ಸಮ್ಮೇಳನ ಸ್ಮರಣೆ ಕಮಾನು ದುರಸ್ತಿಗೊಳಿಸಿ
Team Udayavani, Sep 23, 2019, 1:23 PM IST
ಗಂಗಾವತಿ: ನಗರದಲ್ಲಿ 2011ರಲ್ಲಿ ಜರುಗಿದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಯಚೂರು ರಸ್ತೆ ವಿದ್ಯಾನಗರದಲ್ಲಿ ಸುಮಾರು 5 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದ ಸ್ವಾಗತ ಕೋರುವ ಕಮಾನು ಬಿದ್ದು ಎರಡು ವರ್ಷ ಕಳೆದರೂ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ನಗರಸಭೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿರುವುದು ಕಂಡು ಬರುತ್ತಿದೆ.
2011ರ ಡಿ. 9, 10 ಮತ್ತು 11ರಂದು ನಗರದಲ್ಲಿ ವಿಜೃಂಭಣೆಯಿಂದ ಜರುಗಿದ 78 ನೇ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಸ್ವಾಗತ ಕೋರಲು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕನಕಗಿರಿ ರಸ್ತೆ ಶರಣಬಸವೇಶ್ವರ ನಗರ ಮತ್ತು ರಾಯಚೂರು ರಸ್ತೆ ವಿದ್ಯಾನಗರದಲ್ಲಿ ಬೃಹತ್ ಗಾತ್ರದ “ಭತ್ತದ ನಾಡು ಗಂಗಾವತಿಗೆ ಸ್ವಾಗತ’ ಎಂದು ಬರೆದ ಕಮಾನು ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿತ್ತು.
ಶರಣಬಸವೇಶ್ವರ ನಗರದಲ್ಲಿರುವ ಕಮಾನಿಗೆ ಯಾವುದೇ ಹಾನಿಯಾಗಿಲ್ಲ. ವಿದ್ಯಾನಗರದಲ್ಲಿರುವ ಕಮಾನಿಗೆ ಎರಡು ವರ್ಷಗಳ ಹಿಂದೆ ಬೃಹತ್ ಗಾತ್ರದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಮಾನು ಸಂಪೂರ್ಣ ಜಖಂಗೊಂಡು ಮುರಿದು ಬಿದಿದ್ದೆ. ಯಾವ ಪ್ರಾಣ ಹಾನಿಯೂ ಆಗಿಲ್ಲ. ಸ್ಥಳೀಯರು ಕಮಾನ್ ದುರಸ್ತಿ ಮಾಡಿಸುವಂತೆ ಹಲವು ಭಾರಿ ಶಾಸಕರು, ಸಂಸದರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ದೇಶದಲ್ಲಿ ಗಂಗಾವತಿ ಭತ್ತದ ನಾಡು ಹಾಗೂ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಸೇರಿ ಹತ್ತು ಹಲವು ಪ್ರವಾಸಿ ತಾಣಗಳ ಮೂಲಕ ಖ್ಯಾತಿ ಪಡೆದಿದ್ದು, ಪ್ರತಿವಾರ ಹೈದ್ರಾಬಾದ್ ಹಾಗೂ ಇತರೆ ನಗರಗಳಿಂದ ರಾಯಚೂರು ಮಾರ್ಗದ ಮೂಲಕ ಸಾವಿರಾರು ಜನ ಗಂಗಾವತಿಗೆ ಆಗಮಿಸುವುದರಿಂದ ಪ್ರವಾಸಿಗರನ್ನು ಸ್ವಾಗತ ಕೋರಲು ಕಮಾನು ಅಗತ್ಯವಿದ್ದು, 78ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ವಿಜೃಂಭಣೆಯಿಂದ ನೆರವೇರಿಸಿದ ಕೀರ್ತಿ ಸಮಸ್ತ ಗಂಗಾವತಿ ಹಾಗೂ ಸುತ್ತಲಿನ ಊರುಗಳ ಜನರಿಗೆ ಸಲ್ಲುತ್ತದೆ. ಇಂತಹ ಸವಿ ನೆನಪು ಇರುವ ಸಮ್ಮೇಳನದ ಸಂದರ್ಭದಲ್ಲಿ ನಿರ್ಮಿಸಿದ್ದ ಸ್ವಾಗತ ಕಮಾನು ಇರುವುದು ಎಲ್ಲರಿಗೂ ಪ್ರತಿಷ್ಠೆಯ ಸಂಗತಿಯಾಗದ್ದು, ಕೂಡಲೇ ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳು ಹಾಗೂ ನಗರಸಭೆ ಆಡಳಿತ ಮಂಡಳಿಯವರು ಅಗತ್ಯ ಹಣ ನೀಡುವ ಮೂಲಕ ದುರಸ್ತಿ ಮಾಡಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು