ಕೂಲಿ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ
Team Udayavani, Jun 16, 2019, 3:00 AM IST
ಮೂಡಿಗೆರೆ: ತಾಲೂಕಿನ ಕಳಸದ ಬಿಳುಗೂರು ಬಳಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿದೆ.
ಗಾಯಗೊಂಡ ಕೂಲಿ ಕಾರ್ಮಿಕನನ್ನು ಬಿಳುಗೂರುದ ಚನ್ನಪ್ಪ(35)ಎಂದು ಗುರುತಿಸಲಾಗಿದೆ. ಚನ್ನಪ್ಪ, ಬಿಳುಗೂರುದ ಶ್ಯಾಮ ಶೆಟ್ಟಿ ಅವರ ಕಾಫಿ ತೋಟದಲ್ಲಿ ಕಾಫಿ ಗಿಡ ಕಸಿ ಮಾಡುವ ಕೆಲಸದಲ್ಲಿ ನಿರತರಾಗಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಪ್ರತ್ಯಕ್ಷವಾದ ಕಾಡುಕೋಣ ಕೊಂಬುಗಳಿಂದ ಚನ್ನಪ್ಪ ಅವರ ಕುತ್ತಿಗೆಗೆ ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.