ತೂಫಾನ್ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರು
Team Udayavani, Jun 17, 2019, 10:51 AM IST
ಕುಂದಾಪುರ/ಮಲ್ಪೆ : ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭಗೊಳ್ಳದ ಕಾರಣ ಮತ್ತು ಸಮುದ್ರದಲ್ಲಿ ದೊಡ್ಡ ಮಟ್ಟದ ತೂಫಾನ್ ಉಂಟಾಗದ ಪರಿಣಾಮ ಕರಾವಳಿಯೆಲ್ಲೆಡೆ ನಾಡ ದೋಣಿ ಮೀನುಗಾರರು ಇನ್ನೂ ಕಡಲಿಗಿಳಿದಿಲ್ಲ.
ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನು ಗಾರಿಕೆ ಮೇ 31ಕ್ಕೆ ಕೊನೆಗೊಂಡಿದ್ದು, ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ಅವು ಸಮುದ್ರಕ್ಕೆ ಇಳಿಯಬೇಕಾದರೆ ಮಳೆ ಉತ್ತಮವಾಗಿ ಬಂದು, ದೊಡ್ಡ ಮಟ್ಟದ ತೂಫಾನ್ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ವಿಳಂಬವಾಗಿಯೇ ಮುಂಗಾರು ಆರಂಭ ವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.
ಮಂಗಳೂರು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ, ಕೋಡಿ, ಮರವಂತೆ, ಕೊಡೇರಿ, ಶಿರೂರು ಸಹಿತ ಎಲ್ಲ ಕಡೆಗಳ ನಾಡದೋಣಿ ಮೀನುಗಾರರು ತೂಫಾನ್ ನಿರೀಕ್ಷೆಯಲ್ಲಿ ದ್ದಾರೆ. ಕುಂದಾಪುರ ತಾಲೂಕಿನಲ್ಲಿಯೇ ಸುಮಾರು 15ರಿಂದ 20 ಸಾವಿರ ನಾಡ ದೋಣಿ ಮೀನುಗಾರರಿದ್ದಾರೆ.
ಕೋಟ್ಯಂತರ ರೂ. ವಹಿವಾಟು
ಮುಂಗಾರಿನಲ್ಲಿ ನಡೆಯುವ ನಾಡ ದೋಣಿ ಮೀನುಗಾರಿಕೆಯಲ್ಲಿ ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಕ್ಕಿದಲ್ಲಿ ದಿನವೊಂದರ ವಹಿವಾಟು ಕೋ.ರೂ. ಸ್ತರಕ್ಕೇರುತ್ತದೆ. ಈ ಸೀಸನ್ನಲ್ಲಿ ನಾಡದೋಣಿಗಳಿಗೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ವಿಳಂಬವಾದಷ್ಟು ಮೀನುಗಾರರಿಗೆ ನಷ್ಟವೇ ಹೆಚ್ಚು.
ಜು.10ರ ಬಳಿಕ…
ಇನ್ನೂ ಮಳೆ ಬಂದಿಲ್ಲ. ತೂಫಾನ್ ಕೂಡ ಕಾಣಿಸಿಲ್ಲ. ಹಾಗಾಗಿ ನಾಡ ದೋಣಿ ಮೀನುಗಾರಿಕೆಯು ಜು.10ರ ಬಳಿಕವಷ್ಟೇ ಆರಂಭವಾಗಬಹುದು. ಕಳೆದ ಬಾರಿಯೂ ಜು. 20ರ ಅನಂತರವಷ್ಟೇ ಆರಂಭ ವಾಗಿತ್ತು ಎಂದು ಗಂಗೊಳ್ಳಿ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ದೋಣಿಯಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ