ಗುರುವಿನ ಪಾದಪೂಜೆಗಿದೆ ವಿಶೇಷ ಸ್ಥಾನ
ಪ್ರತಿಯೊಬ್ಬರಿಗೂ ಇರಲಿ ಗುರುವಿನ ಮೇಲೆ ಭಕ್ತಿ•ಮಹಾತ್ಮರ ಕೃಪೆಯಿಂದ ಉತ್ತಮ ಮಳೆಯಾಗಲಿ
Team Udayavani, Jul 17, 2019, 2:54 PM IST
ಚಿಂಚೋಳಿ: ಹಾರಕೂಡ ಚನ್ನಬಸವೇಶ್ವರ ಮಠದಲ್ಲಿ ಪೂಜ್ಯ ಡಾ| ಚನ್ನವೀರ ಶಿವಾಚಾರ್ಯರ ಪಾದಪೂಜೆ ಮಾಡಲಾಯಿತು.
ಚಿಂಚೋಳಿ: ಗುರುವಿನ ಪಾದಪೂಜೆ ವೀರಶೈವದಲ್ಲಿ ವಿಶೇಷ ಸ್ಥಾನವಿದೆ. ಪಾದ ಸ್ಪರ್ಶ ಮಾಡಿದರೆ ಮುಕ್ತಿ ಸಿಗಲಿದೆ. ಪ್ರತಿಯೊಬ್ಬರಿಗೂ ಗುರುವಿನ ಮೇಲೆ ಅಪಾರ ಭಕ್ತಿ ಇರಬೇಕು ಎಂದು ಚಿಂಚೋಳಿ ಹಾರಕೂಡ ಹಿರೇಮಠದ ಸಂಸ್ಥಾನ ಪೀಠಾಧಿಪತಿ ಡಾ| ಚನ್ನವೀರ ಶಿವಾಚಾರ್ಯರರು ಹೇಳಿದರು.
ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಮಠದಲ್ಲಿ ಮಂಗಳವಾರ ಗುರುಪೂರ್ಣಿಮೆ ನಿಮಿತ್ತ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.
ಗುರು ಮತ್ತು ಪಾದಪೂಜೆ ಅತಿ ಶ್ರೇಷ್ಠವಾದುದು. ಕೆಲವು ಕಡೆ ಮಳೆ ಇದೆ. ಇನ್ನು ಕೆಲವು ಪ್ರದೇಶದಲ್ಲಿ ಮಳೆ ಇಲ್ಲ. ಪುಣ್ಯಪುರುಷರು, ಮಹಾತ್ಮರ ಶರಣ ಕೃಪೆಯಿಂದಾಗಿ ಇನ್ನು ಮುಂದೆ ಚೆನ್ನಾಗಿ ಬರಲಿದೆ. ಹಾರಕೂಡ ಚನ್ನಬಸವೇಶ್ವರ ಆಶೀರ್ವಾದ ಸದಾ ಭಕ್ತರ ಮೇಲಿದೆ ಎಂದು ಹೇಳಿದರು.
ಹಾರಕೂಡ ಮಠದಲ್ಲಿ ಬೆಳಗಿನಿಂದಲೇ ಚನ್ನಬಸವ ಶಿವಯೋಗಿಗಳ ಗದ್ದುಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಬಿಲ್ವ ಪತ್ರಿ, ಹೂವುಗಳ ಪುಷ್ಪಾರ್ಚನೆ ಮಾಡಲಾಯಿತು.
ಭಕ್ತರ ಜಯಘೋಷಗಳ ಮಧ್ಯೆ ಹಾರಕೂಡ ಪೀಠಾಧಿ ಪತಿಗಳ ಪಾದಪೂಜೆ ಮಾಡಲಾಯಿತು. ಜಿಪಂ ಸದಸ್ಯ ಗೌತಮ ಪಾಟೀಲ, ಚನ್ನಬಸಪ್ಪ ನಾವದಗಿ, ಶಾಮರಾವ ಸೀಳಿನ, ನಾಗರಾಜ ಕಲಬುರಗಿ, ಸಂತೋಷ ಗಡಂತಿ, ರಾಜಶೇಖರ ಮಜ್ಜಗಿ, ನಾಗರಾಜ ಮಲಕೂಡ, ಅಪ್ಪಣ್ಣ, ಕಾತಿಕೇಯ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿಗಳು, ನವಲಿಂಗ ಪಾಟೀಲ ಇದ್ದರು.
ಬೀದರ, ಕಲಬುರಗಿ, ಬಸವಕಲ್ಯಾಣ, ಸೇಡಂ, ಹುಮನಾಬಾದ, ಚಿತ್ತಾಪುರ, ಭಾಲ್ಕಿ ಇನ್ನತರ ನಗರ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು