ಸ್ಲಂ ಜನರ ಬದುಕು ಕಟ್ಟಿಕೊಡಲು ಆಗ್ರಹ
Team Udayavani, Aug 19, 2019, 10:24 AM IST
ಧಾರವಾಡ: ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಳೆ ಹಾನಿಗೊಳಗಾದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹೊದಿಕೆ ವಿತರಿಸಲಾಯಿತು.
ಧಾರವಾಡ: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಧಾರವಾಡ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘ ವತಿಯಿಂದ ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಳೆ ಹಾನಿಗೊಳಗಾದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹೊದಿಕೆ ವಿತರಣಾ ಕಾರ್ಯಕ್ರಮ ಜರುಗಿತು.
ಸ್ಲಂ ಜನಾಂದೋಲನ ರಾಜ್ಯಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರ್ಕಾರವೇ ನಿರ್ಮಿಸಿ ಕೊಡುವ ಮೂಲಕ ಸ್ಲಂ ಜನರ ಬದುಕು ಕಟ್ಟಿಕೊಳ್ಳಲು ಗಂಭೀರವಾದ ಪ್ರಯತ್ನ ಮಾಡಬೇಕು. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಹೊಣೆಯನ್ನು ಐದು ವರ್ಷ ಸರ್ಕಾರವೇ ನಿಭಾಯಿಸಬೇಕು. ಪರಿಹಾರ ಸಾಮಗ್ರಿಗಳು ನೈಜ ಕುಟುಂಬಗಳಿಗೆ ತಲುಪುವ ವ್ಯವಸ್ಥೆಯನ್ನು ಜಿಲ್ಲಾಡಳಿತಗಳು ಮಾಡಬೇಕಿದೆ ಎಂದರು.
ರಸೂಲ ನದಾಫ, ವಿನೋದ ಪೈಲವಾನವಾಲೆ, ಷನ್ಮುಖಪ್ಪ ಬಡಿಗೇರ, ಧನ್ನೂ ಲಮಾಣಿ, ರೆಹಮತ್ಕಾಕರ, ಜಂಬಯ್ಯ ದುರ್ಗಮುರಗಿ, ಸೈನಾಜದಫೇದಾರ, ಮಾರುತಿ ಶಿರೋಳದವರ, ಅಫ್ಜಲ್ ಸಂಗೊಳ್ಳಿ, ದಾವಲ ಲಾಡಖಾನ, ಸುರೇಶಚಿಂಚಲಿ, ಜೇಮ್ಸ, ಸಾವಕ್ಕ ತಡಕೋಡ ಇದ್ದರು. ಪ್ರದೀಪ ಬಿಸಲನಾಯಿಕ ನಿರೂಪಿಸಿದರು. ಮುನ್ನೀರಾಬೇಗಂ ನದಾಫ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ