ಋಣಭಾರ ಪರಿಹಾರ ಯೋಜನೆ: ಬಾಣಲೆಯಿಂದ ಬೆಂಕಿಗೆ

ಪಂಜದಲ್ಲಿ ಅರ್ಜಿ ಸಿದ್ಧಪಡಿಸುವ ನೆಪದಲ್ಲಿ ಅನಕ್ಷರಸ್ಥ, ಬಡವರ ಸುಲಿಗೆ: ಆರೋಪ

Team Udayavani, Aug 29, 2019, 5:00 AM IST

h-12

ಸಾಂದರ್ಭಿಕ ಚಿತ್ರ

ಸುಬ್ರಹ್ಮಣ್ಯ: ರಾಜ್ಯ ಸರಕಾರವು ಜಾರಿಗೊಳಿಸಿದ ಋಣ ಪರಿಹಾರ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಯೋಜನೆಯ ದುರ್ಲಾಭವನ್ನು ಪಡೆದುಕೊಳ್ಳಲು ಕೆಲವರು ಹವಣಿಸುತ್ತಿದ್ದಾರೆ.

ಋಣಭಾರ ಪರಿಹಾರ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸುತ್ತಿರುವ ಘಟನೆ ಪಂಜದಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಪಂಜ ಮುಖ್ಯ ಪೇಟೆಯ ಕೆಳಗಿನ ಪೇಟೆಯ ಕಚೇರಿಯೊಂದರಲ್ಲಿ ಯೋಜನೆಯ ಫಲಾನುಭವಿಗಳಿಗೆ ಅರ್ಜಿ ನಮೂನೆಯನ್ನು ಸಿದ್ಧಪಡಿಸಿ ಕೊಡುವ ಕೆಲಸ ನಡೆದಿತ್ತು. ಅರ್ಜಿ ನಮೂನೆ ಸಿದ್ಧಪಡಿಸಿ ಕೊಡುತ್ತೇವೆ ಎಂದು ಹೇಳಿ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ದಾರಿ ತಪ್ಪಿಸಿ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.

ಮೂಲ ದಾಖಲೆ
ಯೋಜನೆ ಕುರಿತು ಸರಿಯಾದ ಮಾಹಿತಿ ಇಲ್ಲದವರು ಈ ಕಚೇರಿಗೆ ದಾಖಲೆ ಪತ್ರಗಳೊಂದಿಗೆ ಆಗಮಿಸಿದ್ದಾರೆ. ಫಲಾನುಭವಿಗಳು ಯೋಜನೆಯಲ್ಲಿ ತಿಳಿಸಿದಂತೆ ಮೂಲ ದಾಖಲೆಗಳನ್ನು ಅಂಗಡಿ ಸಿಬಂದಿ ಕೈಗೆ ಒಪ್ಪಿಸಿದ್ದಾರೆ. ಅದನ್ನು ಪಡೆದ ಕಚೇರಿ ಸಿಬಂದಿ ಅರ್ಜಿ ನಮೂನೆ ಭರ್ತಿ ಮಾಡಿ ಕೊಡುತ್ತೇವೆ ಎಂದಿದ್ದಾರೆ.

ಕಚೇರಿಗೆ ಬರುವ ಗ್ರಾಹಕರಿಂದ ಮೂಲ ದಾಖಲೆ ಪತ್ರಗಳನ್ನು ಪಡೆಯುವ ಕಚೇರಿ ಸಿಬಂದಿ ಜೆರಾಕ್ಸ್‌, ಅರ್ಜಿ ನಮೂನೆ ಸಿದ್ಧಪಡಿಸುವ ನೆಪದಲ್ಲಿ ಫ‌ಲಾನುಭವಿಗಳಿಂದ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ದಾಖಲೆ ಸಿದ್ಧಪಡಿಸಿ ಕೊಡುವ ಕೆಲಸ
ಫಲಾನುಭವಿಗಳಿಂದ ದಾಖಲೆ ಪತ್ರ ಪಡೆದು, ಬಳಿಕ ಅರ್ಜಿ ನಮೂನೆಯಲ್ಲಿ ಟೈಪ್‌ ಮಾಡಿ ಸಿದ್ಧಪಡಿಸುತ್ತಿದ್ದಾರೆ. ನಕಲು ಪ್ರತಿ ತೆಗೆಯುವುದು, ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಲಕೋಟೆಯಲ್ಲಿ ತುಂಬುವುದು ಇತ್ಯಾದಿ ಕೆಲಸಗಳಿಗೆ ಖರ್ಚಿನ ಬಾಬ್ತು 150 ರೂ.ಗಳಿಂದ 300 ರೂ. ತನಕ ಪಡೆಯುತ್ತಿರುವುದು ಕಂಡು ಬರುತ್ತಿದೆ. ಒಂದು ಪ್ರತಿಯನ್ನು ಉಪ ವಿಭಾಗಾಧಿಕಾರಿಗೆ, ಮತ್ತೂಂದು ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲಹೆ ನೀಡುತ್ತಿದ್ದಾರೆ. ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು ದುರ್ಬಲ ವರ್ಗದ ಜನತೆ ಅಧಿಕ ಬಡ್ಡಿಯಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.

ತನಿಖೆ ಮಾಡುವೆಮುಗ್ಧ ಬಡವರನ್ನು ಈ ರೀತಿ ವಂಚಿಸಿ ಹಣ ಗಳಿಸುವುದು ತಪ್ಪು. ಕಾನೂನು ದುರುಪಯೋಗ ಮಾಡಿಕೊಂಡು ವಂಚನೆ ನಡೆಸಿದರೆ ಅಂಥವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿಕೊಳ್ಳುತ್ತೇವೆ. ಈಗಲೇ ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ತನಿಖೆ ನಡೆಸುತ್ತೇನೆ. ಗುರುವಾರ ನಾನು ಖುದ್ದು ಅಲ್ಲಿಗೆ ತೆರಳಿ ತನಿಖೆ ಮಾಡುವೆ.
– ಕುಂಞಿ ಅಹಮ್ಮದ್‌ ತಹಶೀಲ್ದಾರ್‌ ಸುಳ್ಯ

ಸಿದ್ಧಪಡಿಸಿ ಕೊಡುತ್ತಿದ್ದೇವೆನಮ್ಮಲ್ಲಿ ಅರ್ಜಿಗಳು ಸಿಗುತ್ತಿಲ್ಲ. ನಾವು ಅರ್ಜಿ ನಮೂನೆಗಳನ್ನು ತಯಾರು ಮಾಡಿ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊಡುತ್ತೇವೆ. ಅದಕ್ಕೆ 150ರಿಂದ 200 ರೂ. ಪಡೆದುಕೊಳ್ಳುತ್ತಿದ್ದೇವೆ.
– ಪಂಜದ ಕಚೇರಿಯ ಸಿಬಂದಿ

200ಕ್ಕೂ ಹೆಚ್ಚು ಜನರು

ಪಂಜದ ಕಚೇರಿಗೆ ಬುಧವಾರ 200ಕ್ಕೂ ಮಿಕ್ಕಿದ ಬಡ ಫಲಾನುಭವಿಗಳು ಆಗಮಿಸಿದ್ದರು. ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಒಂದು ಬಾರಿ ಸಾಲದಿಂದ ಮುಕ್ತರಾಗಿ ಅಡವಿಟ್ಟ ಆಭರಣಗಳನ್ನು ಮರಳಿ ಪಡೆಯುವ ಕನಸಿನೊಂದಿಗೆ ಬಂದಿದ್ದ ಜನರು ಇಲ್ಲಿ ಜಾಸ್ತಿ ಹಣ ನೀಡಬೇಕಾಗಿ ಬಂದಿದೆ.

ಟಾಪ್ ನ್ಯೂಸ್

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

11

Puttur: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು ವೈದ್ಯರ ವಿರುದ್ಧ ದೂರು ದಾಖಲು

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

Kalladka: ಕಾರು ಢಿಕ್ಕಿಯಾಗಿ ಪಾದಚಾರಿ ಗಾಯ

Kalladka: ಕಾರು ಢಿಕ್ಕಿಯಾಗಿ ಪಾದಚಾರಿ ಗಾಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

1-qeqwqew

Gundlupete: ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತ ದೇಹ ಪತ್ತೆ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.