ಮುಂಬಯಿ: ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪ್ರತಿಭಟನೆ
ಹೊಟೇಲ್ ಎದುರು ಕೈ ಕಾರ್ಯಕರ್ತರ ಆಕ್ರೋಶ, ಬಿಗಿ ಭದ್ರತೆ
Team Udayavani, Jul 7, 2019, 4:36 PM IST
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮುಂಬಯಿ : ರಾಜೀನಾಮೆ ನೀಡಿ ಮುಂಬಯಿಯ ಸೊಫಿಟೆಲ್ ಹೊಟೇಲ್ನಲ್ಲಿ ತಂಗಿರುವ ಶಾಸಕರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಹೊಟೇಲ್ನಲ್ಲಿ ಜೆಡಿಎಸ್ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ, ನಾರಾಯಣ ಸ್ವಾಮಿ ಸೇರಿ 8 ಮಂದ ಕಾಂಗ್ರೆಸ್ ಶಾಸಕರಿದ್ದಾರೆ.
ಹೊಟೇಲ್ಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಹೊಟೇಲ್ ಒಳಗೆ ಹೊಟೇಲ್ನ ಸಿಬಂದಿ ಭದ್ರತೆ ಕೈಗೊಂಡಿದ್ದು, ಹೊರಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹೊಟೇಲ್ಗೆ ಶಾಸಕರ ಆಪ್ತರಾಗಿರುವ ಕೆಲ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಎಸ್.ಟಿ.ಸೋಮ ಶೇಖರ, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್, ಶಿವರಾಮ್ ಹೆಬ್ಟಾರ್ ಅವರು ಹೊಟೇಲ್ನಲ್ಲಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ರೆಬೆಲ್ ಶಾಸಕರು ರಾಜೀನಾಮೆ ವಾಪಾಸ್ ಪಡೆಯಲು ಆಗ್ರಹಿಸಿದ್ದಾರೆ.
ನಿವಾಸಗಳಿಗೂ ಭದ್ರತೆ
ರಾಜೀನಾಮೆ ನೀಡಿ ಮುಂಬಯಿಗೆ ತೆರಳಿರುವ ಶಾಸಕರ ನಿವಾಸಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.