ಸಾಹಿತಿಗಿರಲಿ ವಾಸ್ತವವಾದಿತನ-ಸಾಮಾಜಿಕ ಜವಾಬ್ದಾರಿ

ಬರೀ ಕನಸುಗಾರಿಕೆ, ಅದರ ಚಿತ್ರಣದಿಂದ ಸಾಹಿತ್ಯದ ಆಶಯ, ಹಂಬಲ ಈಡೇರಲಾರದು

Team Udayavani, Aug 5, 2019, 4:14 PM IST

5-AGUST-36

ದಾವಣಗೆರೆ: ಅಣಬೇರು ತಾರಕೇಶ್‌ರವರ 'ಒಂಟಿ ಪಯಣ', ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ 'ಒಡಲ ಹನಿಗಳು' ಕವನ ಸಂಕಲನಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

ದಾವಣಗೆರೆ: ಕವಿ, ಲೇಖಕ, ಸಾಹಿತಿ ಸದಾ ವಾಸ್ತವವಾದಿತನ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಖ್ಯಾತ ಸಾಹಿತಿ ಡಾ| ಆನಂದ ಋಗ್ವೇದಿ ಆಶಿಸಿದ್ದಾರೆ.

ಭಾನುವಾರ ರೋಟರಿ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು, ಜನಮಿಡಿತ ದಿನಪತ್ರಿಕೆ, ಭಾವಸಿರಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಅಣಬೇರು ತಾರಕೇಶ್‌ರವರ ಮೂರನೇ ಕವನ ಸಂಕಲನ ಒಂಟಿ ಪಯಣ… ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ ಪ್ರಥಮ ಚುಟುಕು ಸಂಕಲನ ಒಡಲ ಹನಿಗಳು… ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿ, ಸಾಹಿತಿ ವರ್ತಮಾನದ ತಲ್ಲಣ, ಸಮಸ್ಯೆಗಳ ಬಗ್ಗೆ ತನ್ನ ಓದುಗರ ಮುಂದೆ ಇಡಬೇಕು. ವರ್ತಮಾನದ ಇತಿಹಾಸಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.

ಇಂದಿನ ಆಧುನಿಕರಣ ಕಾಲಘಟ್ಟದಲ್ಲಿ ಮಾನವೀಯತೆ ಕೊರತೆ ಕಾಣಬರುತ್ತಿದೆ. ಭಾವನೆಯ ಪ್ರತೀಕವಾಗಿರುವ ಪ್ರೀತಿ ಎನ್ನುವುದು ತೀರಾ ವ್ಯವಹಾರಿಕ ವಸ್ತುವಿನಂತಾಗುತ್ತಿದೆ. ಅನೇಕ ಕಾರಣಗಳಿಂದ ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒಂಟಿತನದ ಜೀವನ ನಡೆಸುವಂತಾಗಿದೆ. ಅಂತಹ ಒಂಟಿತನದ ಕುರಿತಂತೆ ಅಣಬೇರು ತಾರಕೇಶ್‌ ಒಂಟಿ ಪಯಣ…. ಕವನ ಸಂಕಲನದಲ್ಲಿ ಅನೇಕ ಕವಿತೆಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕವಿ, ಸಾಹಿತಿ ಭ್ರಮಾಲೋಕದಲ್ಲೇ ಸುತ್ತಾಡುವ ಬದಲಿಗೆ ವಾಸ್ತವತೆಯ ಪ್ರತಿರೂಪ ಆಗಬೇಕು. ವರ್ತಮಾನದ ಇತಿಹಾಸದ ಅನುಭವಗಳ ಸಾಹಿತ್ಯಕವಾಗಿ ದಾಖಲಿಸುತ್ತಾ ಸಾಗಬೇಕು. ಬರೀ ಕನಸುಗಾರಿಕೆ, ಅದರ ಚಿತ್ರಣದಿಂದ ಸಾಹಿತ್ಯದ ಆಶಯ, ಹಂಬಲ ಈಡೇರಲಾರದು. ವಾಸ್ತವತೆಯ ಕುರಿತು ಬರೆದಾಗ ಅದು ಮುಂದಿನ ಇತಿಹಾಸ ಆಗುತ್ತದೆ ಎಂದು ತಿಳಿಸಿದರು.

ಈಗಿನ ವಾತಾವರಣದಲ್ಲಿ ನಂಬಿಕೆಯ ಕೊರತೆಯಿಂದಾಗಿಯೇ ದಾಂಪತ್ಯದ ನಡುವೆ ಅಪಸ್ವರ ಹೆಚ್ಚಾಗುತ್ತಿದೆ. ಬೇರೆಯಾಗುವ ವಿಚ್ಛಿದ್ರಕಾರಿತನ ಸುಳಿದಾಡುತ್ತಿದೆ. ಎಲ್ಲರಲ್ಲೂ ಒಂಟಿತನ ಕಾಡುತ್ತಿದೆ. ಒಂಟಿಯಾಗಿಯೇ ಬದುಕುವುದು ಸಾಮಾನ್ಯ ಎನ್ನುವಂತಾಗುತ್ತಿರುವುದರ ನಡುವೆ ಸಮುದಾಯಿಕ ಬದುಕು ಹೇಗೆ ಸಾಧ್ಯ ಎಂಬುದು ಕವಿಯನ್ನು ಕಾಡುತ್ತಿದೆ. ಮಾನವೀಯತೆ ಕಾಣೆಯಾಗುತ್ತಿರುವ ಕುರಿತಂತೆ ಇರುವ ಮರೆಯಾದ ಮಾಣಿಕ್ಯ… ಎಂಬ ಕವನದಲ್ಲಿ ಅತ್ಯಾಚಾರಕ್ಕೀಡಾದ ಅಪ್ರಾಪ್ತೆಗೆ ಶಾಂತಿ ಸಿಗಲವ್ವ ನಿನಗೆ… ಎಂಬ ಕವಿಯ ಪ್ರಾರ್ಥನೆ ಆತನ ಬಯಕೆ, ಉದ್ದೇಶ, ಭಾವನೆಯನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ವರ್ತಮಾನದ ಇತಿಹಾಸದ ಸಾಹಿತ್ಯದ ಹೊನಲು ಹರಿದು ಬರುವಂತಾಗಲಿ ಎಂದು ಆಶಿಸಿಸದರು.

ಸಾಹಿತಿ ಬಸವರಾಜ ಹನುಮಲಿ ಮಾತನಾಡಿ, ಓದುಗರಿಂದಲೇ ಯಾವುದೇ ಕಾವ್ಯ, ಲೇಖನ, ಕಾದಂಬರಿಗೆ ಬೆಲೆ, ಗೌರವ ಬರುತ್ತದೆ. ಅಣಬೇರು ತಾರಕೇಶ್‌ರವರ ಮೂರನೇ ಕವನ ಸಂಕಲನ ಒಂಟಿ ಪಯಣ… ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ ಪ್ರಥಮ ಚುಟುಕು ಸಂಕಲನ ಒಡಲ ಹನಿಗಳು.. ನಲ್ಲಿ ಪ್ರಕೃತಿ, ಪ್ರೀತಿ, ಜಾತಿ, ಆಳುವ, ವಿರೋಧ ಪಕ್ಷ, ಇಷ್ಟದ ದೇವರು.. ಬಗ್ಗೆ ಬರೆದಿಲ್ಲ. ಬದುಕು, ಜೀವನ, ಸಾಮಾಜಿಕ ಕ್ರೌರ್ಯ, ಪರಿಸರದ ವಿನಾಶ… ಇಂತಹ ವಿಚಾರಗಳ ಕವನಗಳಿವೆ. ಕವಿ ನಮ್ಮ ಸುತ್ತಮುತ್ತಲಿನ ತಲ್ಲಣ, ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದು ತಿಳಿಸಿದರು.

ಶ್ರೀ ಸೋಮೇಶ್ವರ ವಿದ್ಯಾಲಯ ಕಾರ್ಯದರ್ಶಿ ಕೆ.ಎಂ. ಸುರೇಶ್‌ ಮಾತನಾಡಿ, ಜೀವನದಲ್ಲಿ ಓದುವಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಓದುವ ಮುಖೇನ ಧನಾತ್ಮಕ ಚಿಂತನೆ ಬರುತ್ತದೆ. ಓದು ಇಲ್ಲ ಎಂದಾದಲ್ಲಿ ಋಣಾತ್ಮಕ ಚಿಂತನೆ ಹೆಚ್ಚಾಗುತ್ತದೆ. ಓದುವಿಕೆ ಶಿಕ್ಷಣ, ಸಂಸ್ಕೃತಿಯನ್ನು ಕಲಿಸಿಕೊಡುತ್ತದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಜಿ.ಎಂ.ಆರ್‌. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಗಂಗಮ್ಮ ಪರಮೇಶ್ವರಪ್ಪ, ಕೆ.ಕೆ. ಶಿವಬಸವ, ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಮಹಾರುದ್ರಸ್ವಾಮಿ ಇತರರು ಇದ್ದರು. ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು.

ಶೋಭಾ ಮಂಜುನಾಥ್‌ ಪ್ರಾರ್ಥಿಸಿದರು. ಅಪ್ಪಾಜಿ ಮುಸ್ಟೂರ್‌ ಸ್ವಾಗತಿಸಿದರು. ಸುನೀತಾ ಪ್ರಕಾಶ್‌, ಅರವಿಂದ್‌ ನಿರೂಪಿಸಿದರು. ರೇಖಾ ನಾಗರಾಜ್‌ ವಂದಿಸಿದರು.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.