ಮೋಡ ಬಿತ್ತನೆಗೆ ಸಕಲ ಸಿದ್ಧತೆ
Team Udayavani, Aug 7, 2019, 11:22 AM IST
ಸುರಪುರ: ಟೇಲರ್ ಮಂಜಿಲ್ ಆವರಣದಲ್ಲಿ ಅಳವಡಿಸಿರುವ ಮೋಡ ಬಿತ್ತನೆ ರೇಡಾರ್ ಟಾವರ್.
ಸುರಪುರ: ಹೈಕ ಭಾಗದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಸುರಪುರ ಟೇಲರ್ ಮಂಜಿಲ್ ಆವರಣದಲ್ಲಿ ರೇಡಾರ್ ಅಳವಡಿಸಲಾಗಿದ್ದು, ಮೋಡ ಬಿತ್ತನೆಗೆ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಒಳ್ಳೆ ಮುನ್ಸೂಚನೆ ನೀಡಿ, ರೈತರ ಕೈ ಹಿಡಿಯುವ ಭರವಸೆ ಮೂಡಿಸಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಪುನಃ ಬಗಾಲದ ಛಾಯೆ ಆವರಿಸಿತು. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಮೂಲಕ ರೈತರಿಗೆ ಒಂದಿಷ್ಟು ನೆರವಾಗುವ ದೃಷ್ಟಿಯಿಂದ ಸರಕಾರ ಮೋಡ ಬಿತ್ತನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.
2017-18ರಲ್ಲಿ ಟೇಲರ್ ಮಂಜಿಲ್ ಆವರಣದಲ್ಲಿ ಮೋಡ ಬಿತ್ತನೆಗಾಗಿ ರೇಡಾರ್ ಟಾವರ್ ಅಳವಡಿಸಲಾಗಿತ್ತು. ಗದಗ ಜಿಲ್ಲೆಯಿಂದ ಮೋಡ ಬಿತ್ತನೆ ಮಾಡಿ ಮಳೆ ತರಿಸಲಾಗಿತ್ತು. ಈಗ ಮಳೆ ಕೊರತೆಯಾಗಿರುವುದರಿಂದ ಪುನಃ ರೇಡಾರ್ ಟಾವರ್ ಅಳವಡಿಸಿ ಮೋಡ ಬಿತ್ತನೆ ಮಾಡಲಾಗುತ್ತಿದೆ.
ಮೋಡ ಬಿತ್ತನೆಗೆ ಕರ್ನಾಟಕದಲ್ಲಿ ಮೂರು ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಬೆಂಗಳೂರು, ಗದಗ, ಸುರಪುರ, ರೇಡಾರ್ಗಳು ಸುಮಾರು ಸುತ್ತಲಿನ 200 ಕೀ.ಮೀಟರ್ವರೆಗೆ ಸ್ಕಲಿತ ಮತ್ತು ನಿಷ್ಕಲಿತ ಮೋಡಗಳನ್ನು ಪತ್ತೆ ಮಾಡಿ ಅಂತರ ಜಾಲದ ಮೂಲಕ ಮಾಹಿತಿ ರವಾನಿಸುತ್ತದೆ. ಮಾಹಿತಿ ಆಧರಿಸಿ ಗದಗ ಕೇಂದ್ರದಿಂದ ಜಟ್ ವಿಮಾನದ ಮೂಲಕ ಸಿಲ್ವರ್ ಆಯೋಡೆಡ್ ದ್ರಾವಣವನ್ನು ಮೋಡಗಳ ಮೇಲೆ ಸಿಂಪಡಿಸಿ ಮಳೆ ತರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ