ಕುಳಂಜೆ ಗ್ರಾಮದ ನಿವಾಸಿಗಳಿಗೆ ನದಿ ದಾಟುವ ಸಂಕಷ್ಟ

ತಡೆಬೇಲಿಯಿಲ್ಲದ ಮುಳುಗು ಸೇತುವೆ

Team Udayavani, Oct 7, 2019, 5:44 AM IST

0610KDLM7PH1

ಕುಂದಾಪುರ: ಶಂಕರ ನಾರಾಯಣ ಸಮೀಪದ ಕುಳಂಜೆ ಗ್ರಾಮದ ಶಿಂಗಿನಕೋಡ್ಲು – ಭರತ್ಕಲ್‌ ಎಂಬಲ್ಲಿ ವಾರಾಹಿ ನದಿಗೆ ನಿರ್ಮಿಸಿದ ಮುಳುಗು ಸೇತುವೆ ತಡೆಬೇಲಿಯಿಲ್ಲದೇ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡಿದೆ. ನದಿ ದಾಟುವ ಆತಂಕ ಸದಾ ಇದ್ದೇ ಇದೆ. ಇದಕ್ಕಾಗಿ ಜನ ಸುತ್ತು ಬಳಸುವ ದಾರಿ ಉಪಯೋಗಿಸುತ್ತಿದ್ದಾರೆ.

ಭರತ್ಕಲ್‌ನಲ್ಲಿ ವಾರಾಹಿ ಬಲ ದಂಡೆ 19ನೆ ಕಿ.ಮೀ.ನಲ್ಲಿ ಮೇಲ್ಸೇತುವೆ ವಾರಾಹಿ ಎಡ ದಂಡೆಗೆ ಸಂಪರ್ಕ ಸಾಧಿಸಿದ್ದು ಭರತ್ಕಲ್‌ ಎಂಬ ಈ ಪ್ರದೇಶದಲ್ಲಿ. ಇಲ್ಲಿ ಅಂದು ಮೇಲ್ಸೇತುವೆ ಕೆಳಗಡೆ ನೀರಾವರಿ ಇಲಾಖೆಯವರು ಸ್ಥಳೀಯರ ಆರೋಪದಂತೆ ಅವೈಜ್ಞಾನಿಕವಾಗಿ ಮುಳುಗೇಳುವ  ಸೇತುವೆ ಮಾಡಿದ್ದಾರೆ. ವಾರಾಹಿ ನದಿ ನೀರಿನ ಮಟ್ಟಕ್ಕೆ ಯಾವುದೇ ತಡೆಬೇಲಿ (ಸೇಫ್‌ ಗಾರ್ಡ್‌) ಇಲ್ಲದೆ ನಿರ್ಮಿಸಿದ ಕಾರಣದಿಂದ ಕುಳಂಜೆ ಗ್ರಾಮದ 1ನೆ ವಾರ್ಡ್‌ ಜನರು ಮಳೆ ಇಲ್ಲದ ಸಮಯ, ಅಪಾಯವನ್ನು ಮೈ ಮೇಲೆ ಹಾಕಿಕೊಂಡು ದಾಟಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಸುತ್ತಿ ಬಳಸಿ ತಮ್ಮ ದೈನಂದಿನ ಕೆಲಸಗಳಾದ ಪಂಚಾಯತ್‌ ಕಚೇರಿ ಕೆಲಸ, ಸಹಕಾರಿ ಸಂಘ, ಪಶು ಆಸ್ಪತ್ರೆ, ಪೊಲೀಸ್‌ ಠಾಣೆ, ಅರಣ್ಯ ಇಲಾಖೆ, ಮೆಸ್ಕಾಂಗೆ ಬರಬೇಕಿದೆ. ಇತ್ತೀಚೆಗಂತೂ ಸೇತುವೆಯನ್ನು ಬೆಸೆಯುವ ಕೂಡು ಮಣ್ಣು ರಸ್ತೆಯು ಮಳೆ ನೀರ ರಭಸಕ್ಕೆ ಕೊಚ್ಚಿ ಹೋಗಿದೆ.

ಯಾರಿಗೆಲ್ಲ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಗೆ ಶಂಕರನಾರಾಯಣ ಹಾಗೂ ಕುಳಂಜೆ ಎಂಬ ಎರಡು ಗ್ರಾಮಗಳು ಸೇರಿ ಒಂದು ಪಂಚಾಯತ್‌ ಆಗಿದೆ. ಕುಳಂಜೆ ಗ್ರಾಮದ 1ನೆ ವಾರ್ಡಿನ ಸುಮಾರು 20 ರಿಂದ 30 ಮನೆಗಳಿರುವ ಮಾವಿನಕೋಡ್ಲು, ಹೆಗ್ಗೊàಡ್ಲು, ಬಾಗಿಮನೆ, ಮಾಂಜುರು, ಭರತ್ಕಲ್‌ ಪ್ರದೇಶವು ಶಂಕರನಾರಾಯಣ ಗ್ರಾಮ ಪಂಚಾಯತ್‌ ಕೇಂದ್ರ ಸ್ಥಳದಿಂದ ಕೇವಲ 1.5 ಕಿ.ಮೀ.ನಿಂದ 2 ಕಿ.ಮೀ. ದೂರದಲ್ಲಿದೆ. ಮಧ್ಯದಲ್ಲಿ ವಾರಾಹಿ ನದಿ ಶಿಂಗಿನಕೋಡ್ಲು – ಭರತ್ಕಲ್‌ ಎಂಬಲ್ಲಿ ಅಡ್ಡ ಬಂದಿರುವುದರಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ 76- ಹಾಲಾಡಿ ಮತ್ತು 28- ಹಾಲಾಡಿ ಗ್ರಾಮಗಳನ್ನು ಸುತ್ತಿ 8- 10 ಕಿ.ಮೀ. ಸುತ್ತಿ ಹಾಲಾಡಿ ಪೇಟೆಗೆ ಬಂದು ತಮ್ಮ ಗ್ರಾಮ ಪಂಚಾಯತ್‌ ಕೇಂದ್ರ ಸ್ಥಳ ಶಂಕರನಾರಾಯಣಕ್ಕೆ ಬರಬೇಕಾಗಿದೆ. ಜನರಿಗಷ್ಟೇ ಅಲ್ಲ ಜಾನುವಾರುಗಳಿಗೂ ತೊಂದರೆ. ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಲು ಕಷ್ಟಪಡಲೇ ಬೇಕು.

ಉಡುಪಿ ನಗರಕ್ಕೆ ಇಲ್ಲಿಂದಲೇ ಕುಡಿಯುವ ನೀರು
ಇಲ್ಲಿನ ಜನರಿಗೆ ನದಿ ದಾಟಲು ಸರಿಯಾದ ವ್ಯವಸ್ಥೆ ಇಲ್ಲದೆ ಇದ್ದರೂ ಇಲ್ಲಿನ ಭರತ್ಕಲ್‌ ಎಂಬಲ್ಲಿಂದ 170 ಕೋ. ರೂ. ಶುದ್ಧ ಕುಡಿಯುವ ನೀರು ಉಡುಪಿ ನಗರಕ್ಕೆ ಒಂದೆರಡು ವರ್ಷದಲ್ಲೇ ಹೋಗುತ್ತದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿದೆ ಎಂದು ಈ ಭಾಗದ ಜನರು ಹೆಮ್ಮೆಯಿಂದ ಹೇಳುತ್ತಾರೆ.

ಕ್ರಮ ಕೈಗೊಳ್ಳಲಾಗುವುದು
ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮುಳುಗು ಸೇತುವೆಗೆ ಎರಡೂ ಬದಿ ತಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.