ಏಡ್ಸ್‌-ಕ್ಯಾನ್ಸರ್‌ಗಿಂತಲೂ ಜಾತೀಯತೆ ಮಾರಕ

•ಪ್ರಾಣ ಪ್ರತಿಷ್ಠಾಪಣೆ ಹೆಸರಲ್ಲಿ ತಳ ಸಮಾಜ ತುಳಿತ: ಸತ್ಯಂಪೇಟೆ •ಹಬ್ಬದ ಹೆಸರಲ್ಲಿ ಹಾಲು ವ್ಯರ್ಥ: ಸತೀಶ ಕಳವಳ

Team Udayavani, Aug 5, 2019, 9:19 AM IST

bg-tdy-3

ಬೆಳಗಾವಿ: ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಬಸವ ಪಂಚಮಿ ಚಿಂತನಾಗೋಷ್ಠಿಯಲ್ಲಿ ಶಾಸಕ ಸತೕಶ ಜಾರಕಿಹೊಳಿ ಮಾತನಾಡಿದರು.

ಬೆಳಗಾವಿ: ಜಾತೀಯತೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ರಕ್ತದ ಕಣಗಳಲ್ಲಿ ಹಾಗೂ ನರ ನಾಡಿಗಳಲ್ಲಿ ಹರಡಿಕೊಂಡಿದ್ದು, ಇದು ಏಡ್ಸ್‌-ಕ್ಯಾನ್ಸರ್‌ಗಿಂತಲೂ ಮಾರಕವಾಗಿದೆ ಎಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಾಗ ಪಂಚಮಿ ಹಬ್ಬದಂದು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರವಿವಾರ ನಡೆದ ಬಸವ ಪಂಚಮಿ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಶ್ನೆಗಳಿಲ್ಲದ ಸಮಾಜ ಸತ್ತು ಹೋಗಿದೆ. ಸಮಾಜ ಪ್ರಶ್ನೆ ಮಾಡುವುದನ್ನೇ ಮರೆತಿರುವುದರಿಂದ ಜಾತೀಯತೆಯ ಬೀಜ ಮೊಳಕೆ ಒಡೆದು ಎಲ್ಲ ಕಡೆಯೂ ಜಾತಿ ಭ್ರಮೆ ಪಸರಿಸಿದೆ. ಇದರಿಂದ ವ್ಯಕ್ತಿತ್ವ ವಿಕಸನ ನಾಶವಾಗುತ್ತಿದೆ. ಸಮಾಜ ಸುಧಾರಣೆಯತ್ತ ಸಾಗಬೇಕಾದರೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.

ಸುಳ್ಳು ಹೇಳುವ ಮೂಲಕ ನಮ್ಮನ್ನು ನಾವು ವಂಚನೆ ಮಾಡಿಕೊಳ್ಳುತ್ತಿದ್ದೇವೆ. ಮನಸ್ಸಿನ ಮಾತು ಕೇಳುತ್ತಿಲ್ಲ. ವಚನ, ಸಂವಿಧಾನ, ಒಳ್ಳೆಯ ವ್ಯಕ್ತಿಗಳಿಂದ ಬದುಕು ಸುಧಾರಣೆ ಮಾಡಿಕೊಳ್ಳಬೇಕು. ದೇವರಿಗೆ ಹಾಲು ಎರೆಯುವುದು ಅವಶ್ಯಕತೆ ಇಲ್ಲ. ಪುರೋಹಿತಶಾಹಿಗಳು ಬೆಣ್ಣೆ, ಹಾಲು, ತುಪ್ಪ ತಿನ್ನುತ್ತಿದ್ದರೆ, ನಮಗೆ ಗೋ ಮೂತ್ರದ ಕುಡಿಸುತ್ತಿದ್ದಾರೆ. ಹುಲಿಯ ಕ್ರೌರ್ಯಕ್ಕಿಂತ ನರಿ ಕ್ರೌರ್ಯ ಬಹಳ ಕೆಟ್ಟದ್ದಾಗಿರುತ್ತದೆ ಎಂದರು.

ಮಂದಿರ, ದೇವಸ್ಥಾನಗಳನ್ನು ಕೆಳ ಸಮುದಾಯದ ಜನರೇ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದರೆ ಪ್ರಾಣ ಪ್ರತಿಷ್ಠಾಪಣೆ ಹೆಸರಲ್ಲಿ ತಳ ಸಮಾಜವನ್ನು ತುಳಿಯುತ್ತಿದ್ದಾರೆ. ವೇದ, ಪುರಾಣ, ಶಾಸ್ತ್ರ ಓದಿಕೊಂಡವರು ಮನುಷ್ಯತ್ವ ತಿಳಿದುಕೊಂಡಿಲ್ಲ. ಮನಸ್ಸಿನ ಮೈಲಿಗೆ ತೊಳೆದುಕೊಳ್ಳದೇ ಕೇವಲ ಬಾಯಲ್ಲಿ ಜ್ಞಾನ ಇಟ್ಟುಕೊಂಡು ಆಚರಣೆಯಲ್ಲಿ ಅಜ್ಞಾನ ತುಂಬಿಕೊಂಡಿದ್ದಾರೆ. ಇತಿಹಾಸವನ್ನು ಕಣ್ತೆರೆದು ನೋಡಬೇಕು, ಮನಸ್ಸು ಬಿಚ್ಚಿ ಓದಬೇಕು ಎಂದರು.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಪುರೋಹಿತಶಾಹಿಗಳು ನಂಬಿಕೆಗಳನ್ನು ಮೂಢನಂಬಿಕೆಗಳನ್ನಾಗಿ ಬದಲಾವಣೆ ಮಾಡಿದ್ದಾರೆ. ಕೆಲಸದ ಆಧಾರದ ಮೇಲೆ ಜಾತಿಗಳನ್ನಾಗಿ ವಿಭಜನೆ ಮಾಡಲಾಯಿತು. ಸ್ವಾತಂತ್ರ್ಯಕ್ಕಿಂತ ಮುಂಚೆ ಜನಸಂಖ್ಯೆಗಿಂತಲೂ ದೇವರ ಸಂಖ್ಯೆಯೇ ಹೆಚ್ಚಿತ್ತು. ಸಮಾಜವನ್ನು ಬದಲಾಯಿಸಬೇಕಾಗಿದ್ದು, ಮೌಡ್ಯದಿಂದ ಹೊರಬರಬೇಕಾಗಿದೆ. ಮೌಡ್ಯದ ಹೆಸರಲ್ಲಿ ಶೋಷಣೆ ಮಾಡುತ್ತಿರುವುದನ್ನು ಇತಿಹಾಸ, ಪುಸ್ತಕ ಓದುವುದರಿಂದ ಮಟ್ಟ ಹಾಕಬೇಕು ಎಂದರು.

ಕಳೆದ ನಾಲ್ಕು ವರ್ಷಗಳಿಂದ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಸಾಮಾಜಿಕ ಹೋರಾಟಗಳಲ್ಲಿ ಸೋತರೂ ನಾವು ಇದನ್ನು ನಿರಂತರವಾಗಿ ಮುಂದುವರಿಸುತ್ತೇವೆ. ಪುರೋಹಿತಶಾಹಿಗಳು ಬುದ್ಧನನ್ನು ದೇಶ ಬಿಟ್ಟು ಓಡಿಸಿದ್ದಾರೆ. ಬಸವಣ್ಣನನ್ನು ಹತ್ಯೆ ಮಾಡಿದ್ದಾರೆ. ಇವರ ವಿಚಾರಗಳನ್ನು ವಿರೋಧಿಸುವವರು ಮುಂಚೂಣಿಯಲ್ಲಿದ್ದು, ಭಾರತ ಮಾತಾ ಕೀ ಜೈ ಘೋಷಣೆ ಕೂಗುತ್ತಿದ್ದಾರೆ ಎಂದು ಟೀಕಿಸಿದರು.

ವಿಶ್ವಗುರು ಬಸವ ಮಂಟಪ ಸಂಚಾಲಕ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕಲ್ಯಾಣ ಕ್ರಾಂತಿ ಮಾಡಲು ಎಲ್ಲ ಶರಣರ ಶ್ರಮ ವಹಿಸಿದ್ದಾರೆ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಶರಣರಿಂದಾಗಿದೆ. ಇಂದಿನ ಸಮಾಜಕ್ಕೆ ಇದು ಮಾದರಿಯಾಗಿದೆ ಎಂದರು.

ನಾಗರ ಪಂಚಮಿಯ ದಿನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿದರು. ಶಂಕರ ಗುಡಸ, ಅರವಿಂದ ಪರುಶೆಟ್ಟಿ, ಆರ್‌.ಎಸ್‌. ದರ್ಗೆ ಇದ್ದರು. ಮಹಾಂತೇಶ ತೋರಣಗಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

ಟಾಪ್ ನ್ಯೂಸ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.