ನೋವು ನುಂಗಿ ಹಾಸ್ಯ ಉಣಬಡಿಸಿದ ನಟಿ; 18ನೇ ವರ್ಷದಲ್ಲಿ 65 ವರ್ಷದ ತಾಯಿ ಪಾತ್ರ !


ನಾಗೇಂದ್ರ ತ್ರಾಸಿ, Aug 15, 2019, 6:53 PM IST

Kovai-01

ಸಿನಿಮಾರಂಗದಲ್ಲಿ ಹಾಸ್ಯ ನಟರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಾರೆ. ಆದರೆ ಅದರಲ್ಲಿ ಹಲವು ಹಾಸ್ಯ ನಟರ ವೈಯಕ್ತಿಕ ಬದುಕು ತುಂಬಾ ದುರಂತಮಯವಾಗಿರುತ್ತದೆ, ಇಲ್ಲವೇ ತ್ಯಾಗಮಯವಾಗಿರುತ್ತದೆ. ಅದಕ್ಕೆ ತಮಿಳಿನ ಕೋವೈ ಸರಳಾ ಎಂಬ ನಟಿಯ ಜೀವನಗಾಥೆ ಸಾಕ್ಷಿ! ಸುಮಾರು ಮೂರು ದಶಕಗಳ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಸರಳಾ..ಬರೋಬ್ಬರಿ 750 ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಸರಳಾ ಇಡೀ ಕುಟುಂಬಕ್ಕೆ ಜೀವನಾಧಾರವಾಗಿದ್ದರು. ನಾಲ್ಕು ಮಂದಿ ಅಕ್ಕಂದಿರು, ಅವರಿಗೆಲ್ಲಾ ಮದುವೆಯಾಗಿ ಅವರ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡಾಕೆ ಸರಳಾ. ಇಡೀ ಕುಟುಂಬದ ಹೊಣೆ ಹೊತ್ತಿದ್ದ ಕೋವೈ ಸರಳಾ ಅವರನ್ನು ಈಗ ಇಡೀ ಕುಟುಂಬವೇ ಮಾತನಾಡಿಸದೆ ನಿರ್ಲಕ್ಷ್ಯ ತೋರಿಸುತ್ತಿದೆಯಂತೆ! ತೆರೆಯ ಮೇಲೆ ಲಕ್ಷಾಂತರ ಪ್ರೇಕ್ಷಕರನ್ನು ನಕ್ಕುನಗಿಸುತ್ತಿದ್ದ ನಟಿಯ ಖಾಸಗಿ ಬದುಕು ಅದೆಷ್ಟು ನೋವಿನಿಂದ ಕೂಡಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ!

10ನೇ ತರಗತಿಯಲ್ಲಿದ್ದಾಗ 32ವರ್ಷದ ಗರ್ಭಿಣಿ ಪಾತ್ರ ಮಾಡಿದಾಕೆ ಸರಳಾ:

ಕೊಯಂಬತ್ತೂರಿನಲ್ಲಿ 1962ರಲ್ಲಿ ಜನಿಸಿದ್ದ ಸರಳಾಗೆ ಅಂದಿನ ಸೂಪರ್ ಸ್ಟಾರ್ ಎಂಜಿಆರ್ ಸಿನಿಮಾಗಳನ್ನು ನೋಡುತ್ತ, ನೋಡುತ್ತ ನಟನೆಯಲ್ಲಿ ಆಸಕ್ತಿ ಬೆಳೆಯತೊಡಗಿತ್ತು. ಹೀಗೆ ತಂದೆ ಹಾಗೂ ಸಹೋದರಿಯರ ಬೆಂಬಲದೊಂದಿಗೆ ಸರಳಾ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು.

9ನೇ ತರಗತಿಯಲ್ಲಿದ್ದಾಗಲೇ ಸರಳಾ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ಗಿಟ್ಟಿಸಿಕೊಂಡಿದ್ದರು. ಅದರಂತೆ  ವೆಳ್ಳಿ ರಥಂ ಎಂಬ ಮೊದಲ ಸಿನಿಮಾದಲ್ಲಿ ವಿಜಯ್ ಕುಮಾರ್ ಹಾಗೂ ಕೆಆರ್ ವಿಜಯ್ ಜತೆ ಸರಳಾ ನಟಿಸಿದ್ದರು. 10ನೇ ತರಗತಿಯಲ್ಲಿದ್ದಾಗ ಮುಂಧಾನೈ ಮುಡಿಚು ಎಂಬ 2ನೇ ತಮಿಳು ಸಿನಿಮಾದಲ್ಲಿ ಸರಳಾ 32 ವರ್ಷದ ಗರ್ಭಿಣಿ ಪಾತ್ರ ಮಾಡಿದ್ದರಂತೆ! ಈ ಸಿನಿಮಾದಲ್ಲಿ ಕೆ.ಭಾಗ್ಯರಾಜ್, ಊರ್ವಶಿ ಮುಖ್ಯಭೂಮಿಕೆಯಲ್ಲಿದ್ದರು.

ಎರಡು ವರ್ಷದ ಬಳಿಕ ಚಿನ್ನ ವೀಡು ಎಂಬ ತಮಿಳು ಚಿತ್ರದಲ್ಲಿ ನಟಿ ಸರಳಾ ಭಾಗ್ಯರಾಜ್ ಪಾತ್ರಧಾರಿಯ 65 ವರ್ಷ ಪ್ರಾಯದ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು! ಹೀಗೆ ತಮಿಳು, ತೆಲುಗು ಸೇರಿ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ಕೋವೈ ಸರಳಾ ಅವರದ್ದು.

1988ರಲ್ಲಿ ಕನ್ನಡದ ಅರ್ಜುನ್, 1993ರಲ್ಲಿ ಅಳಿಮಯ್ಯ ಹಾಗೂ ಹೆಂಡ್ತಿ ಹೇಳಿದ್ರೆ ಕೇಳ್ಬೇಕು ಸಿನಿಮಾದಲ್ಲಿ ಕೋವೈ ಸರಳಾ ನಟಿಸಿದ್ದರು. ಮಲಯಾಳಂನ ನೀರಂ, ಕೇರಳ ಹೌಸ್ ಉದಾನ್ ವಿಲ್ಪಾನಕ್ಕೂ, ಗರ್ಲ್ಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1995ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಸತೀ ಲೀಲಾವತಿ, ಕಾರಗಟ್ಟಾರನ್, ವಿಶ್ವನಾಥನ್ ರಾಮಮೂರ್ತಿ, ವಿರಾಲುಕ್ಕೇಥಾ ವೆಕ್ಕಂ ಸಿನಿಮಾ ಅವರು ಖಾಸಗಿಯಾಗಿ ಇಷ್ಟಪಡುವ ಸಿನಿಮಾಗಳಲ್ಲಿ ಒಂದಾಗಿದೆಯಂತೆ. ಸತೀ ಲೀಲಾವತಿ ಸಿನಿಮಾದಲ್ಲಿ ಕಮಲ್ ಹಾಸನ್, ರಮೇಶ್ ಅರವಿಂದ್, ಕಲ್ಪನಾ, ಹೀರಾ ಅಭಿನಯಿಸಿದ್ದರು. ಸರಳಾ ಕೂಡಾ ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಕ್ಕಂದಿರ ಮಕ್ಕಳ ಪೋಷಣೆಗಾಗಿ ಅವಿವಾಹಿತೆಯಾದ ಸರಳಾ!

ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ನಿರ್ವಹಣೆ ಮಾಡುತ್ತ, ಮಾಡುತ್ತ ನಟಿ ಸರಳಾ ನಟನೆಯೇ ತನ್ನ ಬದುಕನ್ನಾಗಿಸಿಕೊಂಡುಬಿಟ್ಟಿದ್ದರು. ನಿಮಗೆ ಮದುವೆಯಾಗಿದೆಯೇ ಎಂದು ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾಗ..ಇಲ್ಲ. ನನಗೆ ಅಷ್ಟು ಸಮಯವೂ ಇರಲಿಲ್ಲವಾಗಿತ್ತು, ನನಗೆ ನನ್ನ ಸಹೋದರಿಯರ ಮಕ್ಕಳೇ ನನ್ನ ಮಕ್ಕಳು ಎಂಬಂತೆ ಸಾಕಿ, ಸಲಹಿದ್ದೇನೆ ಎಂದು ಹೇಳಿದ್ದರು.

ಸದ್ಯ ಟಿವಿ ಸೀರಿಯಲ್ ಹಾಗೂ ಟೆಲಿವಿಷನ್ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ನಟಿ ಸರಳಾ. ತಮಿಳು ಕಾಮಿಡಿ ಶೋನಲ್ಲಿ ಖಾಯಂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಳಾ ಅವರ ಅದ್ಭುತ ಹಾಸ್ಯ ನಟನೆಗಾಗಿ 1995ರಲ್ಲಿ ತಮಿಳುನಾಡು ಸ್ಟೇಟ್ ಫಿಲ್ಮ್ ಪ್ರಶಸ್ತಿ, ನಂದಿ ಪ್ರಶಸ್ತಿ, ವಿಜಯ್ ಪ್ರಶಸ್ತಿ, ಕಾಂಚನಾದಲ್ಲಿನ ಬೆಸ್ಟ್ ಕಾಮಿಡಿ ಪಾತ್ರಕ್ಕಾಗಿ ಐಐಎಫ್ ಎ ಪ್ರಶಸ್ತಿ ಪಡೆದಿದ್ದರು.

ಟಾಪ್ ನ್ಯೂಸ್

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.