ತುಂಬೆ: ಡಿವೈಡರ್ ಮೇಲೇರಿದ ಟ್ಯಾಂಕರ್
Team Udayavani, Jun 18, 2019, 9:35 AM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ತುಂಬೆಯಲ್ಲಿ ಜೂ. 17ರಂದು ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಕೆಎಸ್ಆರ್ಟಿಸಿ ಬಸ್ಸಿಗೆ ತಾಗಿ ಕೊಂಡು ಹೋಗಿ ರಸ್ತೆ ವಿಭಜಕಕ್ಕೇರಿ ನಿಂತ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಎದುರಿನಿಂದ ಸಾಗುತ್ತಿದ್ದ ವಾಹನ ದಿಢೀರ್ ನಿಂತ ಕಾರಣ ಮಂಗಳೂರಿನಿಂದ ಬರುತ್ತಿದ್ದ ಸರಕಾರಿ ಬಸ್ ಬ್ರೇಕ್ ಹಾಕಿತು. ಅದರ ಹಿಂದಿನಿಂದ ಬರುತ್ತಿದ್ದ ಟ್ಯಾಂಕರಿನ ಚಾಲಕ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನುತಪ್ಪಿಸಲು ಪ್ರಯತ್ನಿಸಿದ್ದು, ಆಗ ನಿಯಂತ್ರಣ ತಪ್ಪಿ ಬಸ್ಸಿಗೆ ಒರೆಸಿಕೊಂಡು ಹೋಗಿ ಡಿವೈಡರ್ ಮೇಲೇರಿ ನಿಂತಿದೆ.
ಸ್ಥಳಕ್ಕೆ ಮೆಲ್ಕಾರ್ ಸಂಚಾರ ಠಾಣೆಯ ಪೊಲೀಸರು ಧಾವಿಸಿ ಬಂದು ಸಂಚಾರವನ್ನು ಸುಸ್ಥಿತಿಗೆ ತಂದರು.