ರಾಯರ ಆರಾಧನಾ ಮಹೋತ್ಸವಕ್ಕೆ ಚಾಲನೆ
Team Udayavani, Aug 16, 2019, 3:03 AM IST
ಬೆಂಗಳೂರು: ಶೇಷಾದ್ರಿಪುರದಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವಕ್ಕೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಗುರುವಾರ ಸಂಜೆ ಮಠದ ಮುಂಭಾಗದಲ್ಲಿ ಕೇಸರಿ ಬಣ್ಣದ ಮಠದ ಧ್ವಜಾರೋಹಣ ಮಾಡಿದ ಸಂಸದರು, ಗೋ ಪೂಜೆ ನೆರವೇರಿಸಿದ ನಂತರ ಆರಾಧನ ಮಹೋತ್ಸವದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಮಾಜಿ ಸಚಿವ ವಿ.ಸೋಮಣ್ಣ, ರಾಜ್ಯ ಬಿಜೆಪಿ ಕೋಶಾಧ್ಯಕ್ಷ ಸುಬ್ಬ ನರಸಿಂಹ (ಸುಬ್ಬಣ್ಣ) ಇತರರು ಪಾಲ್ಗೊಂಡಿದ್ದರು. ಪೂಜೆ ನಂತರ ನೆರೆದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.