ಕೆಎಚ್ಬಿ ಕಾಲೋನಿಗೆ ಶಾಸಕ ರಾಮಪ್ಪ ಭೇಟಿ-ಸಮಸ್ಯೆ ವೀಕ್ಷಣೆ
ಶಾಸಕರೆದುರು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ನಿವಾಸಿಗಳು ಸಮಸ್ಯೆ ಪರಿಹರಿಸಲು ಪೌರಾಯುಕ್ತರಿಗೆ ಸೂಚನೆ
Team Udayavani, Sep 10, 2019, 10:29 AM IST
ಹರಿಹರ: ನಗರ ಹೊರವಲಯದ ಕೆಎಚ್ಬಿ ಕಾಲೋನಿಗೆ ಸೋಮವಾರ ಶಾಸಕ ಎಸ್.ರಾಮಪ್ಪ ಭೇಟಿ ನೀಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಪ್ರದೇಶವನ್ನು ವೀಕ್ಷಿಸಿದರು.
ಹರಿಹರ: ನಗರ ಹೊರವಲಯದ ಕೆಎಚ್ಬಿ ಕಾಲೋನಿ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಶಾಸಕ ಎಸ್.ರಾಮಪ್ಪ ಕಾಲೋನಿಗೆ ಭೇಟಿ ನೀಡಿ, ಯುಜಿಡಿ, ಜಲಸಿರಿ, ಪಾರ್ಕ್, ಆಟದ ಮೈದಾನ ಹಾಗೂ ಚರಂಡಿಗಳ ಸ್ವಚ್ಛತೆಯ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು.
ಕಾಲೊನಿಯಲ್ಲಿನ ಯುಜಿಡಿ ಸೋಕಿಂಗ್ ಮಷಿನ್ ಪ್ರದೇಶ, ಪಾರ್ಕ್, ಆಟದ ಮೈದಾನ, ಕಸ ಮತ್ತಿತರ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆ ಬೀರುತ್ತಿರುವ ಚರಂಡಿಗಳನ್ನು ವೀಕ್ಷಿಸಿದ ಶಾಸಕರು, ನಿವಾಸಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ನಿವಾಸಿಗಳು ಇಲ್ಲಿ ಮನೆ ಖರೀದಿಸಿ ಆರು ವರ್ಷಗಳಾದರೂ ಕನಿಷ್ಟ ಮೂಲ ಸೌಲಭ್ಯಗಳಿಲ್ಲ. ಯುಜಿಡಿ ಪೈಪ್ಗ್ಳು ಒಡೆದು ಕಟ್ಟಿಕೊಂಡು ಶೌಚಾಲಯ ತ್ಯಾಜ್ಯ ಹೊರಹೋಗುತ್ತಿಲ್ಲ, ಇಲ್ಲಿನ ಪರಿಸರ ರೋಗ, ರುಜಿನಗಳು ಹರಡುವಂತಿದ್ದು, ಬದುಕುವುದು ಕಷ್ಟವಾಗಿದೆ ಎಂದರು.
ಇಲ್ಲಿನ ಆಟದ ಮೈದಾನ ಪ್ರದೇಶ ಗಿಡ ಗಂಟಿಗಳು ಬೆಳೆದು ವಿಷ ಜಂತುಗಳ ವಾಸಸ್ಥಾನವಾಗಿದೆ. ಪಾರ್ಕ್ ಪ್ರದೇಶದ ಕಥೆಯೂ ಇದಕ್ಕೆ ಹೊರತಾಗಿಲ್ಲ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕೊಠಡಿ ಇಲಿ, ಹೆಗ್ಗಣ, ಮುಂಗುಸಿಗಳ ವಾಸಸ್ಥಾನವಾಗಿದೆ ಎಂದು ಶಾಸಕರೆದುರು ನಿವಾಸಿಗಳು ಗೋಳು ತೋಡಿಕೊಂಡರು.
ನಗರಸಭೆಗೆ ವಾರ್ಷಿಕ ಕರ ಪಾವತಿಸುತ್ತಿದ್ದೇವೆ. ಆರೋಗ್ಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಾಗಲಿ, ಪೌರಾಯುಕ್ತರಾಗಲಿ ಮೌಖೀಕ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಿವಾಸಿ ಕೆ.ರುದ್ರಮುನಿ ಮಾತನಾಡಿ, ಅವೈಜ್ಞಾನಿಕ ಯುಜಿಡಿ ವ್ಯವಸ್ಥೆಯಿಂದಾಗಿ ಕೆಲ ನಿವಾಸಿಗಳು ರಸ್ತೆ ಒಡೆದು ಶೌಚಾಲಯದ ತ್ಯಾಜ್ಯ ನೇರವಾಗಿ ಚರಂಡಿಗೆ ಹೋಗುವಂತೆ ಪೈಪ್ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯವರು ದಿನವಿಡೀ ದುರ್ವಾಸನೆಯ ಹಿಂಸೆ ತಾಳಲಾರದೆ ಮನೆ ಬಾಗಿಲು ಮುಚ್ಚಿಕೊಂಡಿರಬೇಕಿದೆ ಎಂದರು.
ಎರ್ರಿಸ್ವಾಮಿ ಮಾತನಾಡಿ, ಯುಜಿಡಿ ಚೇಂಬರ್ಗಳು ತುಂಬಿ ತುಳುಕುತ್ತಿರುವುದರಿಂದ ಮುಚ್ಚಳಗಳು ತೆರೆದುಕೊಂಡಿದ್ದು ಚರಂಡಿಗಳು ದುರ್ವಾಸನೆ ಹರಡುತ್ತಿವೆ. ಚಿಕ್ಕ ಮಕ್ಕಳು ಆಟವಾಡುವ ಭರದಲ್ಲಿ ಚೇಂಬರ್ಗಳಲ್ಲಿ ಬೀಳುವ ಅಪಾಯವಿದೆ ಎಂದರು.
ಶಾಸಕ ರಾಮಪ್ಪ ಪೌರಾಯುಕ್ತೆ ಎಸ್.ಲಕ್ಷ್ಮೀ ಅವರಿಗೆ ಕರೆ ಮಾಡಿ, ಕೂಡಲೇ ಕಾಲೋನಿಗೆ ಭೇಟಿ ನೀಡಿ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ