ಸೇನೆ-ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ರಕ್ಷಾಬಂಧನ
Team Udayavani, Aug 16, 2019, 11:10 AM IST
ಲಿಂಗಸುಗೂರು: ನದಿ ತೀರದ ಯಳಗುಂದಿ ಗ್ರಾಮದಲ್ಲಿ ಸೇನೆ ಹಾಗೂ ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ತಹಶೀಲ್ದಾರ್ ಕಚೇರಿ ಮಹಿಳಾ ಸಿಬ್ಬಂದಿ ರಾಖೀ ಕಟ್ಟಿ ಶುಭ ಕೋರಿದರು.
ಲಿಂಗಸುಗೂರು: ಪ್ರವಾಹ ನಿರ್ವಹಣೆಗಾಗಿ ತಾಲೂಕಿಗೆ ಆಗಮಿಸಿದ್ದ ಸೇನಾ ಪಡೆ ಹಾಗೂ ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ತಹಶೀಲ್ದಾರ್ ಕಚೇರಿ ಮಹಿಳಾ ಸಿಬ್ಬಂದಿ ಗುರುವಾರ ರಾಖೀ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದರು.
ತಾಲೂಕಿನ ಕೃಷ್ಣಾ ನದಿಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರ ನೆರವಿಗಾಗಿ ಕಳೆದ ಹತ್ತು ದಿನಗಳಿಂದ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಆರ್ಮಿ ಹಾಗೂ ಎನ್ಡಿಆರ್ಎಫ್ ತಂಡದವರಿಗೆ ರಾಖೀ ಕಟ್ಟಿ ಸಿಹಿ ತಿನಿಸಿ ಮತ್ತಷ್ಟು ದೇಶ ಸೇವೆ ಮಾಡಲೆಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳಾದ ಶಾರದಾ, ಸುಚೇತನಾ ಇತರರು ಶುಭ ಹಾರೈಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮ ಕುಟಂಬವನ್ನು ಬಿಟ್ಟು ತಾಲೂಕಿನ ಜನತೆಯನ್ನು ಸಂಕಷ್ಟದಿಂದ ದೂರ ಮಾಡಲು ಆಗಮಿಸಿದ ಸೈನಿಕರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲ ಸದಸ್ಯರು ರಕ್ಷಾ ಬಂಧನ ಹಬ್ಬದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಇಲ್ಲಿ ಅವರಿಗೆ ನಾವೇ ಸಹೋದರಿಯರಿದ್ದಂತೆ ಎಂದು ಸಿಬ್ಬಂದಿಗಳು ರಾಖೀ ಕಟ್ಟಿ ಸಂಭ್ರಮಿಸಿದರು.
ಇದೇ ವೇಳೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ, ಎನ್ಡಿಆರ್ಎಫ್ ಕಮಾಂಡರ್ ಬಲಬೀರಸಿಂಗ್, ಕರೆ ಪವರ್ ಪ್ರೊಜೆಕ್ಟ್ ಮುರುಳಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ