ಕೋಟ ಜೋಡಿ ಕೊಲೆ ಕೇಸ್ ಸೆಶನ್ಸ್ ಕೋರ್ಟ್ಗೆ: ಆರೋಪಿಗಳು ಹಿರಿಯಡಕ ಜೈಲಿಗೆ
Team Udayavani, Jun 30, 2019, 9:49 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕೋಟ ಸಮೀಪದ ಮಣೂರಿ ನಲ್ಲಿ ಜ.26ರ ತಡರಾತ್ರಿ ನಡೆದ ಭರತ್ ಹಾಗೂ ಯತೀಶ್ ಕಾಂಚನ್ ಅವರ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆ ಗಾಗಿ ಕುಂದಾಪುರದ ಹೆಚ್ಚುವರಿ ಜೆ.ಎಂ.ಎಫ್. ಸಿ. ನ್ಯಾಯಾ ಲಯದಿಂದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ (ಸೆಶನ್ಸ್ ಕೋರ್ಟ್)ಕ್ಕೆ ರವಾನೆ ಮಾಡಿ (ಕಮಿಟ್) ನ್ಯಾಯಾಧೀಶೆ ನಾಗರತ್ನಮ್ಮ ಶನಿವಾರ ಆದೇಶ ನೀಡಿದ್ದಾರೆ.
ಆರೋಪಿಗಳು ಹಿರಿಯಡಕ ಜೈಲಿಗೆ
ಆರೋಪಿಗಳು ಕ್ರಿಮಿನಲ್ ಹಾಗೂ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ. ಉಡುಪಿಯ ಹಿರಿಯಡಕ ಸಬ್ ಜೈಲಿನಲ್ಲಿರುವ ಆರೋಪಿಗಳು ಒಳಸಂಚು ಮಾಡುತ್ತಾರೆ, ಕೆಲವರು ರೌಡಿ ಶೀಟರ್ ಆಗಿರುವುದರಿಂದ ಜೈಲಿನಲ್ಲಿ ಶಾಂತಿಭಂಗ ಮಾಡುತ್ತಾರೆ, ಕೆಲವರು ರಾಜಕೀಯ ಪ್ರಭಾವ ಬಳಸುತ್ತಾರೆ. ಸಾಕ್ಷಾಧಾರಗಳ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಈ ಪ್ರಕರಣದ ಎಲ್ಲ ಆರೋಪಿಗಳನ್ನು ಕಾರವಾರ ಹಾಗೂ ಶಿವಮೊಗ್ಗ ಜೈಲಿಗೆ ಕಳುಹಿಸಬೇಕು ಎಂದು ಬೆಂಗಳೂರಿನ ಬಂದಿಖಾನೆ ಮಹಾನಿರೀಕ್ಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಶನಿವಾರ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಆರೋಪಿಗಳ ಪರವಾಗಿ ರವಿಕಿರಣ್ ಮುರ್ಡೆಶ್ವರ್ ಸುದೀರ್ಘವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿ ಆರೋಪಿಗಳನ್ನು ಹಿರಿಯಡಕ ಸಬ್ ಜೈಲಿಗೆ ಕಳುಹಿಸಲಾಗಿದೆ.
ವಕೀಲರ ವಾದವೇನು?
ಆರೋಪಿಗಳನ್ನು ಬೇರೆ ಜೈಲಿಗೆ ಹಂಚಿಕೆ ಮಾಡಬೇಕು ಎಂಬ ಮನವಿಯಲ್ಲಿರುವ ಅಂಶ ಸರಿಯಲ್ಲ. ಅವರನ್ನು ಹಿರಿಯಡಕದಲ್ಲಿಯೇ ಇರಿಸಬೇಕು ಎಂದು ಆರೋಪಿ ಪರ ವಕೀಲರು ವಾದಿಸಿದರು. ಕಳೆದ ಹದಿನೈದು ದಿನಗಳ ಅಂತರದಲ್ಲಿ ಆರೋಪಿಗಳು ಜೈಲಿನಲ್ಲಿ ಯಾವುದೇ ಗಲಾಟೆ ಮಾಡಿಲ್ಲ, ಆರೋಪಿಗಳ ಕುಟುಂಬಿಕರು ಕೂಡ ಸ್ಥಳೀಯರಾಗಿದ್ದಾರೆ. ಕೆಲವು ಆರೋಪಿಗಳಿಗೆ ಆರೋಗ್ಯ ಸಮಸ್ಯೆಯಿದೆ. ಕುಂದಾಪುರ ನ್ಯಾಯಾಲಯ ಹಾಗೂ ಪ್ರಕರಣ ನಡೆದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಗೆ ಹಿರಿಯಡಕ ಸಬ್ ಜೈಲನ್ನು ನೀಡಲಾಗುತ್ತದೆ. ಆರೋಪಿಗಳನ್ನು ಬೇರೆ ಕಡೆಗೆ ರವಾನಿಸುವುದು ಅಸ್ವಾಭಾವಿಕವಾಗುತ್ತದೆ. ಇದಕ್ಕೆ ಸಮರ್ಪಕ ಕಾರಣವನ್ನೂ ಅಧಿಕಾರಿಗಳು ನೀಡಿಲ್ಲ. ಅದಕ್ಕಾಗಿ ಆರೋಪಿಗಳನ್ನು ಹಿರಿಯಡಕ ಜೈಲಿನಲ್ಲೇ ಇರಿಸಬೇಕು ಎಬ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ