ಸಿದ್ದರಾಮಯ್ಯ ಕಪಿಮುಷ್ಠಿಯಲ್ಲಿ ಕಾಂಗ್ರೆಸ್: ರಮೇಶ್ ವಾಗ್ಧಾಳಿ
Team Udayavani, Sep 29, 2019, 3:05 AM IST
ಬೆಳಗಾವಿ: ಒಬ್ಬರ ಕಪಿಮುಷ್ಠಿಯಲ್ಲಿಯೇ ಕಾಂಗ್ರೆಸ್ ಇದ್ದರೆ ಅವನತಿ ಖಚಿತ. ಇದು ಹೀಗೆಯೇ ಮುಂದು ವರಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 30 ಶಾಸಕರೂ ಆಯ್ಕೆ ಆಗುವುದಿಲ್ಲ ಎಂದು ಗೋಕಾಕ್ನ ಅನರ್ಹ ಶಾಸಕ ರಮೇಶ ಜಾರಕಿ ಹೊಳಿ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ಗೆ ವಲಸೆ ಬಂದಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಪಕ್ಷ ನಿರ್ನಾಮ ಮಾಡಲು ಹೊರಟಿದ್ದಾರೆ. ಅವರಿಗಿಂತ 20 ವರ್ಷ ಮುಂಚೆ ಪಕ್ಷದಲ್ಲಿದ್ದುಕೊಂಡು ಬೆಳೆಸಿದ್ದೇವೆ. ಈಗ ಬಂದವರಿಂದ ಪಕ್ಷ ಬೆಳವಣಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.
ನಾಯಕರೆನಿಸಿಕೊಂಡವರಿಗೆ ನಾಯಕತ್ವ ಗುಣ ಇರಬೇಕು. ಕಾಂಗ್ರೆಸ್ನಲ್ಲಿ ಭಿನ್ನಮತ ಇದ್ದಾಗ ಒಂದೇ ಒಂದು ದಿನ ಸಿದ್ದರಾಮಯ್ಯ ನಮಗೆ ಹಿರಿಯರಾಗಿ ತಿಳಿ ಹೇಳಿಲ್ಲ. ಒಂದು ಮಾತು ಅವರು ಹೇಳಿದ್ದರೆ ಈಗಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು. ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕ ರಿಂದಲೇ ದೋಸ್ತಿ ಸರ್ಕಾರ ಪತನವಾಗಿದೆ. ಸರ್ಕಾರ ಬೀಳಿಸಿದ್ದು ನಾವಲ್ಲ ಎಂದು ಸ್ಪಷ್ಟಪಡಿಸಿದರು.
ವೇಣುಗೋಪಾಲ ಬೇಕಾರ್: ವೇಣು ಗೋಪಾಲ ಅಂತಹ ಬೇಕಾರ್ (ಕೆಲಸಕ್ಕೆ ಬಾರದವರು) ಮನುಷ್ಯ ಯಾರೂ ಇಲ್ಲ. ಮಾಣಿಕ ಠಾಕೂರ್ ಅವರಿಗೆ ಉಸ್ತುವಾರಿ ಕೊಟ್ಟಿದ್ದರೆ ಪಕ್ಷ ಇನ್ನಷ್ಟು ಬೆಳೆಯುತ್ತಿತ್ತು. ವೇಣುಗೋಪಾಲಗೆ ಉಸ್ತುವಾರಿ ಕೊಟ್ಟಿದ್ದರಿಂದ ಪಕ್ಷ ಹಾಳಾಗಿ ಹೋಗುತ್ತಿದೆ ಎಂದು ಆಪಾದಿಸಿದರು. ಸುಪ್ರೀಂ ತೀರ್ಪಿಗಾಗಿ ಕಾಯುತ್ತಿದ್ದೇವೆ. ಯಾವಾಗ ಚುನಾವಣೆ ನಡೆದರೂ ಸಿದ್ಧ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ