ಸುಳ್ಯ ಮಂಚಿಕಟ್ಟೆಯಲ್ಲಿ ಬಿರುಕುಬಿಟ್ಟ ಭೂಮಿ
Team Udayavani, Aug 15, 2019, 7:01 PM IST
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕಲ್ಮಡ್ಕದ ಮಂಚಿಕಟ್ಟೆಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಗೋಚರಿಸಿದೆ. ಇಲ್ಲಿ ಮಡಪ್ಪಾಡಿ ಎಂಬ ಹೊಳೆ ಹರಿಯುತ್ತಿದ್ದು, ಇದರ ಪಕ್ಕದ ಗುಡ್ಡದಲ್ಲಿ ಈ ಬಿರುಕು ಕಾಣಿಸಿಕೊಂಡಿದೆ.
ಆದರೆ ಇದಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇತ್ತೀಚೆಗೆ ಪುತ್ತೂರು ಸಮೀಪದ ಪಂಜದಲ್ಲಿ ಇದೇ ರೀತಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಳಿಕ ವಿಜ್ಞಾನಿಗಳು ಭೂಕಂಪದ ಎಚ್ಚರಿಕೆಯನ್ನು ನೀಡಿದ್ದರು.
ಎರಡು ದಿನಗಳ ಹಿಂದೆ ಪುತ್ತೂರಿನ ತೆಂಕಿಲ ದರ್ಖಾಸಿನ ಗುಡ್ಡ ಭಾಗದಲ್ಲಿ ಇದೆ ರೀತಿಯಲ್ಲಿ ಬಿರುಕು ಕಂಡಿತ್ತು.