ಬ್ಲ್ಯಾಕ್‌ಮೇಲ್ ಪ್ರಕರಣ : ಸ್ವರೂಪ್‌ ಬ್ಯಾಂಕ್‌ ಖಾತೆಯಲ್ಲಿ 1.8 ಕೋಟಿ ರೂ.?


Team Udayavani, Aug 20, 2019, 5:56 AM IST

SWAROOP-SHETTY

ಉಡುಪಿ: ಬ್ಲ್ಯಾಕ್‌ಮೇಲ್ / ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮಣಿಪಾಲದ ಸ್ವರೂಪ್‌ ಶೆಟ್ಟಿ (23) ಗೆಳೆಯರಿಗೆ ತನ್ನ ಬ್ಯಾಂಕ್‌ ಖಾತೆಯಲ್ಲಿ ಒಂದು ಕೋ.ರೂ.ಗಳಿಗೂ ಅಧಿಕ ಹಣ ಜಮೆ ಇರುವ ಪಾಸ್‌ಪುಸ್ತಕವನ್ನು ತೋರಿಸುತ್ತಿದ್ದ. ಇದರಿಂದಾಗಿ ಇವನ ಮೇಲೆ ಗೆಳೆಯರಿಗೆ ವಿಶ್ವಾಸ ಹೆಚ್ಚಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಕಾ ಶೋಕಿವಾಲಾನಂತೆ ದಿನ ಕ‌ಳೆಯುತ್ತಿದ್ದ ಸ್ವರೂಪ್‌ ಹೊಟೇಲ್‌ಗ‌ಳಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದ. ಸ್ವಂತ ಫ್ಲ್ಯಾಟ್‌ ಹೊಂದಿದ್ದ ಈತ ಇತ್ತೀಚೆಗಷ್ಟೆ ಮಣಿಪಾಲದ ಹೊಟೇಲೊಂದರಲ್ಲಿ ಕೆಲವು ದಿನ ತಂಗಿದ್ದು,ಬಿಲ್‌ ಮೊತ್ತ 4.5 ಲ.ರೂ. ದಾಟಿತ್ತು ಎಂದು ತಿಳಿದು ಬಂದಿದೆ.

ಪೊಲೀಸ್‌ ಹೆಸರು ಬಳಕೆ
“ನನ್ನ ಬೈಕ್‌ ವ್ಯವಹಾರದ ಬಗ್ಗೆ ನೀವು ಅಪಪ್ರಚಾರ ಮಾಡಿದ್ದರಿಂದ ನಷ್ಟವಾಗಿದೆ. ವ್ಹೀಲ್ಸ್‌ ಟು ಗೋ ನಿಟ್ಟೆ ಬ್ರಾಂಚ್‌ ನಿಮ್ಮಿಂದಾಗಿ ಕ್ಲೋಸ್‌ ಆಗಿದೆ. ಇದು ಪೊಲೀಸರಿಗೂ ಗೊತ್ತಿದೆ. ಅವರು ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಬಂಧಿಸುತ್ತಾರೆ’ ಎಂದು ಹೆದರಿಸುವ ಜತೆಗೆ ಭಾವನಾತ್ಮಕವಾಗಿಯೂ ಗೆಳೆಯರನ್ನು ಖೆಡ್ಡಾಕ್ಕೆ ದೂಡು ತ್ತಿದ್ದ. “ಪೊಲೀಸರ ಜುಟ್ಟು ನನ್ನ ಕೈಯಲ್ಲಿದೆ’ ಎಂದು ಕೂಡ ಅಬ್ಬರಿಸುತ್ತಿದ್ದ. ಪದೇಪದೆ ಅಧಿಕಾರಿಯೋರ್ವರ ಸಹಿತ ಕೆಲವು ಪೊಲೀಸರ ಹೆಸರನ್ನು ಹೇಳುತ್ತಿದ್ದ. ಒಮ್ಮೆ ರೌಡಿ ಜತೆಗೆ ಭೂಗತ ಪಾತಕಿ ಹೆಸರನ್ನು ಕೂಡ ಹೇಳಿ ಹೆದರಿಸಿದ್ದ.

ವೀಕ್‌ನೆಸ್‌ ಜತೆ ಆಟ
ಗೆಳೆಯರ ಸಣ್ಣ ವೀಕ್‌ನೆಸ್‌ನ ಸುಳಿವು ದೊರೆತರೂ ಸ್ವರೂಪ್‌ ಅದರೊಂದಿಗೆ ಆಟವಾಡುತ್ತಿದ್ದ. ಅದನ್ನೇ ತನ್ನ ಬ್ಲ್ಯಾಕ್‌ವೆುàಲ್‌ಗೆ ಉಪಯೋಗಿಸಿಕೊಳ್ಳುತ್ತಿದ್ದ. ಗೆಳೆಯ ಗೆಳತಿಯರ ವಿಚಾರಗಳು ಕೂಡ ಆತನ ಬ್ಲ್ಯಾಕ್‌ವೆುàಲ್‌ನ ಭಾಗವಾಗಿತ್ತು. ಗೆಳೆಯರ ಮನೆಯ ಸ್ಥಿತಿ ಗತಿಯನ್ನು ಸೂಕ್ಷ್ಮವಾಗಿ ಅರಿತು ಇಡೀ ಮನೆಯವರೇ ತನ್ನ ವಂಚನಾ ಜಾಲಕ್ಕೆ ಸಿಲುಕುವಂತೆ ಮಾಡಿದ್ದ. ಅನೇಕ ಬಾರಿ ಗೆಳೆಯರ ಹೆತ್ತವರ ಸಮ್ಮುಖ/ಹೆತ್ತವರಿಂದಲೇ ನೇರವಾಗಿ ಹಣ ಪಡೆದಿದ್ದ. ಒಬ್ಬ ಗೆಳೆಯನ ತಾಯಿಯ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಕೂಡ ತಿಳಿದುಕೊಂಡು ಹಣಕ್ಕಾಗಿ ಪೀಡಿಸಿ ಅದರಲ್ಲಿ ಯಶಸ್ವಿಯಾಗಿದ್ದ.

ಲ್ಯಾಪ್‌ಟಾಪ್‌ ವಂಚನೆ
ಒಬ್ಬ ಯುವಕನಿಗೆ ಆರಂಭದಲ್ಲಿ ಲ್ಯಾಪ್‌ಟಾಪ್‌ ಕೊಡಿಸುವುದಾಗಿ ಹಣ ಪಡೆದು ಲ್ಯಾಪ್‌ಟಾಪ್‌ ನೀಡದೆ ವಂಚಿಸಿದ್ದ. ಹಣ ಕೇಳಿದಾಗ ಬೇರೆ ರೀತಿಯ ಬೆದರಿಕೆಗಳನ್ನು ನೀಡುತ್ತಾ ಬಂದ. ಅಂತಿಮವಾಗಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ.
ಅನೇಕ ಕುಟುಂಬಗಳನ್ನೇ ಬೆದರಿಕೆ ತಂತ್ರದ ಮೂಲಕ ತನ್ನ “ನಿಯಂತ್ರಣ’ ದಲ್ಲಿಟ್ಟುಕೊಂಡಿದ್ದರೂ ಯಾರೂ ದೂರು ಕೊಡಲು ಮುಂದಾಗಿರ ಲಿಲ್ಲ. ಕೊನೆಗೆ ಹುಡುಗಿಯೋರ್ವಳ ಮನೆಯವರು ಪೊಲೀಸರ ಮೊರೆ ಹೋಗಿದ್ದರಿಂದ ಸ್ವರೂಪನ ವಂಚನೆ ಹೊರ ಬೀಳ ಲಾರಂಭಿಸಿದವು ಎಂದು ಮೂಲಗಳು ತಿಳಿಸಿವೆ. ವಂಚನೆಗೊಳ ಗಾದ ಯುವಕರು ಮತ್ತು ಅವರ ಹೆತ್ತವರು ಉಡುಪಿ ಎಸ್‌ಪಿ ಬಳಿ ತೆರಳಿ ನ್ಯಾಯ, ರಕ್ಷಣೆ ಕೇಳಿದ್ದಾರೆ.

3 ದಿನಗಳ ಪೊಲೀಸ್‌ ಕಸ್ಟಡಿ
ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟಿನ ಯುವಕನಿಗೆ ಜೀವ ಬೆದರಿಕೆಯೊಡ್ಡಿ 26 ಲ. ರೂ.ಗಳನ್ನು ಪಡೆದು ವಂಚಿಸಿರುವ ಆರೋಪಿ ಸ್ವರೂಪ್‌ ಶೆಟ್ಟಿಯನ್ನು ಆ. 19ರಿಂದ 3 ದಿನಗಳ ಕಾಲ ಪಡುಬಿದ್ರಿ ಪೊಲೀಸರು ತಮ್ಮ ವಶಕ್ಕೆ ಪಡೆದು ಕೊಂಡಿದ್ದಾರೆ.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.