ಸೋಮವಾರ “ವಿಶ್ವಾಸ”ದ ಆಟ

ರಾಜ್ಯಪಾಲರ ಎರಡನೇ ಸೂಚನೆಯನ್ನೂ ಧಿಕ್ಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

Team Udayavani, Jul 20, 2019, 6:00 AM IST

p-47

ಶುಕ್ರವಾರವೂ “ವಿಶ್ವಾಸ’ಕ್ಕೊಂದು ಅಂತ್ಯ ಸಿಗಲಿಲ್ಲ. ಸ್ವತಃ ರಾಜ್ಯಪಾಲರೇ ಎರಡೆರಡು ಬಾರಿ ವಿಶ್ವಾಸ ಸೂಚನೆಯನ್ನು ಮತಕ್ಕೆ ಹಾಕುವಂತೆ ಗಡುವು ವಿಧಿಸಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಪಾಲಿಸದಿದ್ದರಿಂದ ರಾಜ್ಯದಲ್ಲಿ ಹೊಸದೊಂದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ನಡುವೆಯೇ ವಿಶ್ವಾಸಮತದ ಕದನ ಸೋಮವಾರಕ್ಕೆ ಹೋಗಿದ್ದು, ಸರಕಾರ ಉಳಿಯಬೇಕಾದರೆ ಶನಿವಾರ ಮತ್ತು ರವಿವಾರ ರಾಜ್ಯ ರಾಜಕೀಯದಲ್ಲಿ ಪವಾಡಗಳೇ ನಡೆಯಬೇಕಾದೀತು. ಈಗ ಎಲ್ಲರ ಕಣ್ಣು ಸಹಜವಾಗಿಯೇ ರಾಜಭವನದತ್ತ ನೆಟ್ಟಿದೆ.

ಸಾಂವಿಧಾನಿಕ ಬಿಕ್ಕಟ್ಟು
ಗುರುವಾರ ರಾತ್ರಿ ವಿಶ್ವಾಸಮತಕ್ಕೆ ಸಿಕ್ಕ ತಿರುವು ಶುಕ್ರವಾರವೂ ಮುಂದುವರಿಯಿತು. ಅಪರಾಹ್ನ 1.30ರ ವೇಳೆಗೆ ಬಹುಮತ ಸಾಬೀತು ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೆ ರಾಜ್ಯಪಾಲರು ವಿಧಿಸಿದ್ದ ಗಡುವು ಪಾಲನೆಯಾಗಲೇ ಇಲ್ಲ. ಸ್ವಲ್ಪ ಹೊತ್ತಿನಲ್ಲೇ, ಮತ್ತೆ ರಾಜಭವನದಿಂದ ಸಿಎಂಗೆ ಎರಡನೇ ಗಡುವು ಬಂದಿತಲ್ಲದೆ, ದಿನದ ಅಂತ್ಯಕ್ಕೆ ವಿಶ್ವಾಸಮತ ಸಾಬೀತು ಮಾಡಲೇಬೇಕು ಎಂದು ಸೂಚಿಸಲಾಯಿತು. ಶುಕ್ರವಾರ ಕಳೆದರೂ ಇದೂ ಆಗಲಿಲ್ಲ. ಸಿಎಂ ರಾಜ್ಯಪಾಲರ ನಿರ್ದೇಶನ ಮೀರಿ ರುವುದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅಥವಾ ವಿಧಾನಸಭೆ ಅಮಾನತಿನಲ್ಲಿಡುವ ಸಾಧ್ಯತೆಗಳ ಚರ್ಚೆ ಶುರುವಾಗಿದೆ. ಒಂದು ವೇಳೆ ರಾಜ್ಯಪಾಲರು ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಕಳುಹಿಸಿದರೆ, ಇದನ್ನು ಮಾನ್ಯ ಮಾಡಿ ಸರಕಾರ ವಜಾ ಮಾಡುವ ಸಾಧ್ಯತೆಗಳಿವೆ.

ಗವರ್ನರ್‌ ಅಧಿಕಾರ: ತೀವ್ರ ಚರ್ಚೆ
ರಾಜ್ಯಪಾಲರ ಗಡುವು ಪತ್ರದ ಬಗ್ಗೆ ಸದನಕ್ಕೆ ಮಾಹಿತಿ ಕೊಟ್ಟ ಸಿಎಂ, ಈ ಹಂತದಲ್ಲಿ ರಾಜಭವನ ತಮಗೆ ನಿರ್ದೇಶನ ನೀಡುವ ಅಧಿಕಾರ ಇದೆಯೇ ಎಂಬ ಬಗ್ಗೆ ಸ್ಪೀಕರ್‌ ಸಲಹೆ ಕೇಳಿದರು. ರಾಜ್ಯಪಾಲರ ಪತ್ರಕ್ಕೂ ಅಸಮಾಧಾನ ಹೊರ ಹಾಕಿದ್ದಲ್ಲದೆ, ಈಗ ಅವರಿಗೆ ಕುದುರೆ ವ್ಯಾಪಾರದ ಅರಿವಾಯಿತಾ ಎಂದೂ ಪ್ರಶ್ನಿಸಿದರು. ಈ ನಡುವೆ ರಾಜ್ಯಪಾಲರ ಮಧ್ಯಪ್ರವೇಶವನ್ನು ಪ್ರಶ್ನಿಸಿ ಸಿಎಂ ಸುಪ್ರೀಂ ಕೋರ್ಟಿಗೂ ಮೊರೆ ಹೋದರು.

ಮುಂದೂಡಿಕೆ ಗದ್ದಲ
ಏನಾದರೂ ಸರಿಯೇ ಶುಕ್ರವಾರವೇ ವಿಶ್ವಾಸಮತದ ನಿರ್ಧಾರವಾಗಬೇಕು ಎಂಬುದು ಬಿಜೆಪಿ ಸದಸ್ಯರ ಒತ್ತಡ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸೋಮವಾರದವರೆಗೆ ಅವಕಾಶ ಕೊಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು. ಚರ್ಚೆ ನಡೆಸಲು ಇನ್ನೂ 20 ಮಂದಿ ಇದ್ದು, ಯಾವ ಸದಸ್ಯರ ಹಕ್ಕನ್ನೂ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂಬ ವಾದ ಮಂಡಿಸಿದರು. ಆದರೂ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು 8.15ರ ಹೊತ್ತಿಗೆ ಸದನವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದಲ್ಲದೆ, ಸೋಮವಾರವೇ ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಲು ಸಹಕರಿಸಬೇಕು ಎಂದು ಆಡಳಿತ ಪಕ್ಷಕ್ಕೆ ತಾಕೀತು ಮಾಡಿದರು.

ರೆಸಾರ್ಟ್‌ಗೆ ಶಿಫ್ಟ್
ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ 3ಪಕ್ಷಗಳ ಶಾಸಕರು ಮತ್ತೆ ಹೊಟೇಲ್‌ ಹಾಗೂ ರೆಸಾರ್ಟ್‌ಗೆ ಶಿಫ್ಟ್ ಆದರು. ಕೆಲವು ಶಾಸಕರು ತಮ್ಮ ನಾಯಕರ ಅನುಮತಿ ಪಡೆದು ಕ್ಷೇತ್ರಗಳಿಗೂ ಹೋದರು.

ನೀವು ಕರೆದುಕೊಂಡು ಹೋಗಿರುವವರನ್ನು ಅಷ್ಟು ಸುಲಭವಾಗಿ ಕರೆತರಲು ಆಗುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ನೀವು ಹರಸಾಹಸ ಮಾಡಿ ಇಷ್ಟೆಲ್ಲ ಕಸರತ್ತು ನಡೆಸಿ ಅಧಿಕಾರ ಪಡೆದುಕೊಂಡು ರಾಜ್ಯದ ಅಭಿವೃದ್ಧಿ, ಜನರ ಸೇವೆ ಯಾವ ರೀತಿ ಮಾಡು ತ್ತೀರೋ ನೋಡೋಣ. ನಾನು ರಾಜಕಾರಣದಲ್ಲಿ ಇರುತ್ತೇನೆ. ಎಲ್ಲಿಯೋ
ಓಡಿ ಹೋಗಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಮುಂದೇನಾಗಲಿದೆ?
ರಾಜ್ಯಪಾಲರ ಮುಂದಿನ ನಡೆ?
1 ರಾಜ್ಯಪಾಲರು ನಿರ್ದೇಶನ ಪಾಲನೆಯಾಗಿಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಬಹುದು.
2 ವಿಧಾನಸಭೆಯನ್ನು ಕೊಂಚ ಕಾಲ ಅಮಾನತು ಮಾಡಬಹುದು.
3 ರಾಷ್ಟ್ರಪತಿ ಆಡಳಿತ ಹೇರಲುಕೇಂದ್ರಕ್ಕೆ ಶಿಫಾರಸು ಮಾಡಬಹುದು.

ಬಿಜೆಪಿ ಏನು ಮಾಡಬಹುದು?
1 ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರಿಗೆ ಮನವಿ ಮಾಡಬಹುದು.
2 ಬಹುಮತ ಸಾಬೀತುಪಡಿಸಲಾಗದೆ ಸರಕಾರ ಪತನವಾಗಲಿ ಎಂದು ಕಾಯಬಹುದು.
3 ಅತೃಪ್ತರು ವಾಪಸ್‌ ಬರದಂತೆ ನೋಡಿಕೊಳ್ಳುವುದು ಹಾಗೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು.
4 ರಾಜ್ಯಪಾಲರ ಗಡುವನ್ನು ಪಾಲಿಸದ ಸರಕಾರದ ನಿಲುವಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬಹುದು.

ಸರಕಾರ ಏನು ಮಾಡಬಹುದು?
1 ರಾಜ್ಯಪಾಲರ ಮಧ್ಯಪ್ರವೇಶವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್‌ ಮೊರೆ ಹೋಗಿರುವ ಸರಕಾರ ಕಾನೂನು ಹೋರಾಟ ಮುಂದುವರಿಸಬಹುದು.
2 ವಿಶ್ವಾಸ ಮತ ಯಾಚನೆಗೆ ಸಾಧ್ಯವಾಗದಿರುವುದನ್ನು ಅರಿತು ಮೊದಲೇ ರಾಜೀನಾಮೆ ನೀಡಬಹುದು ಅಥವಾ ಮತಯಾಚಿಸಿ ಗೆಲ್ಲಲಾಗದೆ ಸರಕಾರ ಪತನವಾಗಬಹುದು.
3 ಬಹುಮತ ಸಾಬೀತುಪಡಿಸುವ ಸಲುವಾಗಿ ರಾಜೀನಾಮೆ ನೀಡಿರುವ ನಾಲ್ವರು ಶಾಸಕರನ್ನು ಸೆಳೆಯಬಹುದು.
4 ರಿವರ್ಸ್‌ ಆಪರೇಷನ್‌ಗೆ ಪ್ರಯತ್ನಿಸಬಹುದು.

ಟಾಪ್ ನ್ಯೂಸ್

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.