ಪ್ರತಿ ಇಲಾಖೆ ಕರ್ತವ್ಯದಲ್ಲೂ ನಿರ್ಲಕ್ಷ್ಯ


Team Udayavani, Sep 20, 2019, 2:17 PM IST

Udayavani Kannada Newspaper

ಕೊಪ್ಪಳ: ನಗರದ ಡಿ.ದೇವರಾಜ ಅರಸು ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಸ್ತಂಬ ತೆರವು ಮಾಡುವ ವೇಳೆ ನಡೆದ ವಿದ್ಯುತ್‌ ಅವಘಡದಿಂದ ಐವರು ವಿದ್ಯಾರ್ಥಿಗಳ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿ  ಸಿಂತೆ ಐದು ಇಲಾಖೆ, ಕಟ್ಟಡ ಮಾಲೀಕನಿಂದ ಎಸಿ ನೇತೃತ್ವದ ತನಿಖಾ ತಂಡ ಪ್ರತ್ಯೇಕ ವರದಿ ಪಡೆದಿದ್ದು, ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗೆ ವರದಿ ನೀಡಿದೆ.

ಕಳೆದ ಆ. 15ರಂದು ನಡೆದ ಧ್ವಜಾರೋಹಣದ ಕಂಬವನ್ನು ತೆರವು ಮಾಡುವ ವೇಳೆ ಧ್ವಜಕಂಬ ವಿದ್ಯುತ್‌ ತಂತಿ ಮೇಲೆ ಬಿದ್ದು ಐವರು ವಿದ್ಯಾರ್ಥಿಗಳ ಸಾವಿನ ಪ್ರಕರಣವು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತೀವ್ರತೆ ಅರಿತ ಸರ್ಕಾರವು ಮೃತ ವಿದ್ಯಾರ್ಥಿಗಳ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಅವರು ಪ್ರಕರಣದ ಗಂಭೀರತೆ ಅರಿತು, ಎಸಿ ಸಿ.ಡಿ. ಗೀತಾ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಸಿ ನೇತೃತ್ವದ ತನಿಖಾ ತಂಡ ಬಿಸಿಎಂ, ಜೆಸ್ಕಾಂ, ಲೋಕೋಪಯೋಗಿ, ನಗರಸಭೆ ಪೌರಾಯುಕ್ತರು, ನಗರಾಭಿವೃದ್ಧಿ ಪ್ರಾ ಧಿಕಾರ ಸೇರಿದಂತೆ ವಸತಿ ನಿಲಯವಿದ್ದ ಕಟ್ಟಡದ ಮಾಲೀಕನಿಂದ ಪ್ರತ್ಯೇಕ ಮಾಹಿತಿ ದಾಖಲಿಸಿ ಸಮಗ್ರ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ವರದಿಯಲ್ಲಿ ಐದು ಇಲಾಖೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎನ್ನುವ ಅಂಶಗಳು ಉಲ್ಲೇಖವಾಗಿವೆ. ಇದರಲ್ಲಿ ಪ್ರಮುಖವಾಗಿ ವಸತಿ ನಿಲಯ ಮೇಲ್ವಿಚಾರಕ, ತಾಲೂಕು ಬಿಸಿಎಂ ಅ ಧಿಕಾರಿ ಹಾಗೂ ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ ಎಂಬ ಅಂಶಗಳನ್ನು ಉಲ್ಲೇಖೀಸಲಾಗಿದೆ.

ಮೇಲ್ವಿಚಾರಕನ ನಿರ್ಲಕ್ಷ್ಯ: ವಸತಿ ನಿಲಯದಲ್ಲಿ ಪ್ರತಿಯೊಂದರ ಬಗ್ಗೆ ಕಾಳಜಿ ವಹಿಸಬೇಕಾದ ಮೇಲ್ವಿಚಾಕರ ಸರಿಯಾಗಿ ಕಾಳಜಿ ವಹಿಸಿಲ್ಲ. ಧ್ವಜಸ್ತಂಬ ತೆರವು ಮಾಡುವ ವೇಳೆ ಅವರು ಯಾವುದೇ ಜವಾಬ್ದಾರಿ ವಹಿಸಿಲ್ಲ. ವಸತಿ ನಿಲಯದ ಸಮಸ್ಯೆಗಳ ಕುರಿತು ಮೇಲಾ ಧಿಕಾರಿ ಗಮನಕ್ಕೆ ತರಬೇಕಿತ್ತು. ಆದರೆ ಅದನ್ನು ಮಾಡದೇ ನಿರ್ಲಕ್ಷé ವಹಿಸಲಾಗಿದೆ.

ತಾಲೂಕಾಧಿಕಾರಿ ನಿರ್ಲಕ್ಞ್ಯ: ತಾಲೂಕು ಅಧಿಕಾರಿ ಪ್ರತಿ ತಿಂಗಳು ಒಂದು ಬಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಬೇಕು. ಆದರೆ ಅದರ ಬಗ್ಗೆ ಅವರು ಕಾಳಜಿ ವಹಿಸಿಲ್ಲ. ಕನಿಷ್ಟ ವರ್ಷಕ್ಕೆ ಒಂದು ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ವರದಿ ಮಾಡಿ, ಜೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ವಸತಿ ನಿಲಯದ ಮುಂದಿರುವ ವಿದ್ಯುತ್‌ ತಂತಿಗೆ ಪೈಪ್‌ ಅಳವಡಿಕೆ ಮಾಡಿಸಬಹುದಿತ್ತು. ಅವರು ನಿರ್ಲಕ್ಷé ವಹಿಸಿದ್ದು ಇಲ್ಲಿ ಕಂಡು ಬಂದಿದೆ. ಇನ್ನೂ ಜಿಲ್ಲಾಮಟ್ಟದ ಅಧಿಕಾರಿಯು ತಾಲೂಕು ಅಧಿ ಕಾರಿಯ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಬಹುದಿತ್ತು. ವಸತಿ ನಿಲಯವು ನಗರದಲ್ಲೇ ಇದ್ದರೂ ಜಿಲ್ಲಾಮಟ್ಟದ ಅಧಿ ಕಾರಿ ವಸತಿ ನಿಲಯಕ್ಕೆ ಭೇಟಿ ನೀಡದೇ ಇರುವುದು ಇಲ್ಲಿ ಎದ್ದು ಕಾಣುತ್ತಿದೆ.

ಜೆಸ್ಕಾಂ ನಿರ್ಲಕ್ಷ್ಯ: ವಸತಿ ನಿಲಯದ ಮುಂದೆ ಹಾದು ಹೋಗಿರುವ ವಿದ್ಯುತ್‌ ಲೈನ್‌ಗೆ ಮುಂಜಾಗೃತವಾಗಿ ಜನತೆಗೆ ಜಾಗೃತಿ ಮೂಡಿಸುವುದು ಜೆಸ್ಕಾಂ ಕೆಲಸ. ಒಂದು ವೇಳೆ ಕಟ್ಟಡದ ಮಾಲೀಕ ನಿರ್ಲಕ್ಷé ವಹಿಸಿದ್ದರೆ

ಆ ಕಟ್ಟಡಕ್ಕೆ ವಿದ್ಯುತ್‌ ಕಡಿತ ಮಾಡಬಹುದಿತ್ತು. ವಸತಿ ನಿಲಯದ ಮುಂದೆ ಟಿಸಿ ಇದ್ದರೂ ತಂತಿಗಳಿಗೆ ಪೈಪ್‌ ಅಳವಡಿಕೆ ಮಾಡುವ ಕುರಿತಂತೆ ಯಾವುದೇ ಸೂಚನೆ ನೀಡದೇ ಇರುವುದು ಅವರ ನಿರ್ಲಕ್ಷ್ಯವೂ ಇಲ್ಲಿ ಕಂಡು ಬಂದಿದೆ. ಜೊತೆಗೆ ವಿದ್ಯುತ್‌ ಅವಘಡ ನಡೆದಾಗ ಸಾರ್ವಜನಿಕರು ಜೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಕಡಿತ ಮಾಡುವಂತೆ ಸೂಚನೆ ನೀಡುವ ಪ್ರಯತ್ನ ನಡೆಸಿದರೂ ಅದ್ಯಾವುದನ್ನೂ ಗಮನಿಸದೆ ಜೆಸ್ಕಾಂ ಪುನಃ ವಿದ್ಯುತ್‌ ಪೂರೈಕೆ ಮಾಡಿರುವುದು ಇಲ್ಲಿ ನಿರ್ಲಕ್ಷ್ಯ ಕಾರಣವಾಗಿದೆ.

ಪ್ರಮುಖವಾಗಿ ಮೂವರ ನಿರ್ಲಕ್ಷ್ಯ : ಐದು ಇಲಾಖೆಗಳ ವರದಿ ಆಧರಿಸಿ ಎಲ್ಲವನ್ನೂ ಪರಿಶೀಲನೆ ಮಾಡಿ ವಸತಿ ನಿಲಯದ ಮೇಲ್ವಿಚಾರಕ ಹಾಗೂ ತಾಲೂಕು ಮಟ್ಟದ ಅಧಿಕಾರಿ ಸೇರಿದಂತೆ ಜೆಸ್ಕಾಂ ನಿರ್ಲಕ್ಷéದಿಂದ ಈ ಅವಘಡ ಸಂಭವಿಸಿದೆ. ಇವರು

ತಮ್ಮ ಕರ್ತವ್ಯ ನಿರ್ವಹಿಸಿದ್ದರೆ ಇಷ್ಟೆಲ್ಲ ದುರ್ಘ‌ಟನೆ ನಡೆಯುತ್ತಿರಲಿಲ್ಲ ಎಂಬ ಹಲವು ಅಂಶಗಳನ್ನು ಉಲ್ಲೇಖೀಸಿ ವರದಿ ಜಿಲ್ಲಾ ಕಾರಿಗೆ ಸಿ.ಡಿ.ಗೀತಾ ಅವರು ವರದಿ ನೀಡಿದ್ದಾರೆ.

ಟಾಪ್ ನ್ಯೂಸ್

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.