ಹಸಿರುಗಂಬಳಿಯಾದ ಬಿದನೂರು ಕೋಟೆ


Team Udayavani, Aug 17, 2019, 11:26 AM IST

17-Agust-15

ಹೊಸನಗರ: ಕೋಟೆಯ ಒಳ ಹೊಕ್ಕಾಗ ನಿಮಗೆ ಸಿಗುವ ಹಸಿರುಗಂಬಳಿ ಸ್ವಾಗತ. ಇಡೀ ಕೋಟೆಯನ್ನು ಸುತ್ತುವಾಗಲೂ ಮುಂದುವರಿಯುವುದರಲ್ಲಿ ಅನುಮಾನ ಬೇಡ. ರಾಜ ದರ್ಬಾರ್‌ ಎಂದು ಕರೆಸಿಕೊಳ್ಳುವ ವಿಶಾಲವಾದ ಪ್ರದೇಶ ಸೇರಿದಂತೆ ಕೋಟೆಯ ಒಳ, ಹೊರ ಆವರಣ ಎತ್ತ ನೋಡಿದರೂ ಹಸಿರಿನ ರಾಜ್ಯಾಭಾರ ಮೇಳೈಸುತ್ತದೆ.

ಹೌದು ಮಲೆನಾಡ ನಡುಮನೆ, ಅತೀಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿರುವ ಬಿದನೂರು ಕೋಟೆ ಸಂಪೂರ್ಣ ಹಸಿರು ಕೋಟೆಯಾಗಿ ಮಾರ್ಪಟ್ಟಿದೆ. ಕೆಳದಿ ಅರಸರ ಮೂರನೇ ರಾಜಧಾನಿ ಬಿದನೂರನ್ನು ಸಾಕ್ಷೀಕರಿಸುವ ನಗರ ಕೋಟೆ.. ಹಸಿರು ಕೋಟೆಯಾಗಿ ಮಾರ್ಪಟ್ಟ ಬಗೆ ಇದು.

ಮಳೆಗಾಲ ಆರಂಭವಾಗುತ್ತಿದ್ದಂತೆ..!: ಜೂನ್‌ನಲ್ಲಿ ಮಳೆಯಾಗುತ್ತಿದ್ದಂತೆ ಕಂಡು ಬರುವ ಹಸಿರಿನ ಮೋಹಕತೆ ಡಿಸೆಂಬರ್‌ ತನಕವೂ ಆವರಿಸಿಕೊಳ್ಳುತ್ತದೆ. 3 ತಿಂಗಳು ಬಿರುಮಳೆಯಿಂದ, ನೀರಿನ ಹರಿವು, ಜಾರಿಕೆಯಿಂದಾಗಿ ಕೋಟೆ ಒಳಹೊಕ್ಕುವುದು ಕೊಂಚ ಕಷ್ಟ. ಮಳೆ ಬಿಡುವಿನ ನಂತರದಲ್ಲಿ ಕೋಟೆಯ ತುದಿಗೇರುವ ಹಾದಿ, ಅಕ್ಕ ತಂಗಿಯ ಕೆರೆ, ದರ್ಬಾರ್‌ ಹಾಲ್, ವಿಶಾಲವಾದ ಪ್ರಾಂಗಣದ ತುಂಬೆಲ್ಲ ಕೃತಕ ಲಾನ್‌ ಬೆಳೆಸಿದರೂ ಇಷ್ಟೊಂದು ಸುಂದರವಾಗಿ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬಷ್ಟು ಹಸಿರಿನ ಸೌಂದರ್ಯ ಇಲ್ಲಿ ಮನೆ ಮಾಡಿದೆ.

ಸುಮಾರು 25 ಎಕರೆಯಲ್ಲಿ ಕಂಡು ಬರುವ ಕೋಟೆ ಕೆರೆ, ನಡುವೆ ಹೆದ್ದಾರಿ.. ಪಕ್ಕದಲ್ಲಿ ಹಸಿರಿನ ದಿಬ್ಬ, ದಿಬ್ಬದ ಮೇಲಿನ ಬೃಹದಾಕಾರದ ಕಲ್ಲಿನ ಗೋಡೆ, ಬುರುಜುಗಳು ಹಸಿರಿನ ಸಂಗಮದಲ್ಲಿ ಕಣ್ಣು ಕುಕ್ಕುತ್ತವೆ.

ಸಂಜೆಹೊತ್ತು.. ಹಿತಾನುಭವದ ವಾತಾವರಣದಲ್ಲಿ ಕೋಟೆ ಒಳ ಹೊಕ್ಕುವುದೇ ಒಂದು ಅದ್ಭುತ ರಸಾನುಭವ. ಹಾಗಾಗಿ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರು ಕೂಡ ಸಂಜೆ ವಿಹಾರಕ್ಕೆ ಕೋಟೆಯನ್ನೇ ನೆಚ್ಚಿಕೊಳ್ಳುವುದು ಸಹಜ ಎನಿಸಿದೆ. ಮಳೆಗಾಲ ಆರಂಭವಾದಾಗಿನಿಂದ ಒಟ್ಟಾರೆ ಕೋಟೆಯ ಚಿತ್ರಣವೇ ಒಂದು ಅದ್ಭುತ ಕಲಾಕೃತಿ. ಅದರಲ್ಲೂ ಹಸಿರಿನ ಲೇಪನ ಇನ್ನಷ್ಟು ಮೆರುಗು ನೀಡಿದೆ.

ಹೆಚ್ಚಿದ ಪ್ರವಾಸಿಗರ ಸಂಖ್ಯೆ: ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿಗರು ಜಲಪಾತಗಳತ್ತ ಧಾವಿಸುವುದು ಮಾಮೂಲಿ. ಆದರೆ ಬಿದನೂರು ಕೋಟೆ ಸಂಪೂರ್ಣ ಹಸಿರುಟ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಒಟ್ಟಾರೆ ಹೊನ್ನೆಕಂಬಳಿ ಅರಸರು ನಿರ್ಮಿಸಿದ ನಗರ ಕೋಟೆ ತನ್ನದೇ ಮಹತ್ವವನ್ನು ಇತಿಹಾಸ ಪುಟದಲ್ಲಿ ದಾಖಲಿಸಿದೆ. ಈಗ ಮಳೆಗಾಲದಲ್ಲೂ ತನ್ನ ಹಸಿರು ಸೌಂದರ್ಯದಿಂದ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.