ತ್ರಾಸಿ ದುರಂತಕ್ಕೆ ಮೂರು ವರ್ಷ
Team Udayavani, Jun 21, 2019, 12:08 PM IST
ಕುಂದಾಪುರ, ಜೂ. 20: ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್ವೊಂದು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಓಮ್ನಿ ಕಾರಿಗೆ ಢಿಕ್ಕಿಯಾಗಿ 8 ಮಕ್ಕಳು ಸಾವನ್ನಪ್ಪಿದ ದುರಂತ ಸಂಭವಿಸಿ ಜೂ.21 ಕ್ಕೆ ಮೂರು ವರ್ಷಗಳಾಗುತ್ತಿವೆ. ಸದ್ಯ ಚತುಷ್ಪಥ ಕಾಮಗಾರಿ ನಡೆಯು ತ್ತಿದ್ದು, ಇನ್ನೂ ಮೊವಾಡಿ ಕ್ರಾಸ್ ಬಳಿ ಯಾವುದೇ ಸುರಕ್ಷತಾ ಕ್ರಮಗಳನ್ನು ಮಾತ್ರ ಕೈಗೊಂಡಿಲ್ಲ.
2016ರ ಜೂ. 21ರಂದು ಬೆಳಗ್ಗೆ 9.15 ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಇದರಲ್ಲಿ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ 8 ಮಂದಿ ವಿದ್ಯಾರ್ಥಿಗಳು ಮಡಿದಿದ್ದರು. ಕುಂದಾಪುರ – ಬೈಂದೂರು ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಆದರೆ ಮೊವಾಡಿ ಕ್ರಾಸ್ ಬಳಿ ವಾಹನ ಯೂ ಟರ್ನ್ ತೆಗೆದುಕೊಳ್ಳುವ ಸ್ಥಳದಲ್ಲಿ ಇನ್ನೂ ಕೂಡ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಮತ್ತಷ್ಟು ಅಪಘಾತಕ್ಕೆ ದಾರಿ ಮಾಡಿ ಕೊಡುವ ಆತಂಕ ಜನರದ್ದಾಗಿದೆ.