ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
Team Udayavani, Jul 21, 2019, 10:33 PM IST
ಬೆಂಗಳೂರು :ಇಡಿ ವಶದಲ್ಲಿರುವ ಬಹುಕೋಟಿ ರೂಪಾಯಿ ವಂಚನೆ ಆರೋಪಿ ಐಎಂಎ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ನನ್ನು ಎದೆನೋವಿಗೆ ಸಂಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ ಹೃದಯದಲ್ಲಿ ಮೂರು ರಂದ್ರಗಳಿವೆ ಎಂದಿದ್ದ ಮನ್ಸೂರ್ ಇಡಿ ಅಧಿಕಾರಿಗಳು ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗ ತನಗೆ ಎದೆ ನೋವು ಜಾಸ್ತಿಯಾಗಿದೆ ಎಂದು ಹೇಳಿಕೊಂಡಿದ್ದಾನೆ ಇದರಿಂದ ಕೂಡಲೇ ಇಸಿಜಿ ತಪಾಸಣೆ ಮಾಡಿಸಿದ್ದಾರೆ.
ನಂತರದಲ್ಲಿ ಹೆಚ್ಚಿನ ತಪಾಸಣೆಗಾಗಿ ಬನ್ನೇರುಘಟ್ಟದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.