ಬೇಡಿಕೆ ಈಡೇರಿಕೆಗೆ ಮಾಜಿ ದೇವದಾಸಿಯರ ಆಗ್ರಹ
Team Udayavani, Jun 23, 2019, 3:44 PM IST
ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾಜಿ ದೇವದಾಸಿಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ವಿಜಯಪುರ: ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2018 ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ದೇವದಾಸಿ ಮಹಿಳೆಯರ ಒಕ್ಕೂಟದ ನೇತೃತ್ವದಲ್ಲಿ ಮಾಜಿ ದೇವದಾಸಿಯರು ಶನಿವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಡಾ| ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಈ ವೇಳೆ ಅಳಲು ತೋಡಿಕೊಂಡ ಮಾಜಿ ದೇವದಾಸಿಯರು, ‘ನಾವು ಜನ್ಮ ತಾಳುತ್ತಲೇ ದೇವದಾಸಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಬಂದವರಲ್ಲ. ನಮಗೆ ನಮ್ಮ ಪೂರ್ವಜರು ಒತ್ತಾಯ ಪೂರ್ವಕವಾಗಿ ಈ ವೃತ್ತಿಗೆ ತಳ್ಳಿದ್ದಾರೆ. ಹಿಂದಿನ ಕಾಲದಲ್ಲಿ ದೇವದಾಸಿ ಮಾಡುವ ಉದ್ದೇಶ ದೇವರದಾಸಿ ಅಂದರೆ ದೇವರ ಸೇವಕಿ ಎಂಬ ಅರ್ಥವಿತ್ತು. ಆದರೆ ಅದು ಮುಂದುವರಿದು ದೇವದಾಸಿಯರನ್ನು ಭೋಗದ ವಸ್ತುವಾಗಿ ಉಪಯೋಗಿಸಿದರು ಎಂದು ನೋವು ತೋಡಿಕೊಂಡರು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2018 ಅನುಷ್ಠಾನಗೊಳಿಸುವುದು, ಮಾಜಿ ದೇವದಾಸಿಯವರಿಗೆ ದೊರೆಯುವ ಮಾಸಿಕ ಪಿಂಚಣಿ ಏರಿಕೆ ಮಾಡುವುದು, ಸಮೀಕ್ಷೆಯಲ್ಲಿರುವ ಎಲ್ಲ ದೇವದಾಸಿಯವರಿಗೂ ಗುರುತಿನ ಪತ್ರ ವಿತರಿಸುವುದು, ಮಾಜಿ ದೇವದಾಸಿಯವರ ಮರು ಸಮೀಕ್ಷಾ ಕಾರ್ಯ ಕೈಗೊಂಡು ಸಮೀಕ್ಷೆಯಿಂದ ಹೊರಗುಳಿದ ದೇವದಾಸಿಯವರ ಹೆಸರು ನೋಂದಾಯಿಸಿಕೊಳ್ಳುವುದು, ಮಾಜಿ ದೇವದಾಸಿಯವರಿಗೆ ದೊರೆಯುವ ಪಿಂಚಣಿ ಹಾಗೂ ಯಾವುದೇ ಸೌಲಭ್ಯಗಳು ತಾಲೂಕು ಮಟ್ಟದ ಕಾರ್ಯ ನಿರ್ವಾಹಕ ಹಾಗೂ ಮದ್ಯವರ್ತಿಗಳ ಪಾಲಾಗದೆ ನೇರವಾಗಿ ಅರ್ಹ ಪಲಾನುಭವಿಗಳಿಗೆ ದೊರಕುವಂತೆ ಮಾಡುವುದು, ದೇವದಾಸಿ ಪುನರ್ವಸತಿ ನಿಗಮದಡಿ ಮನೆ ಕಟ್ಟಲು ಇರುವ ಸಹಾಯಧನ ಏರಿಕೆ ಮಾಡುವುದು, ತಾಲೂಕಾವಾರು ಜನ ಸಭೆ ನಡೆಸಿ ಮಾಜಿ ದೇವದಾಸಿಯರ ಅಹವಾಲು ಆಲಿಸುವುದು, ಉಚಿತ ವೈದ್ಯಕೀಯ ನೆರವು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾ| ಪ್ರಾನ್ಸಿಸ್ ಬಾಲರಾಜ್, ಸ್ಲಂ ಸಮಿತಿ ಮುಖಂಡ ಅಕ್ರಂ ಮಾಶ್ಯಾಳಕರ, ನಿರ್ಮಲಾ ಹೊಸಮನಿ, ಸಿಸ್ಟರ್ ಶಾಂತಿ, ಸಿಸ್ಟರ್ ಮೇಬಲ್ ಪಿಂಟೊ, ಸಿಸ್ಟರ್ ಫಾತಿಮಾ, ಸಿಸ್ಟರ್ ಶೋಭಾ, ಮಹಾದೇವಿ ಹುಲ್ಲೂರ, ನಾಗಮ್ಮ, ಡುಗ್ಗಮ್ಮಾ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ