ಉಪ್ಪಿನಂಗಡಿ: ಗ್ರಾ.ಪಂ. ಆವರಣಗೋಡೆ ನಿರ್ಮಾಣಕ್ಕೆ ಕಂದಾಯ ಇಲಾಖೆ ತಡೆ
Team Udayavani, Oct 7, 2019, 5:23 AM IST
ಉಪ್ಪಿನಂಗಡಿ : ಕಂದಾಯ ಇಲಾಖೆ ನಿವೇಶನಕ್ಕೆ ಆವರಣ ಗೋಡೆ ಕಟ್ಟಲು ಆರಂಭಿಸಿದ ಹೊತ್ತಲ್ಲೇ ಕಂದಾಯ ನಿರೀಕ್ಷಕ ಜಯವಿಕ್ರಮ ಪೊಲೀಸರ ಸಹಕಾರದಿಂದ ಕಾಮಗಾರಿ ನಿಲ್ಲಿಸಿದ್ದಾರೆ.
ಇಲ್ಲಿನ ಬಸ್ ನಿಲ್ದಾಣ ಸಮೀಪ ಕಂದಾಯ ನಿರೀಕ್ಷಕರ ಕಚೇರಿ ಹಾಗೂ ವಸತಿಗೃಹಗಳು ಇದ್ದು, ಉಳಿದ ನಿವೇಶನ ಖಾಲಿ ಬಿದ್ದುಕೊಂಡಿತ್ತು. ಸ್ಥಳೀಯ ಪಂಚಾಯತ್ ಈ ನಿವೇಶನಕ್ಕೆ ಆವರಣ ಗೋಡೆ ರಚಿಸಲು ಕೆಲವು ಸಮಯದಿಂದ ಯೋಜನೆ ರೂಪಿಸಿಕೊಂಡಿತ್ತು.
ಠಾಣೆಗೆ ದೂರು
ಇದನ್ನರಿತ ಸ್ಥಳೀಯರು ಪುತ್ತೂರು ಸಹಾಯಕ ಆಯುಕ್ತರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಅವರು ಕಂದಾಯ ನಿರೀಕ್ಷಕರಿಗೆ ಕರೆ ಮಾಡಿ, ಠಾಣೆಗೆ ದೂರು ನೀಡಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಕಂದಾಯ ನಿವೇಶನ ಪಕ್ಕದಲ್ಲೇ ಸಾರ್ವಜನಿಕ ಗ್ರಂಥಾಲಯವಿದ್ದು, ಈ ಪ್ರದೇಶ ಮಲ-ಮೂತ್ರ ವಿಸರ್ಜನೆಯಿಂದ ಮಲಿನವಾಗುತ್ತಿದೆ ಎಂದು ಗ್ರಂಥಪಾಲಕರ ದೂರಿನ ಮೇರೆಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಕಂದಾಯ ಇಲಾಖೆ ನಿವೇಶನಕ್ಕೆ ಹಾಗೂ ಗ್ರಂಥಾಲಯಕ್ಕೆ ಪ್ರತ್ಯೇಕ ಆವರಣ ಗೋಡೆ ರಚಿಸುವ ಮೂಲಕ ಮಲಿನವನ್ನು ತಡೆಗಟ್ಟುವ ಅಭಿಪ್ರಾಯದಂತೆ ನಿರ್ಣಯ ಅಂಗೀಕಾರವಾಗಿತ್ತು. ಪಂಚಾಯತ್ಗೆ ಸೇರಿದ ವಸತಿಗೃಹಗಳು ಇದಕ್ಕೆ ಹೊಂದಿ ಕೊಂಡಿವೆ. ಅದರಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ನಿರ್ಣಯ ಕಳುಹಿಸಿಕೊಟ್ಟು ಆವರಣ ಗೋಡೆ ನಿರ್ಮಾಣಕ್ಕೆ ಲಿಖೀತ ಅನುಮತಿ ಪಡೆದ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ