7ನೇ ದಿನಕ್ಕೆ ಕಾಲಿಟ್ಟ ಧರಣಿ
ತಹಶೀಲ್ದಾರ್ ಮನವೊಲಿಕೆಗೆ ಜಗ್ಗದ ರೈತರು•ಲಿಖೀತ ಹೇಳಿಕೆ ನೀಡಲು ಪಟ್ಟು
Team Udayavani, Aug 18, 2019, 10:37 AM IST
ತಾಂಬಾ: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆದ ಸರದಿ ಸತ್ಯಾಗ್ರಹ ಸ್ಥಳಕ್ಕೆ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಭೇಟಿ ನೀಡಿ ಮಾತನಾಡಿದರು.
ತಾಂಬಾ: ಇಂಡಿ ಏತ ನೀರಾವರಿ (ಗುತ್ತಿ ಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂಧಪಟ್ಟ ದೊಡ್ಡ ಹಳ್ಳದ ಬಾಂದಾರಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಸತ್ಯಾಗ್ರಹ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಸ್ಧಳಕ್ಕೆ ಭೇಟಿ ನೀಡಿದ ಇಂಡಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಮಾತನಾಡಿ, ರೈತರ ಕೆಲಸ ಮಾಡಲು ನಾವು ಉತ್ಸಕರಾಗಿದ್ದೇವೆ. ತಮ್ಮ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಪ್ರವಾಹದಿಂದ ರೈತರು ಹಾನಿಗೊಳಗಾಗಿದ್ದಾರೆ. ನಮ್ಮ ಭಾಗದ ರೈತರು ಮಳೆಯಿಲ್ಲದೆ ಬರಗಾಲದಿಂದ ಹಾನಿಗೊಳಗಾಗಿದ್ದಾರೆ. ಆದಷ್ಟು ನಮ್ಮ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ತಾವು ಧರಣಿ ಕೈ ಬಿಡಬೇಕು. ಆದಷ್ಟು ಬೇಗ ಈ ಭಾಗದಲ್ಲಿ ನೀರು ಹರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಕಂದಾಯ ನಿರೀಕ್ಷಕ ಬಿ.ಎ. ರಾವುರ ಮಾತನಾಡಿದರು.
ರೈತ ಮುಖಂಡ ಗುರಸಂಗಪ್ಪ ಬಾಗಲಕೋಟ, ಶಂಖರ ಪ್ಯಾಟಿ ಮಾತನಾಡಿ, ನಮ್ಮ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು ಹಾಗೂ 147ರವರಗೆ ನೀರು ಹರಿಸಲು ಕೆಬಿಜೆನ್ನೆಲ್ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಇರುವ ಹಾಗೆ ಮಾರ್ಚ್ 30ರವರೆಗೆ ನೀರು ಹರಿಸುತ್ತೇವೆ ಎಂದು ಲೇಖೀ ಮೂಲಕ ಕೊಟ್ಟರೆ ಮಾತ್ರ ನಾವು ಧರಣಿ ಕೈ ಬೀಡುತ್ತೇವೆ. ಇಲ್ಲದಿದ್ದರೆ ಧರಣಿ ಮುಂದುವರಿಯಲಿದೆ. ಇದಕ್ಕೆ ವಿಳಂಬ ಮಾಡಿದರೆ ಮುಂಬರುವ ದಿ ನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಉಗ್ರರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಾಯಗೊಂಡ ಪೂಜಾರಿ ಮಾತನಾಡಿದರು. ಹೋರಾಟದಲ್ಲಿ ರೈತ ಮಹಿಳೆಯರಾದ ಜಗದೇವಿ ಬಾಗಲಕೋಟ, ಶೋಭಾ ಹೊಸಮನಿ, ಜಯಶ್ರೀ ಪಾತಳಿ, ಶಶಿಕಲಾ ಗೌರ, ಈರಮ್ಮ ಸುರಾಗಾವ, ಕಲಾವತಿ ಅಲದಿ, ಸುನಂದಾ ಚಿಂಚೋಳಿ, ರೂಪಾ ನಿಂಬಾಳ, ನಿರ್ಮಲಾ ನಿಂಬಾಳ, ಲಕ್ಷ್ಮೀ ಗೊಲಗೇರಿ, ನಿರ್ಮಲಾ ಕಟ್ಟಿ, ಸರೋಜಿನಿ ಸಾಬಾ, ಪಾರ್ವತಿ ಹಲಸಂಗಿ, ಕಮಲಾ ಹಲಸಂಗಿ, ಜ್ಯೋತಿ ಚಾಳೀಕಾರ, ಸುಶೀಲಾ ಸಿಂದಗಿ, ಶ್ರೀದೇವಿ ನಿಂಬಾಳ, ಈರಮ್ಮ ಕುಂಬಾರ, ಸುಮಂಗಲಾ ಸುಕಾಲಿ, ಕಸ್ತೂರಿಬಾಯಿ ಬೆಟಗೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ