ಪ್ರವಾಹ ನಿಂತ ಮೇಲೆ ಸಂತ್ರಸ್ತರ ಬದುಕೇ ಕಷ್ಟ

•ಸಂಕಷ್ಟಗಳ ಸರಮಾಲೆ•ಸಹಜ ಸ್ಥಿತಿಗೆ ಬರಲು ತಿಂಗಳುಗಳೇ ಬೇಕು•ಆರೋಗ್ಯ ಕಾಳಜಿ ಇರಲಿ

Team Udayavani, Aug 14, 2019, 10:15 AM IST

bk-tdy-2

ಮಹಾಲಿಂಗಪುರ: ಪ್ರವಾಹ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಢವಳೇಶ್ವರದಲ್ಲಿ ತಮ್ಮ ಮನೆಗೆ ಮರಳಿ ಸ್ವಚ್ಛತೆಯಲ್ಲಿ ತೊಡಗಿರುವ ಗ್ರಾಮಸ್ಥರು.

ಮಹಾಲಿಂಗಪುರ: ಕಳೆದ 15 ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಘಟಪ್ರಭಾ ನದಿ ಪ್ರವಾಹ ಕಳೆದ ಎರಡು ದಿನಗಳಿಂದ ಇಳಿಮುಖವಾಗುತ್ತಿದೆ. ಆದರೆ, ಪ್ರವಾಹದಿಂದ ಸಂತ್ರಸ್ತರಾದವರಿಗೆ ಬದುಕು ಕಟ್ಟಿಕೊಳ್ಳಲು ಸಂಕಷ್ಟಗಳ ಸರಮಾಲೆ ಎದುರಾಗಲಿದೆ.

ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು: ನದಿಯ ಇಕ್ಕೆಲಗಳಲ್ಲಿನ ಸುಮಾರು 1ರಿಂದ 3 ಕಿ.ಮೀ.ಅಂತರದಲ್ಲಿನ ನೂರಾರು ಹಳ್ಳಿಗಳು ಜಲಾವೃತವಾಗಿವೆ. ಸಂತ್ರಸ್ತ ಹಳ್ಳಿಗಳ ಜನತೆ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ.

ಮಣ್ಣಿನ ಮನೆಗಳು ಧರೆಗೆ: ಜಲಾವೃತವಾಗಿರುವ ನಂದಗಾಂವ, ಢವಳೇಶ್ವರ, ಮಿರ್ಜಿ, ಮಳಲಿ, ಚನ್ನಾಳ ಗ್ರಾಮಗಳಲ್ಲಿನ ಮಣ್ಣಿನ ಮನೆ ಮನೆಗಳು ಬಹುತೇಕ ಬಿದ್ದಿವೆ. ಇದರಿಂದಾಗಿ ಆ ಮನೆಯ ಸಂತ್ರಸ್ತರ ಪರಿಸ್ಥಿತಿ ಅಯೋಮಯವಾಗಿದೆ.

ಜಾನುವಾರುಗಳಿಗೆ ಮೇವಿನ ಸಮಸ್ಯೆ: ಸಂತ್ರಸ್ತರಿಗಾಗಿ ಸರಕಾರ ಮತ್ತು ದಾನಿಗಳಿಂದ ಮೇವು ವಿತರಿಸುತ್ತಿದ್ದರೂ ಜಾನುವಾರುಗಳಿಗೆ ಬೇಕಾದಷ್ಟು ಮೇವು ಸಿಗದೇ ಜನರು ಪರದಾಡುತ್ತಿದ್ದಾರೆ. ಹೈನುಗಾರಿಕೆ ಮೇಲೆ ಅವಲಂಬಿತರಾದ ಕುಟುಂಬಗಳು ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿ ಆರ್ಥಿಕ ಮುಂಗ್ಗಟ್ಟು ಅನುಭವಿಸುವಂತಾಗಿದೆ.

ವಾರದ ಸಾಲದ ಸಮಸ್ಯೆ: ಬಹುತೇಕ ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆ, ಕೂಲಿ ಕೆಲಸ ನಂಬಿ, ಧರ್ಮಸ್ಥಳ ಸ್ವಸಹಾಯ ಸಂಘ, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಮುಧೋಳ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಕಂತುಗಳಲ್ಲಿ ಪಾವತಿಸುತ್ತಾರೆ. ಆದರೆ ಪ್ರವಾಹ ಬಂದು ಸಂತ್ರಸ್ತರಾಗಿರುವುದರಿಂದ ವಾರದ ಸಾಲ ತುಂಬುವುದು ಕಷ್ಟವಾಗಿ ಮತ್ತೇ ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

ರೋಗ-ರುಜಿನಗಳ ಭಯ: ಪ್ರವಾಹ ಇಳಿಮುಖವಾಗಿ ಮನೆ ಖಾಲಿಯಾಗಿದೆ ಎಂದು ತಿಳಿದು ಹಳೆಯ ಮನೆಗೆ ಹೋಗಿ ವಾಸಿಸಲು ಸಾಧ್ಯವಿಲ್ಲ. ಮನೆಗೆ ಶೇಖರಣೆಗೊಂಡ ರಾಡಿ, ಗಲೀಜು ವಸ್ತುಗಳಿಂದ ಮುಚ್ಚಿರುವುದರಿಂದ, ಸ್ವಚ್ಛತೆ, ಸಂಸಾರದ ಸಾಮಾನು- ಸರಂಜಾಮು ಸುವ್ಯವಸ್ಥಿತವಾಗಿ ಹೊಂದಿಸಲು ವಾರಗಳ ಸಮಯವೇ ಬೇಕು. ಗ್ರಾಮಗಳೆಲ್ಲ ಗಬ್ಬೆದ್ದು ನಾರುತ್ತಿರುವುದರಿಂದಾಗಿ ಜ್ವರ, ಕೆಮ್ಮು, ಕಾಲರಾ, ಡೆಂಘೀಯಂತಹ ರೋಗಗಳು ದಾಂಗುಡಿಯಿಡುವ ಭಯ ಸಂತ್ರಸ್ತರಿಗೆ ಕಾಡುತ್ತಿದೆ.

ನಿತ್ಯ ನಾಲ್ಕಾರು ಜನರಿಗೆ ಅನ್ನ ಹಾಕುವ ಸಾಮರ್ಥ್ಯ ಹೊಂದಿದ್ದ ಗ್ರಾಮಸ್ಥರು, ಇಂದು ಪ್ರವಾಹ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ಊಟ ಮಾಡುವಂತಾಗಿದೆ. ಸರಕಾರ ಮತ್ತು ದಾನಿಗಳೇ ಸಹಾಯ ಸಹಕಾರ ನೀಡಿದರೂ ಅವರ ಬದುಕು, ಸಹಜ ಸ್ಥಿತಿಗೆ ಬರಲು ಕೆಲ ತಿಂಗಳುಗಳ ಸಮಯ ಬೇಕು.

ಪ್ರವಾಹ ಪೀಡಿತ ಗ್ರಾಮಗಳಾದ ನಂದಗಾಂವ, ಢವಳೇಶ್ವರ, ಮಾರಾಪುರ ಗ್ರಾಮಗಳಲ್ಲಿ 24×7 ಆರೋಗ್ಯ ಕೇಂದ್ರ ತೆರೆದು, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಲಾವೃತಗೊಂಡ ಮನೆಗಳಲ್ಲಿ ನೀರು ಕಡಿಮೆಯಾಗಿದೆ ಎಂದು ಮನೆಗೆ ತೆರಳುವ ಮುನ್ನ ಮನೆಗಳನ್ನು ಸ್ವಚ್ಛಗೊಳಿಸಿ. ಕೆಲ ದಿನಗಳು ಕಳೆದ ನಂತರ ಅಲ್ಲಿಗೆ ಮರಳುವುದು ಉತ್ತಮ. ಸಂತ್ರಸ್ತರು ಕೆಲ ತಿಂಗಳುಗಳವರೆಗೆ ಆರೋಗ್ಯ ಜಾಗೃತಿ ವಹಿಸುವುದು ಮುಖ್ಯ.•ಸಿ.ಎಂ. ವಜ್ಜರಮಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ

ಜಲಾವೃತವಾಗಿರುವ ಢವಳೇಶ್ವರ ಗ್ರಾಮದಲ್ಲಿ ಪ್ರವಾಹದ ನೀರು ಎರಡು ದಿನಗಳಿಂದ ಇಳಿಮುಖವಾಗುತ್ತಿದೆ. ಇದರಿಂದಾಗಿ ಗ್ರಾಪಂನಿಂದ ರಸ್ತೆ ಮತ್ತು ಚರಂಡಿಗಳ ಸ್ವಚ್ಛತೆ, ಕ್ರಿಮಿನಾಶಕಗಳ ಸಿಂಪರಣೆ ಮತ್ತು ಪ್ರತಿನಿತ್ಯ ರಾತ್ರಿ ಪಾಗಿಂಗ್‌ ಮಶೀನ್‌ಗಳ ಮೂಲಕ ಕ್ರಿಮಿ ಕೀಟ ನಾಶ ಮಾಡಲು ಶ್ರಮಿಸುತ್ತಿದ್ದೇವೆ. ರಾತ್ರಿ ವೇಳೆ ಸಾರ್ವಜನಿಕರಿಗೆ ಅಲ್ಲಿ ಇರಲು ಅವಕಾಶ ನೀಡದೇ, ಗ್ರಾಮದ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ.•ಬನಪ್ಪಗೌಡ ಪಾಟೀಲ, ಅಧ್ಯಕ್ಷರು ಢವಳೇಶ್ವರ ಗ್ರಾಪಂ.

 

•ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.