ಮಳೆಗಾಲ: ಇನ್ನು ಕರೆಂಟು ಇರೋದೆ ಡೌಟು!

ಧರಾಶಾಯಿಯಾಗುವ ಮರದ ಕೊಂಬೆಗಳು: ಗ್ರಾಮೀಣ ಬದುಕು ದುಸ್ತರ

Team Udayavani, Jun 14, 2019, 5:00 AM IST

u-40

ಸುಬ್ರಹ್ಮಣ್ಯ: ಮಳೆ ಆರಂಭವಾಗಿದೆ. ವಿದ್ಯುತ್‌ ಕೂಡ ಕೈ ಕೊಡಲಾರಂಭಿಸಿದೆ. ಕೃಷಿಕರಿಗೆ ಬೇಸಗೆಯಲ್ಲಿ ಲೋ ವೋಲ್ಟೆಜ್‌, ಮಳೆಗಾಲ ಶುರುವಾದರೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯ ಯದ ಸಮಸ್ಯೆ. ಗ್ರಾಮೀಣ ಜನರಿಗೆ ಇನ್ನು ಕರೆಂಟಿನದ್ದೇ ಚಿಂತೆ. ಮಳೆ ತನ್ನ ಪ್ರಲಾಪ ತೋರಿಸಲು ಇನ್ನೂ ಬಾಕಿ ಇದೆ. ಈಗಲೇ ವಿದ್ಯುತ್‌ ಸಮಸ್ಯೆ ಬಿಗಡಾ ಯಿಸಿದೆ. ಮಾನ್ಸೂನ್‌ ಪೂರ್ವದಲ್ಲಿ ಮಳೆಗಾಲಕ್ಕೆ ಮೆಸ್ಕಾಂ ಸಿದ್ಧತೆ ನಡೆಸಿದಂತಿಲ್ಲ ಎನ್ನುವುದು ಗ್ರಾಹಕರ ದೂರು.

ಜಂಗಲ್‌ ಕಟ್ಟಿಂಗ್‌, ಬ್ರೇಕ್‌ ಡೌನ್‌, ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು, ಹಳೆಯ ಲೈನ್‌ಗಳ ದುರಸ್ತಿ ಅಥವಾ ಬದಲಾವಣೆ, ತಂತಿಗಳಿಗೆ ತಾಗುತ್ತಿರುವ ಗಿಡಬಳ್ಳಿಗಳ ತೆರವು ಇತ್ಯಾದಿ ಕೆಲಸಗಳನ್ನು ಮಳೆಗಾಲಕ್ಕೂ ಮೊದಲು ಮೆಸ್ಕಾಂ ನಿರ್ವಹಿಸಬೇಕು. ಗ್ರಾಮೀಣ ಭಾಗಗಳಲ್ಲಿ ಈ ಕೆಲಸಗಳು ಇನ್ನೂ ಪೂರ್ತಿಯಾಗಿಲ್ಲ.

ಗುತ್ತಿಗೆ ಕಾರ್ಮಿಕರ ನೇಮಕ
ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಮಳೆಗಾಲ ತುರ್ತು ನಿರ್ವಹಣೆಗೆ 11 ಗುತ್ತಿಗೆ ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸುಬ್ರಹ್ಮಣ್ಯ ಕೇಂದ್ರಕ್ಕೆ 4 ಮಂದಿ, ಗುತ್ತಿಗಾರು ಹಾಗೂ ಪಂಜ ಕೇಂದ್ರಗಳಿಗೆ ತಲಾ 3ರಂತೆ ಕರ್ತವ್ಯದಲ್ಲಿದ್ದಾರೆ. ಕಲ್ಮಕಾರು ಮತ್ತು ಹರಿಹರ ಭಾಗದಲ್ಲಿ ಇಬ್ಬರು ಯೇನೆಕಲ್ಲು 3 ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ 4 ಲೈನ್‌ಮನ್‌ಗಳು ಕರ್ತವ್ಯದಲ್ಲಿದ್ದಾರೆ.

ಲೈನ್‌ಮನ್‌ಗಳ ಕೊರತೆ
ಸುಳ್ಯ ಸೇರಿ ಪಂಜ, ಜಾಲೂರು, ಅರಂತೋಡು, ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಹೀಗೆ ಏಳು ವಿದ್ಯುತ್‌ ಸ್ಥಾವರಗಳು (ಸೆಕ್ಷನ್‌ಗಳು) ತಾಲೂಕಿನಲ್ಲಿವೆ. ಪ್ರತಿ ಸ್ಥಾವರಗಳಿಗೆ ಕನಿಷ್ಠ 25 ಲೈನ್‌ಮನ್‌ಗಳು ಇರಬೇಕೆಂದು ನಿಗಮ ಹೇಳುತ್ತದೆ. ಆದರೆ, ಏಳೂ ಶಾಖಾ ಕಚೇರಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲೈನ್‌ಮನ್‌ಗಳಿಲ್ಲ. ಪ್ರತಿ ಸೆಕ್‌ನ್‌ಗೆ ಹತ್ತಕ್ಕಿಂತ ಕಡಿಮೆ ಲೈನ್‌ಮನ್‌ಗಳು ಇರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದೆ.
ವಿದ್ಯುತ್‌ ಸರಬರಾಜು ಮಾರ್ಗಗಳ ತಂತಿಗಳಲ್ಲಿÉ ಮಳೆಗಾಲದಲ್ಲಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗುಡ್ಡ-ಕಾಡು ಪ್ರದೇಶಗಳಲ್ಲಿ ಈ ತಂತಿಗಳು ಹಾದುಹೋಗಿರುವುದು ಇದಕ್ಕೆ ಕಾರಣ. ಮಳೆಗಾಲದಲ್ಲಿ ಬೀಸುವ ಗಾಳಿ-ಮಳೆಗೆ ಮರ ಹಾಗೂ ಕೊಂಬೆಗಳು ವಿದ್ಯುತ್‌ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು ಅವುಗಳು ತುಂಡಾಗಿ ನೆಲಕ್ಕುರುಳುತ್ತವೆ. ಇದರ ದುರಸ್ತಿ ತತ್‌ಕ್ಷಣಕ್ಕೆ ಈಗ ಇರುವ ಮೆಸ್ಕಾಂ ಸಿಬಂದಿಯಿಂದ ಸಾಧ್ಯವಾಗುತ್ತಿಲ್ಲ.

ಮೊಬೈಲ್‌ ಸಂಪರ್ಕವೂ ಇಲ್ಲ
ಇರುವ ಲೈನ್‌ಮನ್‌ಗಳು ಮಳೆ-ಚಳಿಯಲ್ಲಿ ಹರಸಾಹಸ ಪಟ್ಟು ದುರಸ್ತಿಗೆ ಮುಂದಾದರೂ ಯಥಾಸ್ಥಿತಿಗೆ ಬರಲು ದಿನ ಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಪ್ರದೇಶಗಳ ಜನತೆ ವಾರಗಟ್ಟಲೆ ಕಾಲ ಕತ್ತಲೆಯಲ್ಲಿ ದಿನ ದೂಡುವ ಆತಂಕ ಎದುರಾಗಿದೆ. ಚಂಡಮಾರುತವೂ ಬಂದಿದ್ದರಿಂದ ಮುಂಗಾರು ಮಳೆ ಆರಂಭದಲ್ಲೇ ಅಬ್ಬರಿಸಿದೆ. ಡೀಸೆಲ್‌ ಖರೀದಿಸಲು ಬಿಎಸ್ಸೆನ್ನೆಲ್‌ಗೆ ಅನುದಾನ ಬರುತ್ತಿಲ್ಲವಾದ ಕಾರಣ ವಿದ್ಯುತ್ತಿಲ್ಲದಿದ್ದರೆ ಮೊಬೈಲ್‌ ಟವರ್‌ಗಳೂ ಸ್ತಬ್ಧವಾಗುತ್ತವೆ. ಹೀಗಾಗಿ, ತುರ್ತು ಸಂದರ್ಭಗಳಲ್ಲಿ ಸಂಪರ್ಕವೂ ಸಾಧ್ಯವಾಗದು.

ಹಲವು ಸವಾಲುಗಳು
ವಿದ್ಯುತ್‌ ವಿತರಿಸುವ ಸೆಕ್ಷನ್‌ನಲ್ಲಿ ಇರುವ ಆರೇಳು ಲೈನ್‌ಮನ್‌ಗಳು ಇಡೀ ವ್ಯಾಪ್ತಿಯನ್ನು ನಿರ್ವಹಿಸಲು ಅಸಾಧ್ಯ. ಪೂರ್ಣ ಮಳೆಗಾಲದಲ್ಲಿ ಅವಘಡ ಸಂಭವಿಸುವ ಸ್ಥಳಗಳಿಗೆ ಧಾವಿಸಲು ಆಗದ ಮಾತು. 20-25 ಸಿಬಂದಿ ಮಾಡುವ ಕೆಲಸಗಳನ್ನು ಏಳೆಂಟು ಮಂದಿ ನಿಭಾಯಿಸುತ್ತೇವೆಂದು ಲೈನ್‌ಮನ್‌ಗಳು ಹೇಳಿದರೂ ದಟ್ಟ ಅರಣ್ಯ ಪ್ರದೇಶ, ಹಳೆಯ ವಿದ್ಯುತ್‌ ಲೈನ್‌ ಹಾಗೂ ವಿಸ್ತಾರವಾದ ವ್ಯಾಪ್ತಿ ಇರುವುದರಿಂದ ಅದು ಸಾಧ್ಯವಾಗದ ಮಾತು ಎಂದೇ ಹೇಳಬೇಕು.

ಹೆಲ್ಪರ್‌ ನೀಡಿದಲ್ಲಿ ಉತ್ತಮ
ಲೈನ್‌ಮನ್‌ಗೆ ಸಹಾಯಕರನ್ನು ಕೊಟ್ಟು ಕ್ಷೇತ್ರ ಕಾರ್ಯಕ್ಕೆ ನಿಯೋಜಿಸಬೇಕು. ಆದರೆ ಮೆಸ್ಕಾಂನಲ್ಲಿ ಇದ್ಯಾವುದೂ ನಡೆಯುವುದು ಸದ್ಯಕ್ಕೆ ದೂರದ ಮಾತು. ಈ ಬಾರಿಯೂ ಮಳೆಗಾಲ ವಿದ್ಯುತ್‌ ವ್ಯತ್ಯಯ ತಪ್ಪಿದ್ದಲ್ಲ .

ಹತೋಟಿ ಹೇಗೆ?
ಕಂಬಗಳ ಅಂತರ ಕಡಿಮೆ ಮಾಡಬೇಕು. ತಂತಿಗಳು ಜೋತು ಬೀಳದಂತೆ ಎಚ್ಚರಿಕೆ ವಹಿಸಬೇಕು. ತಂತಿ ಹಾಗೂ ಕಂಬಗಳ ಮೇಲೆ ಮರ ಬಿದ್ದಾಗ ಸ್ಥಳೀಯರು ಕೊಂಬೆಗಳನ್ನು ಕತ್ತರಿಸಿ, ದುರಸ್ತಿಗೆ ಸಹಕರಿಸಬೇಕು. ಎಂದು ಲೈನ್‌ಮನ್‌ಗಳು ಹೇಳುತ್ತಾರೆ.

ನಿಭಾಯಿಸುತ್ತೇವೆ
ಮಾನ್ಸೂನ್‌ ಎದುರಿಸಲು ಸಿದ್ಧತೆ ನಡೆಸಿದ್ದೇವೆ. ಕಂಬಗಳು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಹೆಚ್ಚುವರಿ ಸಿಬಂದಿಯನ್ನು ತಾತ್ಕಾಲಿಕವಾಗಿ ಪಡೆದುಕೊಂಡಿ ದ್ದೇವೆ. ಸೆಕ್ಷನ್‌ಗಳಲ್ಲಿ ಇರುವ ಸಿಬಂದಿಯನ್ನು ಬಳಸಿಕೊಂಡು ಮುಂದೆ ಎದುರಾಗಬಹುದಾದ ಸಮಸ್ಯೆ ನಿವಾರಣೆ ದೃಷ್ಟಿಯಿಂದ ಗಮನ ಹರಿಸುತ್ತೇವೆ.
– ಚಿದಾನಂದ ಸ.ಕಾ.ನಿ. ಎಂಜಿನಿಯರ್‌, ಮೆಸ್ಕಾಂ, ಸುಬ್ರಹ್ಮಣ್ಯ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.