ಸುಬ್ರಹ್ಮಣ್ಯ: ಶಂಕಿತ ನಕ್ಸಲರಿಗೆ ತೀವ್ರ ಶೋಧ
Team Udayavani, Jul 28, 2019, 11:02 AM IST
ಸುಬ್ರಹ್ಮಣ್ಯ: ಶಿರಾಡಿ ಘಾಟಿಯ ಎಡಕುಮೇರಿ ರೈಲು ಹಳಿಯಲ್ಲಿ ಗಸ್ತು ನಿರತ ಸಿಬಂದಿಗೆ ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಘಟನೆ ನಡೆದ ಬಳಿಕ ಅವರು ನಕ್ಸಲರೆನ್ನುವ ಸಂದೇಹದ ಮೇರೆಗೆ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್)ಯ ಯೋಧರು ಗಡಿಭಾಗದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಕಾರ್ಕಳ ಎಎನ್ಎಫ್ ಪಡೆಯ ಯೋಧರ ತಂಡವು ಶನಿವಾರವೂ ಸಕಲೇಶಪುರ ಮತ್ತು ದ.ಕ. ಗಡಿಭಾಗದಲ್ಲಿ ಶೋಧ ನಡೆಸಿತು. ಸಕಲೇಶಪುರಭಾಗದ ಬಿಸಿಲೆ ಘಾಟಿ, ಗಡಿ ಚಾಮುಂಡೇಶ್ವರಿ ಗುಡಿ ಹಾಗೂ ಪರಿಸರದ ಅರಣ್ಯದಲ್ಲಿ 12 ಮಂದಿಯ ಒಂದು ತಂಡ ಶೋಧ ಕಾರ್ಯ ನಡೆಸಿದರೆ ಇನ್ನೊಂದು ತಂಡವು ಸಂಪಾಜೆ, ಸುಬ್ರಹ್ಮಣ್ಯ, ಶಿರಾಡಿ ಮೊದಲಾದೆಡೆ ಶೋಧ ನಿರತವಾಗಿದೆ. ಈ ವೇಳೆ ನಕ್ಸಲರ ಚಲನವಲನ ಕುರಿತು ತಂಡಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ.
ಕಾರ್ಮಿಕರಿಗೆ ಅಭಯ
ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಕಾರ್ಮಿಕರು ಭೀತಿಗೆ ಒಳಗಾಗದಂತೆ ಧೈರ್ಯ ತುಂಬುವ ಕೆಲಸವನ್ನು ಎಎನ್ಎಫ್ ಯೋಧರು ಮತ್ತು ಪೊಲೀಸರು ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳ ಕುರಿತು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೇ ಕಾರ್ಮಿಕ ರಾಜು ಅವರಿಗೆ ಪಿಸ್ತೂಲ್ಧಾರಿಗಳಿಬ್ಬರು ಜು. 22ರಂದು ಬೆದರಿಕೆ ಹಾಕಿದ್ದರು. ಅವರು ಶಂಕಿತ ನಕ್ಸಲರು ಎಂಬ ಅನುಮಾನದ ಮೇರೆಗೆ ದ.ಕ. – ಸಕಲೇಶಪುರ – ಕೊಡಗು ಜಿಲ್ಲೆಗಳ ಗಡಿ ಭಾಗದ ಅರಣ್ಯ ಹಾಗೂ ಜನವಸತಿ ಪ್ರದೇಶಗಳ ಮೇಲೆ ಎಎನ್ಎಫ್ ಪಡೆ ಹದ್ದಿನ ಕಣ್ಣಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು
ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ
BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್ ಜಾಮ್
Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ