ವಾಹನ ಮಾಲಿನ್ಯ ಸಾರಿಗೆ ಇಲಾಖೆಗೆ ಗೊತ್ತೇ ಆಗೋದಿಲ್ವಂತೆ!


Team Udayavani, Sep 14, 2019, 12:29 PM IST

14-Spectember-10

ಯಾದಗಿರಿ: ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿರುವ ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಕಾರಿನ ಮಾಲಿನ್ಯ ತಪಾಸಣೆ ಮಾಡುತ್ತಿರುವುದು.

ಯಾದಗಿರಿ: ಪ್ರಸ್ತುತ ಸಾರಿಗೆ ನಿಯಮಾವಳಿಗಳಲ್ಲಿ ವಾಹನದ ಮಾಲಿನ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಲಾಗಿದೆಯೋ? ವಾಹನ ಹೆಚ್ಚಿನ ಹೊಗೆ ಹೊರ ಬಿಡುತ್ತಿದೆಯೋ ಅಥವಾ ರಸ್ತೆಗಿಳಿದ ವಾಹನಕ್ಕೆ ವಿಮೆ ಮಾಡಿಸಲಾಗಿದೆಯೋ ಎನ್ನುವ ಅಂಶದ ಮಾಹಿತಿ ಸಾರಿಗೆ ಇಲಾಖೆ ಬಳಿಯೇ ಇರಲ್ಲ.

ಹೊಸದಾಗಿ ವಾಹನ ಖರೀದಿಸಿ ಬಳಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗುತ್ತದೆ. ಬಳಿಕ ಹೊಸ ವಾಹನಗಳಿಗೆ ಮಾಲಿನ್ಯ ತಪಾಸಣೆಗೆ ಒಂದು ವರ್ಷದವರೆಗೆ ತಪಾಸಣೆ ಮಾಡಿಸುವುದರಿಂದ ವಿನಾಯಿತಿ ಇದೆ ಎನ್ನುತ್ತವೆ, ಸಾರಿಗೆ ಇಲಾಖೆ ಮೂಲಗಳು ಬಳಿಕ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ವಿಪರ್ಯಾಸವೆಂದರೇ ಎಷ್ಟು ವಾಹನಗಳು ಮಾಲಿನ್ಯ ತಪಾಸಣೆ ಮಾಡಿಸಿವೆ, ಎಷ್ಟು ವಾಹನಗಳು ಪರಿಸರಕ್ಕೆ ಹಾನಿಯಾಗುವ ಅಪಾಯಕಾರಿ ಹೊಗೆ ಹೊರ ಹಾಕುತ್ತಿವೆ ಎನ್ನುವ ಮಾಹಿತಿ ಸಾರಿಗೆ ಇಲಾಖೆಗೆ ಗೊತ್ತೇ ಆಗಲ್ವಂತೆ.

ಪ್ರಮುಖವಾಗಿ ವಾಹನಗಳ ತಪಾಸಣೆ ವೇಳೆ ಅಷ್ಟೇ ವಾಹನ ಸವಾರರಿಂದ ದಾಖಲೆಗಳು ಪರಿಶೀಲಿಸುವ ವೇಳೆ ಮಾತ್ರ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸಲಾಗಿದೆಯೇ ಇಲ್ಲವೆ ಎನ್ನುವ ಕುರಿತು ಮಾಹಿತಿ ಬಹಿರಂಗವಾಗಲಿದೆ. ಅದಲ್ಲದೇ ವಾಹನಗಳನ್ನು ಮಾರಾಟ ಮಾಡುವ ವೇಳೆ ಒಬ್ಬರ ಹೆಸರಿಂದ ಇನ್ನೊಬ್ಬರಿಗೆ ವರ್ಗಾಯಿಸುವಾಗ ಕಡ್ಡಾಯವಾಗಿ ದಾಖಲೆ ಗಮನಿಸಲಾಗುತ್ತದೆ.

ಸಾರಿಗೆ ಇಲಾಖೆಯಲ್ಲಿನ ಇಂತಹ ಅವೈಜ್ಞಾನಿಕ ಕಾರಣದಿಂದಾಗಿ ಅದೆಷ್ಟೋ ವಾಹನ ಸವಾರರು ಸಮಯಕ್ಕೆ ಸರಿಯಾಗಿ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸದೇ ವಾಹನಗಳನ್ನು ಚಲಾಯಿಸುತ್ತಿರುವುದು ಹೆಚ್ಚಾಗಿದೆ. ಇದರಿಂದಾಗಿ ಪರಿಸರದ ಮೇಲೆ ಹಾನಿಯಾಗುವುದಲ್ಲದೇ ಗ್ರಾಮೀಣ ಭಾಗದ ಜನರಿಗೆ ಸೂಕ್ತ ತಿಳುವಳಿಕೆಯಿಲ್ಲದೇ ಅಪಘಾತ ಸಂದರ್ಭದಲ್ಲಿ ವಿಮೆ ಇಲ್ಲದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ.

ಅದಲ್ಲದೇ ಸಾರಿಗೆ ತಿದ್ದುಪಡಿ ನಿಯಮದಂತೆ ವಿಮೆಯಿಲ್ಲದೇ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 2 ಸಾವಿರ ರೂಪಾಯಿ ದಂಡ ವಿಸಲಾಗುತ್ತದೆ. ಎರಡನೇ ಬಾರಿಗೆ ತಪ್ಪೆಸಗಿದರೆ ಆಗ 4 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ ಎನ್ನುತ್ತದೆ ನಿಯಮ. ಅಲ್ಲದೇ ಮಾಲಿನ್ಯ ತಪಾಸಣೆ ಮಾಡಿಸಿದ ದಾಖಲೆ ಇಲ್ಲದಿದ್ದರೂ 1 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.

ಮಾಲಿನ್ಯ ತಪಾಸಣೆ ಕೇಂದ್ರ: ಜಿಲ್ಲೆಯಲ್ಲಿ ಒಟ್ಟು 6 ಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಜಿಲ್ಲಾ ಕೇಂದ್ರದಲ್ಲಿ 3 ಹಾಗೂ ಶಹಾಪುರದಲ್ಲಿ 2 ಕೇಂದ್ರಗಳಿದ್ದು, ಅವುಗಳಿಗೆ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಲಾಗಿದೆ. ಈ ಕೇಂದ್ರಗಳ ಮೇಲೆ ಇಲಾಖೆ ನಿಯಂತ್ರಣ ಇರುವುದಿಲ್ಲ. ಇಲ್ಲಿ ವಾಹನದ ಮಾಲಿಕರೇ ನೇರವಾಗಿ ಬಂದು ತಮ್ಮ ವಾಹನದ ದಾಖಲೆ, ವಾಹನ ಸಂಖ್ಯೆ ನಮೂದಿಸಿ ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಮಾಲಿನ್ಯ ತಪಾಸಣೆ ಪಾರದರ್ಶಕವಾಗಿ ಆನ್‌ಲೈನ್‌ ಮೂಲಕ ನಡೆದು ಸಾರಿಗೆ ಇಲಾಖೆಯೇ ವೆಬ್‌ಸೈಟ್ ಮೂಲಕ ವರದಿ ನೀಡುತ್ತದೆ.

ಜಿಲ್ಲೆಯಲ್ಲಿ 2019ರ ಸೆ. 12ರ ಅಂಕಿ ಅಂಶಗಳ ಸಮೇತ ನೋಡುವುದಾದರೆ, ದ್ವಿಚಕ್ರ ವಾಹನ 1,20,841 ನೋಂದಣಿಯಾಗಿವೆ. ತ್ರಿಚಕ್ರ 10,778 ವಾಹನಗಳಿವೆ. ನಾಲ್ಕು ಚಕ್ರ 1,290 ಪ್ರಯಾಣಿಕರ ವಾಹನಗಳಿವೆ. 306 ಶಾಲಾ ಮಕ್ಕಳ ವಾಹನಗಳಿವೆ. 646 ಮ್ಯಾಕ್ಸೀ ಕ್ಯಾಬ್‌ ವಾಹನಗಳಿವೆ. ಸರಕು ಸಾಗಣೆ, ಸಣ್ಣ ಗಾತ್ರದ ವಾಹನಗಳು 987, ಮದ್ಯಮ ಗಾತ್ರದ ವಾಹನಗಳು 2,887, ದೊಡ್ಡ ಗಾತ್ರದ ವಾಹನಗಳು 2,358 ನೋಂದಣಿಯಾಗಿವೆ. ಟ್ಯಾಂಕರ್‌ ಸೇರಿದಂತೆ ಭಾರಿ ಗಾತ್ರದ 1,253 ವಾಹನಗಳಿವೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.