10 ವರ್ಷ ಬಳಿಕ ಹೂವರಳಿಸಿದ ಬಿಳಿ ಕಲ್ನಾರು


Team Udayavani, Aug 2, 2019, 9:13 AM IST

huballi-tdy-2

ಧಾರವಾಡ: ಕಾರ್ಗಿಲ್ ಸ್ತೂಪದ ಬಳಿ ಹೂವರಳಿಸಿದ ಬಿಳಿ ಕಲ್ನಾರು.

ಧಾರವಾಡ: ಬಿಳಿ ಕಲ್ನಾರು ಎಂಬ ಕನ್ನಡದ ಹೆಸರಿನ, ಅಗೇವ್‌ ಅಂಗುಸ್ಟಿ´ೋಲಿಯಾ ವೈಟ್ ಸೆಂಟರ್‌ 10 ವರ್ಷಗಳ ಬಳಿಕ ಪ್ರಥಮ ಬಾರಿಗೆ ಹೂವರಳಿಸಿ ದಾರಿಹೋಕರ ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಗಿಲ್ ಸ್ತೂಪದ ಆವರಣದಲ್ಲಿ ಪಂಡಿತ ಮುಂಜಿ ಅವರು ನೆಟ್ಟ ಎರಡು ಬಿಳಿ ಕಲ್ನಾರುಗಳ ಪೈಕಿ ಎಡಬದಿಯ ‘ಅಗೇವ್‌’ ಹೂವರಳಿಸಿ ತನ್ನ ಬದುಕಿನ ಸಂಧ್ಯಾಕಾಲ ತಲುಪಿದೆ. ಈ ಸೊಬಗನ್ನು ಒಂದು ತಿಂಗಳ ಕಾಲ ಸವಿಯಬಹುದು. ಕ್ರಮೇಣ ಈ ಅಲಂಕಾರಿಕ ಸಸ್ಯ ಒಣಗುತ್ತ ಬಂದು ಇಹದ ವ್ಯಾಪಾರ ಮುಗಿಸುತ್ತದೆ.

ಬಿಳಿ ಕಲ್ನಾರು ಬುಡದಲ್ಲಿ ಎಲೆ ಹೂವು ಆದರೆ, ತನ್ನ ಎತ್ತರದ ಕಾಂಡದ ಕೊಂಬೆಗಳಿಂದ ನೆಲಕ್ಕುರುಳಿಸುವ ಹೂವುಗಳಲ್ಲಿ ಬೇರು ಸಮೇತ ಮರಿ ಗಿಡ ಇರುವುದು ವಿಶೇಷ. ಸಾಧನಕೇರಿ-ಜಮಖಂಡಿಮಠ ಲೇಔಟ್‌ನ ಸಮುದಾಯ ಉದ್ಯಾನದಲ್ಲಿ ಪಂಡಿತ ಮುಂಜಿಯವರು ಇಪ್ಪತ್ತು ವರ್ಷಗಳ ಹಿಂದೆ ಈ ಬಿಳಿ ಬಣ್ಣದ ಅಲಂಕಾರಿಕ ಕಲ್ನಾರು ನೆಟ್ಟಿದ್ದರು. ಕಾರ್ಗಿಲ್ ಸ್ತೂಪ ನಿರ್ಮಾಣಗೊಳ್ಳುತ್ತಿದ್ದಂತೆ ಸ್ತೂಪದ ಆವಾರ ಅಂದಗೊಳಿಸಲು ಉದ್ಯಾನ ನಿರ್ಮಾಣದ ಹೊಣೆ ಮುಂಜಿಯವರೇ ಹೊತ್ತಿದ್ದರು. ಕಾಕತಾಳೀಯ ಎಂಬಂತೆ ಜಮಖಂಡಿಮಠ ಲೇಔಟ್ ಉದ್ಯಾನದಲ್ಲಿ ಬಿಳಿ ಕಲ್ನಾರು ಆಗ ಹೂ ಬಿಟ್ಟಿತು. ಆ ಪೈಕಿ ನೂರಾರು ಸಸಿಗಳನ್ನು ‘ಪಾಟಿಂಗ್‌’ ಮಾಡಿ, ಉಚಿತವಾಗಿ ಆಸಕ್ತರಿಗೆ ಹಂಚಿದವರು ಮುಂಜಿ. ಅವುಗಳ ಪೈಕಿ ಆಯ್ದ ಎರಡು ಸಸಿಗಳನ್ನು 10 ವರ್ಷಗಳ ಹಿಂದೆ ಕಾರ್ಗಿಲ್ ಸ್ತೂಪದ ಸ್ವಾಗತ ಕಮಾನಿನ ಬಳಿ ನೆಟ್ಟರು. ಮುಂದಿನ ಆರು ತಿಂಗಳಲ್ಲಿ ಬಲಬದಿಯ ಕಲ್ನಾರು ಕೂಡ ಹೂ ಬಿಡುವ ಸಿದ್ಧತೆಯಲ್ಲಿದೆ. ಈಗ ಮತ್ತೆ ಪುಟ್ಟ ಸಸಿ ಸಂಗ್ರಹಿಸಿ ಆಸಕ್ತರಿಗೆ ಒದಗಿಸುವ ಸಿದ್ಧತೆಯಲ್ಲಿದ್ದಾರೆ ಪಂಡಿತ ಮುಂಜಿ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.