ಅಮರಾವತಿಗೆ ಸಾಲ ಇಲ್ಲ: ವಿಶ್ವಬ್ಯಾಂಕ್
Team Udayavani, Jul 20, 2019, 5:18 AM IST
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 2,000 ಕೋಟಿ ರೂ. ಸಾಲ ನೀಡಬೇಕಿದ್ದ ವಿಶ್ವಬ್ಯಾಂಕ್, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಮರಾವತಿ ನಿರ್ಮಾಣಕ್ಕೆ ಸಾಲ ನೀಡುವಂತೆ ಭಾರತ ಸರ್ಕಾರ ತಾನು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿರುವುದರಿಂದ ನಿರ್ಧಾರ ಬದಲಿಸಲಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಕಾರಣವೇನು?: ಮೂಲಗಳ ಪ್ರಕಾರ, ಈ ಹಿಂದೆ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ಸರ್ಕಾರ, ಅಮರಾವತಿ ನಿರ್ಮಾಣಕ್ಕಾಗಿ ಜಮೀನು ಕೊಡಲೊಪ್ಪದ ರೈತರನ್ನು ಬೆದರಿಸಿ ಅಕ್ರಮವಾಗಿ ಅವುಗಳನ್ನು ಪಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಹಾಗಾಗಿ, ದೂರುಗಳ ತನಿಖೆಗೆ ವಿಶ್ವಬ್ಯಾಂಕ್ ಮುಂದಾಗಿತ್ತು. ಅದು ಕೇಂದ್ರ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಾಗಾಗಿ, ಅದು ಮನವಿಯನ್ನು ಹಿಂಪಡೆದಿದೆ ಎನ್ನಲಾಗಿದೆ.
ವಾಕ್ಸಮರ: ವಿಶ್ವಬ್ಯಾಂಕ್ನ ಹೊಸ ನಿರ್ಧಾರ, ಆಂಧ್ರದ ವಿಪಕ್ಷ ಟಿಡಿಪಿ ಹಾಗೂ ವೈಎಸ್ಆರ್ಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ವಿಶ್ವಬ್ಯಾಂಕ್ ಮನವೊಲಿಸುವಲ್ಲಿ ವೈಎಸ್ಆರ್ಸಿ ವಿಫಲವಾಗಿದೆ ಎಂದು ಟಿಡಿಪಿ ದೂರಿದ್ದರೆ, ಈ ಎಲ್ಲಾ ವಿದ್ಯಮಾನಗಳಿಗೆ ನಾಯ್ಡು ಕಾರಣ ಎಂದು ಟಿಡಿಪಿ ವಿರುದ್ಧ ಸರ್ಕಾರ ಹರಿಹಾಯ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ