ನೆರೆಗೆ ನೆಲೆ ಕಳೆದುಕೊಂಡ ಹಾಡಿಗರ ಯಾತನೆ


Team Udayavani, Aug 16, 2019, 3:00 AM IST

nerege

ಹುಣಸೂರು: ಮನೆ-ಗುಡಿಸಲಿನೊಳಗೆ ಚಿಮ್ಮುವ ವಸ್ತಿ(ಶೀತ) ನೀರು, ಮೇಲ್ಛಾವಣಿಯಿಂದ ಸೋರುವ ಮಳೆ ನೀರು, ಶೀತಮಯ ನೆಲದಿಂದ ಮಲಗಲಾಗದೆ ಪರದಾಡುತ್ತಿರುವ ಕಾಡುಕುಡಿಗಳು… ಮಹಾಮಳೆ ಹಾಗೂ ಲಕ್ಷ್ಮೀಣತೀರ್ಥ ನದಿಯ ಪ್ರವಾಹದಿಂದ ಹಾಡಿಗಳಲ್ಲಿ ಇಂತಹ ಹೃದಯವಿದ್ರಾವಕ ದೃಶ್ಯಗಳು ಕಂಡು ಬರುತ್ತಿವೆ.

ನಾಗರಹೊಳೆ ಉದ್ಯಾನ, ಲಕ್ಷ್ಮಣತೀರ್ಥ ನದಿಯಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂನ ಬಿಲ್ಲೇನಹೊಸಹಳ್ಳಿ (ಲಕ್ಷ್ಮಣಪುರ) ಗಿರಿಜನರು ನೆರೆಗೆ ತತ್ತರಿಸಿ ಹೋಗಿದ್ದಾರೆ. ಈ ಹಾಡಿಯಲ್ಲಿ 24 ಕುಟುಂಬಗಳು ವಾಸಿಸುತ್ತಿದ್ದರೆ, ನಾಲ್ಕೈದು ಕುಟುಂಬಗಳು ತಮ್ಮ ಜಮೀನಿನಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪ್ರವಾಹದಿಂದ ಎಲ್ಲಾ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.

ಮನೆಯೊಳಗೆ ವಸ್ತಿ ನೀರು: ಅಪಾರ ಮಳೆಯಿಂದ ಮನೆಯೊಳಗಿನ ನೆಲದಲ್ಲಿ ಬುಗ್ಗೆಯಂತೆ ನೀರು ಚಿಮ್ಮುತ್ತಿತ್ತು. ಇದೀಗ ನೀರು ಚಿಮ್ಮುವಿಕೆ ಕಡಿಮೆಯಾಗಿದ್ದರೂ ವಸ್ತಿ ಕಡಿಮೆಯಾಗಿಲ್ಲ, ನೆಲವೆಲ್ಲಾ ಶೀತ ಹಿಡಿದಿದೆ. ಮಲಗುವುದು, ಅಡುಗೆ ಮಾಡುವುದು, ಮಕ್ಕಳ ಲಾಲನೆ-ಪಾಲನೆ, ಗರ್ಭಿಣಿ-ಬಾಣಂತಿಯರ ಪಾಡು ಹೇಳತೀರದಾಗಿದೆ. ನೀರು ಇಂಗಿಸಲು ಮನೆಮುಂದೆ ತೆಗೆದಿರುವ ಚಿಕ್ಕ ಹೊಂಡದಲ್ಲಿ ಶೇಖರವಾಗುತ್ತಿದೆ.

ಕೊಚ್ಚಿ ಹೋದ ಗುಡಿಸಲು: ಹಾಡಿಗೆ ಹೊಂದಿಕೊಂಡಂತಿರುವ ತಮ್ಮ ಜಮೀನುಗಳಲ್ಲೇ ನಿರ್ಮಿಸಿಕೊಂಡಿದ್ದ ಶಿವು-ಮಂಗಳ ದಂಪತಿಯ ಮನೆ ಗೋಡೆ ಸಂಪೂರ್ಣ ಕುಸಿದಿದ್ದರೆ, ಇದರ ಸಮೀಪದಲ್ಲೇ ಹಾಡಿಯ ಗೋಪಾಲ, ಹಾಗಲ, ಶಿವಣ್ಣ ನಿರ್ಮಿಸಿಕೊಂಡಿದ್ದ ಗುಡಿಸಲುಗಳು, ಅದರೊಳಗಿದ್ದ ಪಡಿತರ, ಜೋಳ, ಹತ್ತಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಧ್ಯರಾತ್ರಿಯೇ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸಂತಸ್ತರಾಗಿರುವ ಇಡೀ ಹಾಡಿಯ ಎಲ್ಲಾ ಕುಟುಂಬಗಳು ಇದೀಗ ಬಿಲ್ಲೇನಹೊಸಹಳ್ಳಿಯ ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿದ್ದು, ಮುಂದಿನ ಜೀವನ ಹೇಗೆಂಬ ಚಿಂತೆಯಲ್ಲಿದ್ದಾರೆ.

ಶಿಥಿಲಾವಸ್ಥೆಯ ಮನೆಗಳು: ಈ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳ ಮೇಲ್ಛಾವಣಿ ಕಿತ್ತು ಹೋಗಿದೆ. ಕಲಾ°ರ್‌ ಶೀಟ್‌ಗಳು ಒಡೆದಿವೆ. ಹಲವರು ಪ್ಲಾಸ್ಟಿಕ್‌ ಹೊದಿಕೆ ಹಾಕಿದ್ದಾರೆ. ಹೀಗಾಗಿ ಮಳೆ ಬಂದರೆ ನೀರು ಮನೆಯೊಳಗೆ ಸುರಿಯುತ್ತಿದ್ದು, ದಿನವಿಡೀ ಮನೆ ಸಂರಕ್ಷಣೆಯಲ್ಲೇ ಇರುವಂತಾಗಿ, ಕೂಲಿ ಕೆಲಸಕ್ಕೆ ಕಲ್ಲು ಬಿದ್ದಿದೆ.

ರಸ್ತೆಯೋ ಕೆಸರು ಗದ್ದೆಯೋ: ಈ ಹಾಡಿಯೊಳಗಿನ ಚರಂಡಿ ಇಲ್ಲದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಅಸಹ್ಯ ಹುಟ್ಟಿಸುವ ಈ ಕೆಸರು ರಸ್ತೆಯಲ್ಲೇ ಗಿರಿಜನರು ಓಡಾಡುತ್ತಿರುವುದು ಅದರಲ್ಲೂ ಮಕ್ಕಳು ಆಟವಾಡುತ್ತಿರುವ ದೃಶ್ಯ ಎಂಥವರನ್ನೂ ಮರುಗುವಂತೆ ಮಾಡಿದೆ. ಇದರಿಂದ ಹಾಡಿಯ ಮಂದಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಪ್ರತಿ ಕುಟುಂಬದಲ್ಲೂ ಯಾತನೆ: ಹಾಡಿಯ ಸುರೇಶ್‌ ಮನೆಯೊಂದರಲ್ಲೇ ಮೂರು ಕುಟುಂಬಗಳ ಆರು ಮಕ್ಕಳು ಸೇರಿದಂತೆ ಒಟ್ಟು 13 ಮಂದಿ ವಾಸಿಸುತ್ತಿದ್ದರೆ, ಸರೋಜ ಎಂಬುವವರ ಮನೆಯಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ 10 ಮಂದಿ ವಾಸವಿದ್ದಾರೆ. ಹೀಗೆ ಎಲ್ಲಾ ಕುಟುಂಬಗಳು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದರೆ ನಿತ್ಯ ಕೂಲಿಯನ್ನೇ ಅವಲಂಬಿಸಿ ಬದುಕಿನ ಬಂಡಿ ಸಾಗಿಸಬೇಕಾದ ಇವರೆಲ್ಲ ಈಗ ಪರಿಹಾರ ಕೇಂದ್ರದಲ್ಲಿದ್ದಾರೆ.

ಹಾಡಿಯ ಮನೆಗಳಲ್ಲಿ ವಾಸಿಸಲು ಆಗುತ್ತಿಲ್ಲ, ಜೀವನ ಸಾಗಿಸುವುದೇ ಕಷ್ಟವಾಗಿದೆ. ಸರ್ಕಾರದ ಯೋಗ್ಯವಾದ ಮನೆ ನಿರ್ಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಹಾಡಿ ನಿವಾಸಿ ಸುರೇಶ್‌, ರಾಣಿ ಮತ್ತಿತರರು ಆಗ್ರಹಿಸಿದ್ದಾರೆ.

ಹಾಡಿಯ ಹಾನಿಗೊಳಗಾದ ಮನೆಗಳ ದುರಸ್ತಿಗೆ ಸೂಕ್ತ ಪರಿಹಾರ ನೀಡಲಾಗುವುದು. ಇದೀಗ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಪರಿಹಾರ ನೀಡಲಾಗುವುದು.
-ಬಸವರಾಜು. ತಹಶೀಲ್ದಾರ್‌

ಬಲ್ಲೇನಗಳ್ಳಿಯ ಹಾಡಿಯ ಅಗತ್ಯವುಳ್ಳವರಿಗೆ ಹೊಸ ಮನೆ ನಿರ್ಮಿಕೊಡುವ ಹಾಗೂ ಹಾಡಿಯ ರಸ್ತೆ-ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.
-ಗಿರೀಶ್‌, ತಾಪಂ ಇಒ

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.