ಜನಜಾಗೃತಿ ರಾಜಕಾರಣಿಗಳಿಗೆ ಬೇಕಿಲ್ಲ
ರಂಗಭೂಮಿಯವರೇ ನಿಜ ಜನಪ್ರತಿನಿಧಿಗಳು •ರಾಜಕಾರಣಿಗಳಿಗೆ ಜನತೆ ಪ್ರಶ್ನಿಸುವ ಭಯ
Team Udayavani, Jul 19, 2019, 2:58 PM IST
ಕಲಬುರಗಿ: ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ರಂಗ ಸಂಗಮ ಕಲಾ ವೇದಿಕೆ ವತಿಯಿಂದ ಹವ್ಯಾಸಿ ರಂಗಭೂಮಿ ನಿರ್ದೇಶಕ ಡಾ| ಶ್ರೀಪಾದ ಭಟ್ ಅವರಿಗೆ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಕಾಶ ಬೆಳವಾಡಿ, ಡಾ| ಸ್ವಾಮಿರಾವ್ ಕುಲಕರ್ಣಿ, ಸುಜಾತಾ ಜಂಗಮಶೆಟ್ಟಿ, ಸುಧೀರರಾವ್ ಇದ್ದರು.
ಕಲಬುರಗಿ: ಜನರಿಗೆ ಶಿಕ್ಷಣ, ಉದ್ಯೋಗ ಕೊಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು ರಾಜಕಾರಣ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳಿಗೆ ಬೇಕಾಗಿಲ್ಲ. ಸಮಾಜದಲ್ಲಿ ಸ್ಥಾಯಿಭಾವ ಉಳಿಸುವ ರಂಗಭೂಮಿಯವರೇ ನಿಜ ಜನಪ್ರತಿನಿಧಿಗಳು ಎಂದು ಹಿರಿಯ ನಟ, ನಿರ್ದೇಶಕ, ರಂಗಕರ್ಮಿ ಪ್ರಕಾಶ ಬೆಳವಾಡಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ರಂಗ ಸಂಗಮ ಕಲಾ ವೇದಿಕೆ ವತಿಯಿಂದ ಹವ್ಯಾಸಿ ರಂಗಭೂಮಿ ನಿರ್ದೇಶಕ ಡಾ| ಶ್ರೀಪಾದ ಭಟ್ ಧಾರೇಶ್ವರ ಅವರಿಗೆ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಎಲ್ಲ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಬೆಂಗಳೂರಿಗೆ ಸೇರಿ ಬಿಡುತ್ತಾರೆ. ಅವರ ಮಕ್ಕಳು ಯಾವುದೋ ಲಾಭದಾಯ ವ್ಯಾಪಾರ ಮಾಡುತ್ತಾ ಜನರ ಬಗ್ಗೆ ಚಿಂತಿಸುವುದಿಲ್ಲ. ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಿ ಅವರನ್ನು ಜಾಗೃತರನ್ನಾಗಿ ಮಾಡಿದರೆ, ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಎನ್ನುವ ಭಯ ಜನಪ್ರತಿನಿಧಿಗಳಿಗೆ ಇದೆ. ಜನತೆ ನಮ್ಮ ಮೇಲೆಯೇ ಅವಲಂಬಿತರಾಗಿರಲಿ ಎಂದು ಅವರು ಬಯಸುತ್ತಿದ್ದಾರೆ. ಇದು ಎಲ್ಲ ಪಕ್ಷಗಳಿಗೂ ಅನ್ವಯ ಎಂದರು.
ರಾಜಕಾರಣಕ್ಕೆ ತದ್ವಿರುದ್ಧವಾಗಿದ್ದು ರಂಗಭೂಮಿ. ಸಮಾಜದ ಅನುಭವವನ್ನು ಕಟ್ಟಿಕೊಟ್ಟು ಏನಾದರೂ ಸ್ಥಾಯಿಭಾವವನ್ನು ರಂಗಭೂಮಿ ಉಳಿಸುತ್ತದೆ. ರಂಗಭೂಮಿಗೆ ದೊಡ್ಡ ಬಂಡವಾಳ ಬೇಕಾಗಿಲ್ಲ. ದೊಡ್ಡ ಸಮುದಾಯ, ಪ್ರೇಕ್ಷಕ ವರ್ಗದ ಅಗತ್ಯವಿಲ್ಲ. ನಟನೆ ನೈಪುಣ್ಯತೆ, ನಾಟಕ ನೋಡುವ ಸಹೃದಯರು ಇದ್ದರೆ ಸಾಕು. ರಂಗಭೂಮಿ ನಾಟಕದಿಂದ ಸಮಾಜಕ್ಕೆ ದೊಡ್ಡ ಸಂದೇಶ ಮುಟ್ಟಿಸಬಹುದು ಎಂದು ಹೇಳಿದರು.
ಶೇ. 70 ಆದಾಯ ಬೆಂಗಳೂರಿಗೆ ಖರ್ಚು: ಕರ್ನಾಟಕದ ಆದಾಯದಲ್ಲಿ ಶೇ.70ರಷ್ಟು ಆದಾಯ ಬೆಂಗಳೂರಿನಲ್ಲೇ ಕ್ರೋಢೀಕರಣವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಬೆಂಗಳೂರು ಅಭಿವೃದ್ಧಿಗೆ ರಾಜ್ಯದ ಶೇ.70ರಷ್ಟು ಆದಾಯವನ್ನು ಖರ್ಚು ಮಾಡಲಾಗುತ್ತದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಶ್ರೀಪಾದ ಭಟ್, ನನ್ನ ರಂಗಭೂಮಿ ಪ್ರವೇಶ ಒಂದು ಆಕಸ್ಮಿಕ. ಒಲವು, ಸ್ನೇಹ, ಪ್ರೇಮ ರಂಗಕರ್ಮಿಗಳ ಜೀವಾಳ. 30 ವರ್ಷಗಳಿಂದ ರಂಗಭೂಮಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಮೂಹವನ್ನು ಗ್ರಹಿಸುವ ಪಾಠವನ್ನು ಎರಡೂ ಕ್ಷೇತ್ರಗಳಿಂದ ಕಲಿತಿದ್ದೇನೆ. ರಂಗಭೂಮಿ ಇಲ್ಲದೆ ಬದುಕಲು ನನಗೆ ಸಾಧ್ಯವಿಲ್ಲ ಎಂದರು.
ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ ಆಧ್ಯಕ್ಷತೆ ವಹಿಸಿದ್ದರು. ರಂಗ ಸಮಾಜದ ಕಲಾ ವೇದಿಕೆ ಕಾರ್ಯದರ್ಶಿ ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿದರು. ಪ್ರಶಸ್ತಿ ಪುರಸ್ಕೃತರ ಬಗ್ಗೆ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಎಸ್.ಬಿ. ಜಂಗಮಶೆಟ್ಟಿ ಕುರಿತು ರಂಗಕರ್ಮಿ ಎಚ್.ಎಸ್. ಬಸವಪ್ರಭು ಮಾತನಾಡಿದರು.
ಕಲಾವೇದಿಕೆ ಅಧ್ಯಕ್ಷೆ ನಂದಾ ಕೆಲ್ಲೂರ, ಸುಭದ್ರಾ ದೇವಿ, ಉಡುಪಿಯ ಯಕ್ಷರಂಗ ತಜ್ಞ, ವಿದ್ವಾನ್ ಸುಧೀರರಾವ್, ಹಿರಿಯ ರಂಗಕರ್ಮಿ ಎಲ್ಬಿಕೆ ಆಲ್ದಾಳ, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು