ಡಿಸಿಎಂ ನೇಮಕದಿಂದ ಕಾಂಗ್ರೆಸ್ಗೆ ಏನು ನಷ್ಟ?
Team Udayavani, Sep 1, 2019, 3:02 AM IST
ಶಿವಮೊಗ್ಗ: ಲಕ್ಷ್ಮಣ ಸವದಿ ಅಥವಾ ರಾಮ ಸವದಿಯನ್ನಾದರೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡ್ತೀವಿ. ಅದು ನಮ್ಮ ಪಕ್ಷದ ನಿರ್ಧಾರ. ಅದರಿಂದ ಕಾಂಗ್ರೆಸ್ಗೆ ಏನು ನಷ್ಟ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಡಿಸಿಎಂ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಏನು ತೊಂದರೆ ಎಂಬುದು ತಿಳಿಯುತ್ತಿಲ್ಲ ಎಂದರು.
“ಆಪರೇಷನ್ ಕಮಲ’ದ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಕಾಂಗ್ರೆಸ್ನವರು ಪ್ರಶ್ನಿಸುತ್ತಿದ್ದಾರೆ. ನಿನ್ನೆ ತನಕ ನೀವೇ ಸರ್ಕಾರದಲ್ಲಿ ಇದ್ದಿರಲ್ಲಾ. ಯಾಕೆ ಅದನ್ನು ಸಿಬಿಐ ತನಿಖೆಗೆ ಕೊಡಲಿಲ್ಲ. ತನಿಖೆ ಮಾಡಲಿಲ್ಲ ಎಂದರೇ ನಿಮಗೆ ಶಕ್ತಿ ಇರಲಿಲ್ಲವೇ…? “ಆಪರೇಷನ್ ಕಮಲ’ದ ಸಿಬಿಐ ತನಿಖೆ ಕುರಿತು ಮಾತನಾಡುವ ನೈತಿಕ ಶಕ್ತಿ ಕಾಂಗ್ರೆಸ್ನವರಿಗೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್