ಬಿಜೆಪಿಗೆ ಅಧಿಕಾರ: ವಿಜಯೋತ್ಸವ
ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ•ಪಟಾಕಿ ಸಿಡಿಸಿ, ಸಿಹಿ ಹಂಚಿದರು
Team Udayavani, Jul 27, 2019, 1:32 PM IST
ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಹಗರಿಬೊಮ್ಮನಹಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಈ ಕುರಿತು ಜಿಪಂ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಯಡಿಯೂರಪ್ಪನವರು ರೈತಪರವಾದ ಆಡಳಿತವನ್ನು ನೀಡಲಿದ್ದಾರೆ. ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರವನ್ನು ಕಾಣಲು ಸಾಧ್ಯ. ಎಲ್ಲರನ್ನು ಒಗ್ಗೂಡಿಸಿಕೊಂಡು ಉತ್ತಮ ಆಡಳಿತವನ್ನು ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಕ್ಷೇತ್ರಾಧ್ಯಕ್ಷ ನರೆಗಲ್ ಕೊಟ್ರೇಶ, ಮಾಜಿ ಅಧ್ಯಕ್ಷ ಕೆ.ರೋಹಿತ್, ನಗರ ರಾಜ್ಯ ಪರಿಷತ್ ಸದಸ್ಯ ಕಿನ್ನಾಳ್ ಸುಭಾಷ್, ನಗರದ ಘಟಕದ ಅಧ್ಯಕ್ಷ ಸಂದೀಪ ಶಿವಮೊಗ್ಗ, ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಎಚ್.ಎಂ. ಚೋಳರಾಜ್, ಸಭೀಯಾ ಬೇಗಂ, ಬಿಜೆಪಿ ಮುಖಂಡರಾದ ಕಿನ್ನಾಳ ಸುಭಾಷ್, ಮೈನಳ್ಳಿ ಕೊಟ್ರೇಶ, ಗಿರಿರಾಜ್ ರಡ್ಡಿ, ಮಹೇಂದ್ರ, ಮಾಲವಿ ಸುರೇಶ್, ತರಕಾರಿ ಪ್ರಕಾಶ್, ಚಿತವಾಡ್ಗಿ ಪ್ರಕಾಶ್, ಮಿಲಿó ರಾಮರಡ್ಡಿ, ಪೂಜಾರ ಸಿದ್ದಪ್ಪ, ಎ.ಕೆ.ರಾಮಣ್ಣ, ನೀಲಪ್ಪ, ಉದಯ್ ಇತರರಿದ್ದರು.