ಕರ ಸಮಾಧಾನ ಸೌಲಭ್ಯ ಅವಧಿ ಜು.31ರವರೆಗೆ ವಿಸ್ತರಣೆ
Team Udayavani, Jun 30, 2019, 3:00 AM IST
ಬೆಂಗಳೂರು: ಜಿಎಸ್ಟಿ ಜಾರಿಗೂ ಮುನ್ನ ವ್ಯಾಪಾರ-ವಹಿವಾಟುದಾರರು ಬಾಕಿ ಉಳಿಸಿಕೊಂಡಿದ್ದ ತೆರಿಗೆಗೆ ಸಂಬಂಧಪಟ್ಟಂತೆ ಬಡ್ಡಿ, ದಂಡ ವಿನಾಯ್ತಿ ನೀಡಿ ಏಕಕಾಲಕ್ಕೆ ತೆರಿಗೆ ಪಾವತಿಸಲು ಕಲ್ಪಿಸಿದ್ದ ಕರ ಸಮಾಧಾನ ಸೌಲಭ್ಯವನ್ನು ಜು.31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಎಸ್ಟಿ ಜಾರಿಗೂ ಮೊದಲು ವ್ಯಾಪಾರ-ವಹಿವಾಟುದಾರರು ವ್ಯಾಟ್, ಮಾರಾಟ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ತೆರಿಗೆ ಪಾವತಿ ವಿಳಂಬದಿಂದಾಗಿ ವಾಣಿಜ್ಯ ತೆರಿಗೆ ಇಲಾಖೆ ದಂಡ, ಬಡ್ಡಿ ವಿಧಿಸಿತ್ತು. ಬಳಿಕ ವ್ಯಾಪಾರ-ವ್ಯವಹಾರಸ್ಥರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು,
ಬಡ್ಡಿ, ದಂಡ ವಿನಾಯ್ತಿ ನೀಡಿ ಒಂದೇ ಬಾರಿಗೆ ಬಾಕಿ ತೆರಿಗೆ ಪಾವತಿಗೆ ಕರ ಸಮಾಧಾನ ಸೌಲಭ್ಯ ಕಲ್ಪಿಸಿದ್ದರು. ಕರ ಸಮಾಧಾನ ಸೌಲಭ್ಯ ಪಡೆಯಲು ಜೂ.30 ಕಡೆಯ ದಿನವಾಗಿತ್ತು. ಈಗ ಸರ್ಕಾರ ಜು.31ರವರೆಗೆ ಅವಧಿ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ನಮ್ಮ ಮನವಿಯಂತೆ ವ್ಯಾಪಾರ-ವಹಿವಾಟುದಾರರ ಅನುಕೂಲಕ್ಕಾಗಿ ಕರ ಸಮಾಧಾನ ಸೌಲಭ್ಯ ಅವಧಿಯನ್ನು ಜು.31ರವರೆಗೆ ವಿಸ್ತರಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಆದೇಶಗಳನ್ನು ಹೊರಡಿಸಬೇಕು. ವ್ಯಾಪಾರ-ವಹಿವಾಟುದಾರರು ಸೌಲಭ್ಯವನ್ನು ತ್ವರಿತವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಎಫ್ಕೆಸಿಸಿಐ ಜಿಎಸ್ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ