ಲಿಂಗನಮಕ್ಕಿ ಭರ್ತಿಗೆ ಕ್ಷಣಗಣನೆ
•ಒಂದೆಡೆ ಹಬ್ಬದ ತಯಾರಿ ನಡೆದರೆ ಇನ್ನೊಂದೆಡೆ ಜನರಿಗೆ ಪ್ರವಾಹದ್ದೇ ಚಿಂತೆ
Team Udayavani, Sep 2, 2019, 1:02 PM IST
ಹೊನ್ನಾವರ: ಹಡಿನಬಾಳ ಹೊಳೆಯಲ್ಲಿ ಕೆಂಪು ನೀರಿನ ರುದ್ರ ನರ್ತನ
ಹೊನ್ನಾವರ: ತಾಲೂಕಿನ ಹಡಿನಬಾಳ, ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದ್ದು ಮಳೆಗಾಲದ ಆರಂಭದಲ್ಲಿ ಕಾಣುತ್ತಿರುವ ಕೆಂಪು ನೀರು ಇನ್ನೂ ಭೀಕರವಾಗಿ ಕಾಣುತ್ತಿದ್ದು ಗುಡ್ಡದ ಮಣ್ಣನ್ನು ಕಿತ್ತು ತರುತ್ತಿದೆ. ಲಿಂಗನಮಕ್ಕಿ ಅಣೆಕಟ್ಟು ಭರ್ತಿಯ ಹಂತ ತಲುಪಿದ್ದು, ನೀರು ಬಿಡಲು ಕ್ಷಣಗಣನೆ ಆರಂಭವಾಗಿದೆ.
ಮುಂಜಾನೆ 8ಕ್ಕೆ ಲಿಂಗನಮಕ್ಕಿ ಜಲಮಟ್ಟ 1817.80ಕ್ಕೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಹದವಾದ ಮಳೆ ಬೀಳುತ್ತಿರುವುದರಿಂದ 1818 ತಲುಪಿದ ಕೂಡಲೇ ಸ್ವಲ್ಪಸ್ವಲ್ಪ ನೀರು ಬಿಡುವ ಸಿದ್ಧತೆಯಲ್ಲಿ ಕೆಪಿಸಿ ಇದೆ. ಮಳೆ ಜೋರಾದರೆ ಹೆಚ್ಚು ನೀರು ಬಿಟ್ಟರೆ ಸಮಸ್ಯೆ ಆಗುವುದರಿಂದ ಗರಿಷ್ಠಮಟ್ಟಕ್ಕೆ ಒಂದು ಅಡಿ ಮೊದಲು ಸ್ವಲ್ಪ ನೀರು ಬಿಡುವ ಸಂಭವವಿದೆ. 10-20 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ ಅದು ಅರಿವಿಗೆ ಬರದೆ ಹರಿದು ಹೋಗಲಿದೆ. ಹೆಚ್ಚು ನೀರು ಬಿಟ್ಟು ಸಮಸ್ಯೆ ಮಾಡುವ ತೊಂದರೆಯನ್ನು ಕೆಪಿಸಿ ಖಂಡಿತ ತೆಗೆದುಕೊಳ್ಳಲಿಕ್ಕಿಲ್ಲ. ಹಿಂದಿನ ಅನುಭವದಿಂದ ಅದು ಪಾಠ ಕಲಿತಿದೆ. ಇಂದು ಮುಂಜಾನೆ ಒಳಹರಿವು 18,000 ಕ್ಯೂಸೆಕ್ ಇದೆ, ಹೊರಹರಿವು ಇಲ್ಲ. ಇತ್ತ ಗೇರುಸೊಪ್ಪ ಅಣೆಕಟ್ಟು ವಿದ್ಯುತ್ ಉತ್ಪಾದನೆ ಮುಂದುವರಿಸಿದ್ದು ಲಿಂಗನಮಕ್ಕಿ ನೀರನ್ನು ಸ್ವೀಕರಿಸಲು ಸಿದ್ಧವಾಗಿದ್ದು ಇದು ಸಮತೋಲನ ಅಣೆಕಟ್ಟು ಆಗಿರುವುದರಿಂದ 55 ಮೀಟರ್ ಎತ್ತರ ದಾಟುವ ಮೊದಲು ನೀರು ಬಿಡಬೇಕಾಗುತ್ತದೆ. ರವಿವಾರ, ಸೋಮವಾರ ಚೌತಿಯ ರಜೆ ಮರೆತು ಕೆಪಿಸಿ ಮತ್ತು ತಾಲೂಕು ಆಡಳಿತ ನೇಮಿಸಿದ ನೋಡಲ್ ಅಧಿಕಾರಿಗಳು ನೆರೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
MUST WATCH
ಹೊಸ ಸೇರ್ಪಡೆ
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ