಬಜೆಟ್ನಲ್ಲಿ ಆಡಿದಂತೆ ಈಗ ಅದರ ಪ್ರಕ್ರಿಯೆ ಶುರು ಮಾಡಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಸರ್ಕಾರದಿಂದಲೇ ಪಾವತಿ ಆಗುತ್ತಿದೆ.
175 ಕೋಟಿ ರೂ!: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಮೂಲಕ ರೈತರಿಗೆ ಸಾಲ ವಿತರಿಸಲಾಗಿತ್ತು. ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಬೆಳೆಸಾಲವನ್ನು ಏಪ್ರಿಲ್ 15, ಏಪ್ರಿಲ್ 31ರೊಳಗೆ ವಿತರಿಸಲಾಗಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜಗಲಪೇಟೆ ಸೊಸೈಟಿಗಳಿಗೆ ಮಾತ್ರ ಮೇ 31ರ ಬೆಳ ಸಾಲ ಮರು ಪಾವತಿ ಅಖೈರು ದಿನವಾಗಿತ್ತು.
ಇದೀಗ ಪ್ರಥಮ ಹಂತವಾಗಿ ಕೆಡಿಸಿಸಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ ಬೆಳೆಗಾರರಿಗೆ ನೇರವಾಗಿ 175 ಕೋ.ರೂ. ಹಂಚಿಕೆಯಾಗಿದೆ. ಕೆಲವು ರೈತರು ಹಣ ಮರು ಪಾವತಿಸದೇ ಇದ್ದವರ ಖಾತೆಯಿಂದ ಸರ್ಕಾರ ಹಣ ವರ್ಗಾವಣೆ ಮಾಡಿಕೊಳ್ಳಲು ಸೂಚಿಸಿದೆ. ಈ ಮೂಲಕ ಸರ್ಕಾರ ರೈತರನ್ನು ಋಣಮುಕ್ತಗೊಳಿಸಲು ಮುಂದಾಗಿದೆ.
ಬರಬೇಕಿದೆ ಇನ್ನೂ: ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಬೆಳೆಸಾಲ ಪಡೆದ ರೈತರ ಸಂಖ್ಯೆ 86,815. ಕೆಡಿಸಿಸಿ ಬ್ಯಾಂಕ್ ಮೂಲಕ ಇಷ್ಟು ರೈತರಿಗೆ ಗರಿಷ್ಠ 3 ಲಕ್ಷ ರೂ. ತನಕ 700 ಕೋಟಿ ರೂ.ಗಳಷ್ಟು ಬೆಳೆ ಸಾಲ ವಿತರಿಸಲಾಗಿತ್ತು.
ಈಗ ಬಂದಿರುವ ಹಣದ ಮೊತ್ತ ಕೇವಲ 175 ಕೋ.ರೂ. ಲಕ್ಷದೊಳಗೆ ಸಾಲ ಪಡೆದ ಸುಮಾರು 40 ಸಾವಿರ ರೈತರಿಗೆ. ಇನ್ನುಳಿದ ಮೊತ್ತ ಹಾಗೂ 46 ಸಾವಿರ ರೈತರಿಗೆ ಹಣ ಬರಬೇಕಿದೆ.
ರೈತರು ಬೆಳೆ ಸಾಲ ಪಡೆದ ಮಾಸದಂತೆ ಸಾಲ ಮನ್ನಾ ಹಣ ಕೂಡ ಬರಬೇಕಿದೆ. ನಿರೀಕ್ಷೆ ಪ್ರಕಾರ ನಡೆದರೆ ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದಾಗಿದೆ ಎನ್ನುತ್ತದೆ ಉನ್ನತ ಮೂಲವೊಂದು.
ದೃಢೀಕರಣಗೊಳ್ಳಬೇಕು: ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಸಾಲ ಪಡೆದವರು ಮರು ಪಾವತಿಯನ್ನು ಉಳಿಕೆ ಹಣ ಮಾಡಿದ್ದರೆ ಅದು ದೃಢೀಕರಣದ ಬಳಿಕ ಉಳಿದ ಹಣ ಬರಲಿದೆ. ತಾಲೂಕು ಕಂದಾಯ ಅಧಿಕಾರಿಗಳಿಂದ ದೃಢೀಕರಣಗೊಳಿಸಿ ಬರಬೇಕಿದೆ. ಈ ಪೈಕಿ 9800 ಅರ್ಜಿಗಳ ದೃಢೀಕರಣದಲ್ಲಿ 1100 ಅರ್ಜಿಗಳು ಇನ್ನೂ ಪೂರ್ಣವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ