ಮೊಹರಂ; ಇರಾನಿಯರಿಂದ ಕರಾಳ ದಿನಾಚರಣೆ
Team Udayavani, Sep 10, 2019, 6:35 PM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಗದಗ: ಪ್ರವಾದಿ ಇಮಾಮ್ ಹುಸೇನ್ ಅವರ ಹುತಾತ್ಮ ಸ್ಮರಣಾರ್ಥವಾಗಿ ನಗರದ ಇರಾನಿ ಕಾಲೋನಿಯಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ದೇಹ ದಂಡಿಸಿಕೊಳ್ಳುವ ಮೂಲಕ ಮೊಹರಂ ಹಬ್ಬವನ್ನು ಕರಾಳ ದಿನವಾಗಿ ಆಚರಿಸಿದರು. ಮೆರವಣಿಗೆಯುದ್ದಕ್ಕೂ ಶೋಕ ಗೀತೆಗಳೊಂದಿಗೆ ಹರಿತವಾದ ಅಸ್ತ್ರಗಳಿಂದ ದೇಹ ದಂಡಿಸಿಕೊಂಡು ನೆತ್ತರು ಹರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.
ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇರಾನಿ ಕಾಲೋನಿಯ ಇರಾನಿ ಮಸೀದಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಹಸನ್, ಹುಸೈನ್ ಅವರ ಪ್ರತಿರೂಪವಾದ ಪಂಜೆಗಳನ್ನಿಡಿದು ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಳ್ಗೊಂಡಿದ್ದ ಇರಾನಿ ಯುವಕರು, ಮಹಿಳೆಯರು ಹಾಗೂ ಮಕ್ಕಳೂ ತಮ್ಮ ಅಂಗೈ ಹಾಗೂ ಎದೆ ಭಾಗದಲ್ಲಿ ಜೋರಾಗಿ ಬಡಿದುಕೊಂಡರು. ಇದೇ ವೇಳೆ ಕೆಲ ಯುವಕರು ಹರಿತವಾದ ವಸ್ತು(ಬ್ಲೇಡ್)ಗಳಿಂದ ಒಡೆದುಕೊಂಡು, ರಸ್ತೆಯುದ್ದಕ್ಕೂ ನೆತ್ತರು ಚೆಲ್ಲಿದರು. ಮೆರವಣಿಗೆಯುದ್ದಕ್ಕೂ ನೆರೆದಿದ್ದ ಸಾರ್ವಜನಿಕರ ಮೈ ನವಿರೇಳುವಂತೆ ಮಾಡಿದರು.
ಇರಾನಿ ಜನರ ಈ ವಿಶಿಷ್ಟ ಸಂಪ್ರದಾಯವನ್ನು ನೋಡಲು ನಗರದ ವಿವಿಧೆಡೆಯಿಂದ ಆಗಮಿಸಿದ್ದ ಜನರು ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ನೆರೆದಿದ್ದರು. ಮನೆಗಳ ಮಹಡಿ ಹಾಗೂ ಮೆಟ್ಟಿಲುಗಳ ಮೇಲೆ ನಿಂತು, ಇರಾನಿಯರ ಶೋಕಾಚರಣೆಗೆ ಕಂಬನಿ ಮಿಡಿದರು. ಈ ವೇಳೆ ಕೆಲ ಯುವಕರು ಕರಾಳ ದಿನವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಯಿಡಿಯುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ
Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ
MUST WATCH
ಹೊಸ ಸೇರ್ಪಡೆ
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ