ಹನಗಂಡಿ ಕೆರೆಯಲ್ಲಿ ಹನಿ ನೀರಿಲ್ಲ..!
ಸಂಪೂರ್ಣ ಒಣಗಲು ಆರಂಭಿಸಿವೆ ಮುಂಗಾರು ಬೆಳೆಗಳು-ಕಾಯಿಪಲ್ಲೆ
Team Udayavani, Jul 12, 2019, 8:26 AM IST
ಬನಹಟ್ಟಿ: ರಬಕವಿ ಬನಹಟ್ಟಿ ಸಮೀಪದ ಹನಗಂಡಿ ಗ್ರಾಮದ ಕೆರೆ ಮಳೆಯಾಗದೇ ಖಾಲಿ ಇದೆ.
ಬನಹಟ್ಟಿ; ಹೆಚ್ಚಿನ ಪ್ರಮಾಣದ ಮಳೆ ಬಾರದ ಕಾರಣ ತಾಲೂಕಿನ ಅನೇಕ ಕೆರೆಗಳು ನೀರಿಲ್ಲದೇ ಖಾಲಿಯಾಗಿ ಗೋಚರಿಸುತ್ತಿವೆ. ಕೇವಲ ಜಿಟಿ ಜಿಟಿ ತುಂತುರು ಮಳೆ ಮಾತ್ರ ಸುರಿಯುತ್ತಿದ್ದು, ಮೋಡಗಳು ಹೀಗೆ ಬಂದು ಹಾಗೇ ಮಾಯವಾಗುತ್ತಿವೆ.
ಸಮೀಪದ ಹನಗಂಡಿ ಗ್ರಾಮದ ಜೀವಜಲ ವಿಶಾಲ ಕೆರೆ ಜುಲೈ ತಿಂಗಳು ಮುಗಿಯುತ್ತ ಬಂದರೂ ಕೆರೆಗೆ ಒಂದು ಹನಿ ನೀರು ಕೂಡಾ ಬಂದಿಲ್ಲ. ಹೀಗಾಗಿ ಕೆರೆ ಬಣಗುಡುತ್ತಿದೆ. ಈ ಕೆರೆ ತುಂಬಿದರೆ ಗ್ರಾಮದ ಅನೇಕ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಈ ಹಿಂದೆ ಕೆರೆ ತುಂಬಾ ಹೂಳು ತುಂಬಿಕೊಂಡಿತ್ತು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂದವರು ಹೂಳು ತೆಗೆಯಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಆದರೆ ಹೆಚ್ಚಿನ ಪ್ರಮಾಣ ಮಳೆಯಾಗದ ಕಾರಣ ಕೆರೆಗೆ ಹನಿ ನೀರೂ ಹರಿದು ಬಂದಿಲ್ಲ. ಇದರಿಂದ ಈ ಭಾಗದ ರೈತರ ಹೊಲ ಗದ್ದೆಗಳಲ್ಲಿನ ಬೋರವೆಲ್ಗಳಲ್ಲಿ ನೀರಿಲ್ಲದೆ, ಸಮಯಕ್ಕೆ ಸರಿಯಾಗಿ ಮಳೆಯೂ ಬಾರದೇ ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಕಬ್ಬು, ತೊಗರಿ ಬೆಳೆ, ಹೆಸರು, ಕಾಯಿಪಲ್ಲೆ ಬೆಳೆಗಳು ಸಂಪೂರ್ಣ ಒಣಗಲು ಆರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ