ಉಕ್ಕು ಕಂಪನಿಗಳಿಗೆ ಮುಚ್ಚುವ ಭೀತಿ
Team Udayavani, Aug 4, 2019, 5:52 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಉಕ್ಕು ಉದ್ಯಮದ ಪ್ರಧಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಮ್ಶೆಡ್ಪುರದಲ್ಲಿ 30 ಕಂಪನಿಗಳು ಮುಚ್ಚುವ ಸ್ಥಿತಿಯಲ್ಲಿವೆ. ಅವುಗಳಲ್ಲಿ ಟಾಟಾ ಮೋಟರ್ಸ್ ಕೂಡ ಸೇರಿದೆ. ಕಳೆದ ತಿಂಗಳಿಂದ ಈಚೆಗೆ ನಾಲ್ಕನೇ ಬಾರಿಗೆ ಗುರುವಾರದಿಂದ ಶನಿವಾರದ ವರೆಗೆ (ಆ.3) ಸಂಸ್ಥೆಗೆ ರಜೆ ಘೋಷಿಸಲಾಗಿತ್ತು
ಜೆಮ್ಶೆಡ್ಪುರದ ಆದಿತ್ಯಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ವಾಹನಗಳ ಬಿಡಿಭಾಗ ತಯಾರಿಸುವ ಕಾರ್ಖಾನೆಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ಟಾಟಾ ಮೋಟರ್ಸ್ ತನ್ನ 1 ಸಾವಿರ ತಾತ್ಕಾಲಿಕ ನೌಕರರನ್ನು ಸದ್ಯಕ್ಕೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದೆ. 2 ತಿಂಗಳಲ್ಲಿ 15 ದಿನ ಮಾತ್ರ ಉತ್ಪಾದನಾ ಪ್ರಕ್ರಿಯೆ ನಡೆದಿದೆ. ಪೂರ್ಣಕಾಲಿಕ ಉದ್ಯೋಗಿಗಳು ಆ.5ರ ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ವಿದ್ಯುತ್ ಶುಲ್ಕದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರಿಂದ ಕೂಡ 30 ಕಂಪನಿಗಳಿಗೆ ಕಷ್ಟ ಉಂಟಾಗಿದೆ. ವಾಹನೋದ್ಯಮ ಕ್ಷೇತ್ರದಲ್ಲಿ ಉಂಟಾಗಿರುವ ಹಿಂಜರಿತ ಕೂಡ ಈ ಬೆಳವಣಿಗೆಗೆ ಕಾರಣ. ಇಂಥ ಬೆಳವಣಿಗೆ ಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಪ್ರತಿ 2-3 ವರ್ಷಗಳಿಗೆ ಇಂಥ ಪರಿಸ್ಥಿತಿ ಬರುತ್ತದೆ ಎಂದು ಆದಿತ್ಯಪುರ ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಇಂದ್ರ ಅಗರ್ವಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
Constitution ಬದಲಿಸಲು ಕಾಂಗ್ರೆಸ್ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ
Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್!